ಕುತೂಹಲ ನಿವಾರಿಸಿಕೊಂಡ ಯುವ ಮತದಾರರು

ದಾವಣಗೆರೆ:

      ಮತದಾನ ಹೇಗೆ ಮಾಡಬೇಕೆಂಬ ಕುತೂಹಲವಿದ್ದ, ಯುವ ಮತದಾರರು ಮೊದಲ ಬಾರಿಗೆ ಮತಗಟ್ಟೆ ಕೆಂದ್ರಗಳಿಗೆ ಉತ್ಸಾಹದಿಂದ ಬಂದು ತಮ್ಮ ಮತ ಚಲಾಯಿಸಿದರು.

      ದೊಡ್ಡಬಾತಿಯ ಮತಗಟ್ಟೆಗೆ ಮೊದಲ ಬಾರಿಗೆ ಮತಚಲಾಯಿಸಲು ಬಂದ ದಾವಣಗೆರೆಯ ಜೈನ್ ತಾಂತ್ರಿಕ ವಿದ್ಯಾಲಯದಲ್ಲಿ ಬಿಇ ವ್ಯಾಸಂಗ ಮಾಡುತ್ತಿರುವ ಪವಿತ್ರಾ ಆರ್, ಫಸ್ಟ್ ಟೈಮ್ ವೋಟು ಹಾಕುತ್ತಿರುವುದು ನನಗೆ ಬಹಳ ಖುಷಿ ತಂದಿದೆ. ನನ್ನ ಹಕ್ಕು ಚಲಾಯಿಸುವ ಮೂಲಕ ನನಗೆ ಬೇಕಾದ ನಾಯಕನನ್ನು ಆಯ್ಕೆ ಮಾಡಲು ಮತ ನೆರವಾಗಿದೆ ಎಂದರು.

      ಇನ್ನೂ ಅರಸೀಕೆರೆಯ ಶಾಲೆಯಲ್ಲಿ ತೆರೆದಿದ್ದ ಮತಗಟ್ಟೆಗೆ ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲು ಬಂದಿದ್ದ ಶಿವಮೊಗ್ಗದ ಪೆಸಿಟ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿರುವ ಅಪೂರ್ವ, ಸ್ಥಳೀಯ ಕಾಲೇಜಿನಲ್ಲೇ ಬಿಎ ಓದುತ್ತಿರುವ ಎ.ಹೆಚ್.ತೇಜಾ, ಎ.ಹೆಚ್.ಪೂಜಾ ಹಾಗೂ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ಗುರುಬಸವರಾಜ, ಮತದಾನ ಮಾಡುವುದು ಹೇಗೆ, ಮತ ಯಂತ್ರಗಳು (ಇವಿಎಂ) ಹಾಗೂ ಮತ ಖಾತರಿ ಯಂತ್ರ (ವಿವಿ ಪ್ಯಾಟ್) ಹೇಗಿರುತ್ತವೆ ಎಂಬ ಕುತೂಹಲ ಸಹ ನಮ್ಮಲ್ಲಿ ಮನೆ ಮಾಡಿತ್ತು. ಆದರೆ, ಇಂದು ನಮ್ಮ ಹಕ್ಕು ಚಲಾಯಿಸುವ ಮೂಲಕ ನಮ್ಮಲ್ಲಿದ ಕುತೂಹಲವನ್ನು ನಿವಾರಿಸಿಕೊಂಡಿದ್ದೇವೆ ಎಂದು ಹೇಳಿದರು.

       ಸರತಿ ಸಾಲಾಗಿ ನಿಂತು ಇದೇ ಮೊದಲ ಬಾರಿಗೆ ಮತದಾನ ಮಾಡಿದ ಹರಪನಹಳ್ಳಿಯ ಯುವಕ, ಯುವತಿಯರು ಹಕ್ಕು ಚಲಾವಣೆ ಮಾಡಿ ಶಾಯಿ ಹಚ್ಚಿದ್ದ ಬೆರಳ ಚಿತ್ರ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಸಂಭ್ರಮಪಟ್ಟರು. ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 105 ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ವಿದ್ಯಾರ್ಥಿಗಳಾದ ರಂಜಿತಾ, ಸ್ಪಂದನ, ಮಹೇಂದ್ರ ಮತ್ತು ಹೃತಿಕ್ ಮೊದಲ ಬಾರಿಗೆ ಮತ ಚಲಾವಣೆ ಮಾಡಿದರು.

        ನಂತರ ಮಾತನಾಡಿದ ಅವರು `ಮೊದಲ ಬಾರಿಗೆ ಮತ ಹಾಕಿದ್ದು ನಮಗೆ ಬಹಳ ಖುಷಿ ತಂದಿದೆ. ನಮ್ಮ ದೇಶದಲ್ಲಿ ಮತದಾನದ ಹಕ್ಕು ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮೊದಲು ನಮನ ಸಲ್ಲಿಸುತ್ತೇನೆ. ಸಾಮಾಜಿಕ ಬದ್ಧತೆ, ಸದೃಢ ಸರ್ಕಾರಕ್ಕಾಗಿ ನಾನು ಮತದಾನ ಮಾಡಿದ್ದೇನೆ. ಇದೇ ಗುರಿಯೊಂದಿಗೆ ಮುಂದೆಯೂ ನನ್ನ ಹಕ್ಕು ಚಲಾಯಿಸುತ್ತೇನೆ. ಸದೃಢ ಸರ್ಕಾರ ಮತ್ತು ಸದೃಢ ಭಾರತ ನಿರ್ಮಾಣ ಮಾಡಲು ನಾವೆಲ್ಲ ನಮ್ಮ ಮತದಾನ ಮಾಡಿ ಹಕ್ಕು ಚಲಾಯಿಸಬೇಕು ಎಂದರು.ಎಂ.ಎಸ್ಸಿ ವಿದ್ಯಾರ್ಥಿನಿ ರಂಜಿತಾ ಮಾತನಾಡಿ “ಜಗತ್ತಿನಲ್ಲಿ ಶ್ರೇಷ್ಠ ಸಂವಿಧಾನ ಹೊಂದಿರುವ ಭಾರತ ಇಲ್ಲಿ ನನ್ನ ಹಕ್ಕನ್ನು ಚಲಾಯಿಸಲು ಸಂತೋಷವಾಗುತ್ತಿದೆ.” ಎಂದರು.

       ನನ್ನ ಹಕ್ಕನ್ನು ಚಲಾಯಿಸಲು ನಾನು ಬೆಂಗಳೂರಿನಿಂದ ಬಂದಿರುವೆ “ಸದೃಢ ಸರ್ಕಾರ ಮತ್ತು ಸದೃಢ ಭಾರತ ನಿರ್ಮಾಣ ಮಾಡಲು ನಾವೆಲ್ಲ ನಮ್ಮ ಮತದಾನ ಮಾಡಿ ಹಕ್ಕು ಚಲಾಯಿಸಬೇಕು.” ಎಂದು ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಹೆಚ್.ಹೃತಿಕ್ ಅಭಿಪ್ರಾಯ ಪಟ್ಟರು.ದಾವಣಗೆರೆ ತಾಲ್ಲೂಕಿನ ಆಲೂರು ಹಟ್ಟಿ ಗ್ರಾಮದಲ್ಲಿ ಮತದಾನ ಮಾಡಿದ ಯುವಸಮೂಹ ಹಕ್ಕು ಚಲಾಯಿಸಿದ ಬಗ್ಗೆ ಸಡಗರ ವ್ಯಕ್ತಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link