ಚಿಕ್ಕನಾಯಕನಹಳ್ಳಿ
ಎ.ಪಿ.ಎಂ.ಸಿ ಕಾಯ್ದೆ ತಿದ್ದುಪಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ವಿದ್ಯುಚಕ್ತಿ ನೀತಿಯನ್ನು ಜಾರಿಗೆ ತಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ರೈತ ಸಂಘ ಹಾಗೂ ತಾಲ್ಲೂಕಿನ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದವು.ಪಟ್ಟಣದ ಕಂಬಳಿ ಸೊಸೈಟಿಯಿಂದ ತಾಲ್ಲೂಕು ಕಛೇರಿವರೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ನೀತಿಯನ್ನು ವಿರೋಧಿಸಿ ರೈತರು ಜಾಥಾ ನಡೆಸಿದರು.
ಭೂ ಸುಧಾರಣಾ ಕಾಯ್ದೆ ಪ್ರಕಾರ, ರೈತರ ಕಣ್ಣಿಗೆ ಮಣ್ಣು ಎರಚಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿದ್ದವಾಗಿವೆ, ರೈತರ ಬದುಕನ್ನು ರೈತ ವಿರೋಧಿ ನೀತಿ ಅನುಸರಿಸಿ ತಿದ್ದುಪಡಿ ಸುಗ್ರೀವಾಜ್ಞೆ ಜಾರಿಗೆ ತರುತ್ತಿವೆ ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಈಗಿನ ಭೂ ಸುಧಾರಣಾ ಕಾಯ್ದೆಯ ಪ್ರಕಾರ ಕೃಷಿಕರಲ್ಲದವರು ಸಹ ತಮಗೆ ಬೇಕಾದಷ್ಟು ಜಮೀನನ್ನು ಬಳಸಿಕೊಳ್ಳಲು ಅವಕಾಶವಿರುತ್ತದೆ, ಭೂಮಿ ಕಳೆದುಕೊಳ್ಳುವ ರೈತರು ನಗರದಲ್ಲಿ ಕೂಲಿ ಕಾರ್ಮಿಕರಾಗಿ ಅಥವಾ ಕಾರ್ಪೋರೇಟ್ ಹೊಲದಲ್ಲಿ ಎತ್ತುಗಳಾಗಿ ದುಡಿಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ರೈತರು ದೂರಿದರು.
ಎಪಿಎಂಸಿ ನೀತಿಯಿಂದ ಖಾಸಗಿ ಉದ್ದಿಮೆದಾರರು ನಡೆಸುವ ಮಂಡಿಗಳಲ್ಲಿ ರೈತರಿಗೆ ಸ್ವಲ್ಪ ಹೆಚ್ಚಿನ ದರ ದೊರೆತರು ಎಪಿಎಂಸಿ ವರ್ತಕರನ್ನು ದಿವಾಳಿ ಎಬ್ಬಿಸಿ ನಂತರ ಎಲ್ಲಾ ಉದ್ಯಮಗಳಲ್ಲಿ ನಡೆಯುವಂತೆ ಈ ಕ್ಷೇತ್ರದಲ್ಲೂ ಬೃಹತ್ ಕಾಪೆರ್Çೀರೇಟ್ ಉದ್ಯಮಿಗಳಾಗಿ ಏಕ ಸ್ವಾಮ್ಯತೆ ಸಾಧಿಸುತ್ತಾರೆ ಹಾಗೂ ಖಾಸಗಿ ವಿದ್ಯುತ್ ಚಕ್ತಿ ನೀತಿಯಿಂದ ರೈತರು ತಮ್ಮ ಕೃಷಿ ಪಂಪ್ ಸೆಟ್ಗಳಿಗೆ ವಿದ್ಯುತ್ ಶಕ್ತಿಯನ್ನು ಉಚಿತವಾಗಿ ಪಡೆಯಲು ಸಾಧ್ಯವಾಗುವುದಿಲ್ಲ, ಕಂಪನಿಗಳು ಸಹ ತಮ್ಮ ಲಾಭಕ್ಕಾಗಿ ವಿದ್ಯುತ್ ಶಕ್ತಿ ದರವನ್ನು ಹೆಚ್ಚು ನಿಗಧಿಪಡಿಸಿದರೂ ಸರ್ಕಾರ ಯಾವ ಕ್ರಮ ಜರುಗಿಸಲು ಸಾಧ್ಯವಿಲ್ಲ ಈ ಎಲ್ಲಾ ಕಾರಣಗಳಿಂದ ಮಸೂದೆಗಳನ್ನು ವಿರೋಧಿಸಿ ರೈತರು, ವರ್ತಕರು, ಸಂಘಟನೆಗಳ ಮುಖಂಡರು ಪ್ರತಿಟನೆ ನಡೆಸಿ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡುರಗಳಾದ ದಬ್ಬೆಘಟ್ಟ ಜಗದೀಶ್, ಪಾಲಾಕ್ಷ, ಮಾರಿಮುತ್ತು, ಶಂಕರಣ್ಣ ತಿಮ್ಲಾಪುರ, ಶಿವಣ್ಣ, ರಾಮಣ್ಣ, ಸಂಘಟನೆಗಳ ಮುಖಂಡರುಗಳಾದ ಬಿ.ಲಕ್ಕಪ್ಪ, ಸಿ.ಡಿ.ಚಂದ್ರಶೇಖರ್, ಕೃಷ್ಣೆಗೌಡ, ಕರವೇ ಗುರುಮೂರ್ತಿ, ನಿಶಾನಿ ಕಿರಣ್ ಸೇರಿದಂತೆ ಹಲವರು ಭಾಗವಹಿಸಿದ್ದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
