ಸುಮಲತಾಗೆ ಟಾಂಗ್ ನೀಡಿದ ತಮ್ಮಣ್ಣ…!!

ಮಂಡ್ಯ:

      ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅವರು ಕಣ್ಣೀರು ಹಾಕಿ, ಋಣ ಇದೆ ಋಣ ಇದೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ಇಲ್ಲಿಯವರೆಗೂ ಏನು ಋಣ ತೀರಿಸಿದ್ದಾರೆ ಎಂದು ಡಿ.ಸಿ. ತಮ್ಮಣ್ಣ ಟಾಂಗ್ ನೀಡಿದ್ದಾರೆ.

       ಹೊನ್ನಲಗೆರೆಯಲ್ಲಿ ನಡೆದ ಪ್ರಚಾರದ ವೇಳೆ ಮಾತನಾಡಿದ ಡಿಸಿ ತಮ್ಮಣ್ಣ  ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ  9 ತಿಂಗಳಿಗೆ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ನೀಡಿದ್ದಾರೆ. ಜೊತೆಗೆ ಮಂಡ್ಯಕ್ಕೆ ಬಂದು ಶಂಕು ಸ್ಥಾಪನೆ ಕೂಡ ಮಾಡಿದ್ದಾರೆ.

       ಸ್ವತಂತ್ರ ಬಂದ ನಂತರ ಯಾವ ಮುಖ್ಯಮಂತ್ರಿಯೂ ಒಂದು ಜಿಲ್ಲೆಯ ಅಭಿವೃದ್ಧಿಗಾಗಿ ಸಾವಿರ ಕೋಟಿ ಅನುದಾನ ನೀಡಿದ್ದಾರ ತೋರಿಸಿ? ಅಂತಹವರನ್ನು ನೀವು ತೋರಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲೆಸಿದ್ದಾರೆ.

      ರೈತರ ಬಗ್ಗೆ ಯಾರಿಗೆ ಜಾಸ್ತಿ ಕಾಳಜಿ ಇದೆ. ಯಾರಿಗೆ ಇಲ್ಲ ಎಂಬುದನ್ನು ಜಿಲ್ಲೆಯ ಜನ ಅರಿತುಕೊಳ್ಳಬೇಕು. ಈ 70 ವರ್ಷದಲ್ಲಿ ಬಂದ ಎಲ್ಲ ರಾಜಕಾರಣಿಗಳ ಮೇಲು ನಿಮ್ಮ ಋಣ ಇದ್ದೇ ಇದೆ , ಆದರೆ ಋಣ ತೀರಿಸುವವರು ಎಷ್ಟು ಜನರು ಇದ್ದಾರೆ ಹೇಳಿ ನೋಡೊಣ. ಅಂತಹವರಿಗೆಲ್ಲ ನೀವು ತಕ್ಕ ಉತ್ತರ ಕೊಡಬೇಕು ಎಂದು ಡಿಸಿ ತಮ್ಮಣ್ಣ ಹೇಳಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link