ಚಳ್ಳಕೆರೆ
ಶೋಷಿತ ಸಮುದಾಯದಲ್ಲಿ ನೆಲೆಯೂರಿದ್ದ ಅಜ್ಞಾನದ ಕತ್ತಲೆಗೆ ಜ್ಞಾನದ ಬೆಳಕನ್ನು ನೀಡುವಲ್ಲಿ ಸಫಲವಾಗಿದ್ದು, 12ನೇ ಶತಮಾನದ ದೇವರದಾಸಿಮಯ್ಯನವರ ವಚನಗಳ ಮೂಲಕ. ದೇವರ ದಾಸಿಮಯ್ಯನವರ ವಚನದಲ್ಲಿ ಧಾರ್ಮಿಕ ವಿಚಾರಗಳ ಅಮೃತಧಾರೆಯೇ ಹರಿದಿತ್ತು. ಅವರ ಸರಳ ವಚನಗಳು ಶೋಷಿತ ಸಮುದಾಯವನ್ನು ಕಂದಾಚಾರಗಳಿಂದ ಹೊರಬರಲು ಸಹಾಯವಾಯಿತು. ಅದ್ದರಿಂದ ದೇವರ ದಾಸಿಮಯ್ಯನವರ ಕೊಡುಗೆಯನ್ನು ಈ ಸಮಾಜ ಸದಾ ನೆನಪಿಸಿಕೊಳ್ಳಬೇಕೆಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಚಂದ್ರಶೇಖರ್ ತಿಳಿಸಿದರು.
ಅವರು, ಬುಧವಾರ ಇಲ್ಲಿನ ತಾಲ್ಲೂಕು ಕಚೇರಿ ಆವರಣದಲ್ಲಿ ದೇವರದಾಸಿಮಯ್ಯ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ದೇವರದಾಸಿಮಯ್ಯನವರ ವಚನಗಳಲ್ಲಿ ಅಡಗಿರುವ ವಿಚಾರಧಾರೆಯನ್ನು ಎಲ್ಲರೂ ಅನುಸರಿಸಬೇಕೆಂದು ಅವರು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ. ದೇವರದಾಸಿಮಯ್ಯನವರನ್ನು ಅಘಾದವಾದ ಜ್ಞಾನ ಭಂಡಾರವೇ ಅಡಗಿತ್ತು. ಅವರು ತಮ್ಮ ಸಂಪೂರ್ಣ ಬದುಕನ್ನು ವಚನ ಸಾಹಿತ್ಯಕ್ಕೆ ಮೀಸಲಿಟ್ಟಿದ್ದು ವಿಶೇಷವೆಂದರು. ಕಾರ್ಯಕ್ರಮದಲ್ಲಿ ಪೌರಾಯುಕ್ತ ಪರಮೇಶ್ವರಪ್ಪ, ಹಿಂದುಳಿದ ವರ್ಗಗಳ ಅಧಿಕಾರಿ ಡಿ.ಟಿ.ಜಗನ್ನಾಥ, ಶಿರಸ್ತೇದಾರ್ ಚಂದ್ರಶೇಖರ್, ಶಿಕ್ಷಕ ಬಸವರಾಜು, ಡಿ.ಶ್ರೀನಿವಾಸ್, ವರುಣ್, ಶಾಂತಮ್ಮ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
