ಮಿಡಿಗೇಶಿ
ಅಕ್ಟೋಬರ್ 15 ಮಧುಗಿರಿಯಿಂದ ಪಾವಗಡಕ್ಕೆ ಹಾದು ಹೋಗುವ ಕೆ.ಶಿಪ್. ರಾಜ್ಯ ಹೆದ್ದಾರಿ ರಸ್ತೆ ಮಿಡಿಗೇಶಿ ಗ್ರಾಮದ ಸೂಲದಗುಟ್ಟೆ ಕ್ರಾಸ್ ಬಳಿ ವರದಿಯಾಗಿದೆ.
ಬೆಳಗಿನ ಜಾವ ಸಮಯ ಐದು ಗಂಟೆಯಲ್ಲಿ ಪಾವಗಡ ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದ ವೆಂಕಟೇಶ್ ಸಿ.ಆರ್. (25) ಎನ್ನುವ ಯುವಕ ತನ್ನ ಸ್ಕೂಟಿ KA 04 JT 4107 ರ ವಾಹನದಲ್ಲಿ ಮಧುಗಿರಿ ಕಡೆ ಬರುತ್ತಿರುವಾಗ ಸದರಿ ಸೂಲದಗುಟ್ಟೆ ಕ್ರಾಸ್ ಬಳಿ ನಿಂತಿದ್ದ ಲಾರಿ KA 01 AG 9266 ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ .
ಇದರ ಪರಿಣಾಮವಾಆಗಿ ಸ್ಕೂಟಿ ಸವಾರನ ಹಣೆ ಮತ್ತು ತಲೆಗೆ ಪೆಟ್ಟು ಬಿದಿದೆ , ಎಡಗಾಲು ಮುರಿದಿದ್ದು ಸದರಿ ಗಾಯಾಳುವನ್ನು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು. ಹೆಚ್ಚಿನ ಚಿಕಿತ್ಸೆಗೆ ಮಧುಗಿರಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತಾಗಿ ಮಿಡಿಗೇಶಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
