ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗ್ರಾಮದಲ್ಲಿ ಸುಮಾರು ವರ್ಷಗಳಿಂದ ವಿದ್ಯುತ್ ಕಂಬ ಶೀಥಿಲವಾಗಿದ್ದರೂ ಸಹ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷವಹಿಸಿದ್ದಾರೆ. ಸುಮಾರು ಮನೆಗಳು ಈ ವಿದ್ಯುತ್ ಕಂಬದ ಪಕ್ಕದಲ್ಲಿವೆ ಹಿಗಿದ್ದರೂ ಸಹ ಬೆಸ್ಕಾಂ ಅಧಿಕಾರಿಗಳು ಬೇಜವಾಬ್ದಾರಿ ತೂರಿದ್ದಾರೆ. ಎಂದು ತ್ಯಾಗಟೂರು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಮುಖಂಡ ಸಿದ್ದರಾಮಣ್ಣ ಮಾತನಾಡಿ ಶೀಥಿಲಗೊಂಡಿರುವ ವಿದ್ಯುತ್ ಕಂಬ ಬೀಳುವ ಹಂತದಲ್ಲಿದೆ . ವಿದ್ಯುತ್ ಕಂಬ ಪಕ್ಕದಲ್ಲಿಯೇ ಸುಮಾರು ಮನೆಗಳು ಇವೆ ಆದ್ದರಿಂದ ಸಂಬಂಧಪಟ್ಟ ಬೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಸಹ ಪ್ರಯೋಜನವಾಗಿಲ್ಲ ವಿದ್ಯುತ್ ಕಂಬ ತುಂಬಾ ಹಳೆಯಾದಾಗಿದೆ . ಈಗಾಗಲೇ ಸುಮಾರು ಭಾರಿ ಮನವಿ ಸಲ್ಲಿಸಿದರೂ ಸಹ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷವಹಿಸುತ್ತಿದ್ದಾರೆ . ಈ ಕಂಬ ಬಿದ್ದರೆ ಸುಮಾರು ಮನೆಗಳ ಬೀಳುತ್ತದೆ .ಆದ್ದರಿಂದ ಮುಂದಾಗುವ ಅನಾಹುತವನ್ನು ಸಂಭವಿಸುವ ಮುನ್ನವೇ ಅರಿತು ಅಧಿಕಾರಿಗಳು ಎಚ್ಚೆತ್ತೊಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೆವೆ ಎಂದು ಎಚ್ಚರಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/mn-kote-news-1.gif)