ಬಲಿಗಾಗಿ ಕಾದಿರುವ ವಿದ್ಯುತ್ ಕಂಬ

ಎಂ ಎನ್ ಕೋಟೆ :

     ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗ್ರಾಮದಲ್ಲಿ ಸುಮಾರು ವರ್ಷಗಳಿಂದ ವಿದ್ಯುತ್ ಕಂಬ ಶೀಥಿಲವಾಗಿದ್ದರೂ ಸಹ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ. ಸುಮಾರು ಮನೆಗಳು ಈ ವಿದ್ಯುತ್ ಕಂಬದ ಪಕ್ಕದಲ್ಲಿವೆ ಹಿಗಿದ್ದರೂ ಸಹ ಬೆಸ್ಕಾಂ ಅಧಿಕಾರಿಗಳು ಬೇಜವಾಬ್ದಾರಿ ತೂರಿದ್ದಾರೆ. ಎಂದು ತ್ಯಾಗಟೂರು ಗ್ರಾಮಸ್ಥರು ಆರೋಪಿಸಿದ್ದಾರೆ.

     ಗ್ರಾಮದ ಮುಖಂಡ ಸಿದ್ದರಾಮಣ್ಣ ಮಾತನಾಡಿ ಶೀಥಿಲಗೊಂಡಿರುವ ವಿದ್ಯುತ್ ಕಂಬ ಬೀಳುವ ಹಂತದಲ್ಲಿದೆ . ವಿದ್ಯುತ್ ಕಂಬ ಪಕ್ಕದಲ್ಲಿಯೇ ಸುಮಾರು ಮನೆಗಳು ಇವೆ ಆದ್ದರಿಂದ ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಸಹ ಪ್ರಯೋಜನವಾಗಿಲ್ಲ ವಿದ್ಯುತ್ ಕಂಬ ತುಂಬಾ ಹಳೆಯಾದಾಗಿದೆ . ಈಗಾಗಲೇ ಸುಮಾರು ಭಾರಿ ಮನವಿ ಸಲ್ಲಿಸಿದರೂ ಸಹ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷವಹಿಸುತ್ತಿದ್ದಾರೆ . ಈ ಕಂಬ ಬಿದ್ದರೆ ಸುಮಾರು ಮನೆಗಳ ಬೀಳುತ್ತದೆ .ಆದ್ದರಿಂದ ಮುಂದಾಗುವ ಅನಾಹುತವನ್ನು ಸಂಭವಿಸುವ ಮುನ್ನವೇ ಅರಿತು ಅಧಿಕಾರಿಗಳು ಎಚ್ಚೆತ್ತೊಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೆವೆ ಎಂದು ಎಚ್ಚರಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap