ದೇಶ ರಕ್ಷಣೆಗೆ ಮತ್ತೊಮ್ಮೆ ಮೋದೀಜಿ ಅಗತ್ಯವಿದೆ

ಶಿರಾ

        ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುವಂತಹ ಸಮರ್ಥ ನಾಯಕತ್ವ ಗುಣವಿರುವ ಚೌಕಿದಾರ್ ನರೇಂದ್ರ ಮೋದಿಯಿಂದ ಮಾತ್ರ ರಾಷ್ಟ್ರ ರಕ್ಷಣೆ ಸಾಧ್ಯ. ಜಗತ್ತಿನಲ್ಲಿ ಭಾರತ ದೇಶದ ಗೌರವವನ್ನು ಇಮ್ಮಡಿಗೊಳಿಸಿದ ಮೋದೀಜಿ ಮತ್ತೊಮ್ಮೆ ದೇಶಕ್ಕೆ ಅವಶ್ಯಕತೆ ಇದ್ದು, 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬೆಂಬಲಿಸುವಂತೆ ಬಿಜೆಪಿ ಮುಖಂಡ ಚಿದಾನಂದ ಎಂ.ಗೌಡ ಮತದಾರರಿಗೆ ಮನವಿ ಮಾಡಿದರು.

        ಶಿರಾ ತಾಲ್ಲೂಕಿನ ಕರಿದಾಸರಹಳ್ಳಿ, ಚಿಕ್ಕಹುಲಿಕುಂಟೆ ಗ್ರಾಮಗಳಲ್ಲಿ ಶನಿವಾರ ಚಿತ್ರದುರ್ಗ ಲೋಕಸಭಾ ಚುನಾವಣೆಯ ಬಿಜೆಪಿ ಆಭ್ಯರ್ಥಿ ಎ.ನಾರಾಯಣಸ್ವಾಮಿ ಪರ ಅಬ್ಬರದ ಪ್ರಚಾರ ನಡೆಸಿ ಅವರು ಮಾತನಾಡಿದರು.

          ಮಹಿಳೆಯರ ಆರೋಗ್ಯದ ಬಗ್ಗೆ ಕಾಳಜಿ ಹೊಂದಿ ದೇಶದ ಲಕ್ಷಾಂತರ ಕುಟುಂಬಗಳಿಗೆ ನೀಡಿದ ಉಜ್ವಲ್ (ಉಚಿತ ಗ್ಯಾಸ್), ಕಡು ಬಡವರಿಗೆ ಉಚಿತ ಆರೋಗ್ಯ ಸೇವೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಗಳು ಮೋದಿ ಸರ್ಕಾರದ ಮಹತ್ವದ ಕೊಡುಗೆಗಳಾಗಿದ್ದು, ದೇಶ ಭಯೋತ್ಪಾದನೆಯಿಂದ ಮುಕ್ತಿಯಾಗಬೇಕಾದರೆ ಮತ್ತೊಮ್ಮೆ ಮೋದಿ ಪ್ರಧಾನಿಯಾಗುವಂತೆ ಮತದಾರ ಬಿಜೆಪಿ ಪಕ್ಷ ಬೆಂಬಲಿಸಬೇಕೆಂದರು.

          ತುಮಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಆರ್.ಗೌಡ ಮಾತನಾಡಿ, ಕೇಂದ್ರದಲ್ಲಿ 5 ವರ್ಷ ಭ್ರಷ್ಟಾಚಾರ ರಹಿತ, ಸ್ವಚ್ಚ ಆಡಳಿತ ನೀಡಿರುವ ನರೇಂದ್ರ ಮೋದೀಜಿ, ಈ ದೇಶದ ಚೌಕಿದಾರ. 2019 ರ ಲೋಕ ಸಭಾ ಚುನಾವಣೆಯಲ್ಲೂ ಸಹ ಮೋದಿ ಪರ ಅಲೆ ಇದು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

       ಬಿಜೆಪಿ ಮುಖಂಡರಾದ ಬಿ.ಜಿ.ಗೋವಿಂದಪ್ಪ, ಮಾಜಿ ತಾಪಂ ಅಧ್ಯಕ್ಷ ನಿಡಗಟ್ಟೆ ಚಂದ್ರಶೇಖರ್, ಗ್ರಾಪಂ ಉಪಾಧ್ಯಕ್ಷ ಉಮೇಶ್, ಸೀಗಲಹಳ್ಳಿ ರವಿ, ನಾದೂರು ಕುಮಾರ್, ನವೀನ್, ಲಕ್ಷ್ಮೀನಾರಾಯಣ ಸೇರಿದಂತೆ ಹಲವಾರು ಬಿಜೆಪಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap