ಹೊಸದುರ್ಗ
ತಾಲ್ಲೂಕಿನ ಕೆಲ್ಲೋಡು ಬಳಿಯಿರುವ ವೇದಾವತಿ ನದಿಯ ಬ್ಯಾರೇಜ್ ಮತ್ತು ಸೈಡ್ ವಾಲ್ ಹೊಡೆದು ಹೋಗಿರುವುದನ್ನು ಜಿಲ್ಲೆಯ ಜಿಲ್ಲಾಧಿಕಾರಿ ದಿಡೀರ್ ಭೇಟಿ ನೀಡಿ ವೀಕ್ಷಿಸಿದರು.ಕೆಲ್ಲೋಡು ಸೇತುವೆ ಶಾಶ್ವತ ಅಭಿವೃದ್ಧಿಗೆ 50 ಲಕ್ಷ ರು ಎಸ್ಟಿಮೆಂಟ್ ಗಳಂತೆ 8 ಕೋಟಿ ಅನುದಾನವನ್ನು ಮಂಜೂರು ಮಾಡಲು ಕಳಿಸಿದ್ದೇವೆ ಎಂದು ಪುರಸಭೆ ಮುಖ್ಯಾಧಿಕಾರಿ ಉಮೇಶ್ ಅವರು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಅವರಿಗೆ ತಿಳಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಬಿಡುಗಡೆಯಾಗಲಿರುವವ 8 ಕೋಟಿ ಅನುದಾನವನ್ನು 50 ಲಕ್ಷ ರು ಗಳಂತೆ ಕಳುಹಿಸುವ ಬದಲಾಗಿ ಒಂದೇ ಎಸ್ಟಿಮೆಂಟ್ ಪ್ರಪೋಜಲ್ ಕಳುಹಿಸಿ ಸರ್ಕಾರಕ್ಕೆ ಕಳಿಸಿಕೊಡುತ್ತೇವೆ ಎಂದು ಸೂಚಿಸಿದರು.
ನೆರೆ ಸಂತ್ರಸ್ತರಿಗೆ ಹಾಗೂ ತೋಟಗಳು ಕಳೆದುಕೊಂಡವರಿಗೆ ಈಗಾಗಲೇ ಲಭ್ಯವಿರುವ ಅನುದಾನ ಬಂದಿರುತ್ತದೆ. ಸರ್ಕಾರದಿಂದ ಇನ್ನೂ ಹೆಚ್ಚಿನ ರೀತಿಯ ಅನುದಾನಕ್ಕೆ ಮನವಿ ಕೊಡಿ ಎನ್ ಜಿಆರ್ ಸ್ಕೀಂ ಮುಖಾಂತರ ನಿಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಿಕೊಟ್ಟು ಹೆಚ್ಚಿನ ಅನುದಾನ ತರಿಸಿಕೊಡುವ ಕೆಲಸ ಮಾಡುತ್ತೇವೆ ಎಂದು ನೆರೆ ಸಂತ್ರಸ್ತರಿಗೆ ಹೇಳಿದರು.
ಇದೇ ವೇಳೆ ಸಿಇಒ ಸತ್ಯಭಾಮ, ತಹಶೀಲ್ದಾರ್ ತಿಪ್ಪೇಸ್ವಾಮಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಾನಕಿರಾಮ್, ಡಿಎಚ್ಒ ಪಾಲಕ್ಷ ಮೂರ್ತಿ, ಪರಿಸರ ಅಭಿಯಂತರ ತಿಮ್ಮರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪವಿತ್ರ ಇನ್ನು ಉಪಸ್ಥಿತರು ಹಾಜರಿದ್ದರು.