ಹೊನ್ನಾಳಿ:
ಇಲ್ಲಿನ ತುಂಗಭದ್ರಾ ನದಿಯಲ್ಲಿ ಗುರುವಾರ ಮೀನುಗಾರರ ಬಲೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಕೊಕ್ಕರೆಗೆ ಪಶುವೈದ್ಯರಿಂದ ಚಿಕಿತ್ಸೆ ಕೊಡಿಸಿ, ಆರೈಕೆ ಮಾಡಿ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿರುವ ಮೂಲಕ ಮಾನವೀಯತೆ ಮೆರೆದಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೇಬಲ್ ನಿರ್ವಾಹಕ ಬೀರಪ್ಪ ಪಕ್ಷಿಗೆ ಆರೈಕೆ ಮಾಡಿರುವ ವ್ಯಕ್ತಿ. ಗುರುವಾರ ತುಂಗಭದ್ರಾ ನದಿಯಲ್ಲಿ ಮೀನುಗಾರರು ಮೀನು ಹಿಡಿಯುವ ಸಂದರ್ಭದಲ್ಲಿ ಕೊಕ್ಕರೆ ಬಲೆಗೆ ಸಿಲುಕಿದೆ. ಆ ಸಂದರ್ಭದಲ್ಲಿ ಹೊಳೆ ಬಳಿ ಇದ್ದ ಕೇಬಲ್ ನಿರ್ವಾಹಕ ಬೀರಪ್ಪ ಗಾಯಗೊಂಡ ಪಕ್ಷಿಯನ್ನು ಗಮನಿಸಿ ಆರೈಕೆಗೆ ಮುಂದಾಗಿದ್ದಾರೆ. ಚಿಕಿತ್ಸೆ ಕೊಡಿಸಿದ ಬಳಿಕ ಪಕ್ಷಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
