ಶಿರಾ:
ಜಮೀನಿನಲ್ಲಿ ಹಾದು ಹೋಗಿದ್ದ ವಿದ್ಯುತ್ತಂತಿಯೊಂದು ಮುರಿದು ಬಿದ್ದ ಪರಿಣಾಮ ಬೆಂಕಿ ಹತ್ತಿಕೊಂಡು ಜಮೀನನಲ್ಲಿದ್ದ ಅನೇಕ ಬೆಳೆಗಳು ನಷ್ಟಗೊಂಡ ಘಟನೆ ತಾಲ್ಲೂಕಿನ ಪಂಜಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.ಪಂಜಿಗಾನಹಳ್ಳಿಯ ದಯಾನಂದಸಾಗರ್ ಎಂಬ ರೈತರ ಜಮೀನನಲ್ಲಿ ವಿದ್ಯುತ್ ತಂತಿಯೊಂದು ಹೊಲದ ನಡುವೆ ಹಾದು ಹೋಗಿದ್ದು ಗುರುವಾರ ಬೆಬೆಳಿಗ್ಗೆ ಸದರಿ ತಂತಿಯು ಏಕಾಏಕಿ ಮುರಿದು ಬಿದ್ದಿದೆ. ಇದರಿಂದ ಬೆಂಕಿ ಉಂಟಾಗಿ ಹೊಲದಲ್ಲಿದ್ದ ಹೆಬ್ಬೇವಿನ ಮರಗಳು, ಬೇವಿನ ಮರ ಸೇರಿದಂತೆ ವಿವಿಧ ಬೆಲೆ ಬಾಳುವ ಬೆಳೆಗಳು ನಾಶಗೊಂಡಿದ್ದು ನಷ್ಟ ಉಂಟಾಗಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂಧಿ ಸ್ಥಳಕ್ಕೆ ಬಮದು ಬೆಂಕಿ ನಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
