ಕೊರೋನಾ ಹಿನ್ನೆಲೆ ವೈದ್ಯರು ಹೆಚ್ಚು ಮುಂಜಾಗ್ರತೆ ವಹಿಸುವುದು ಅನಿವಾರ್ಯ : ಡಿ ಸಿ ಎಂ

ಬೆಂಗಳೂರು

    ಕೊರೊನಾ ತಡೆಗಟ್ಟುವ ಹಿನ್ನೆಲೆಯಲ್ಲಿ ವಿನ್ಯಾಸಗೊಳಿಸಲಾಗಿರುವ ವರ್ಚುಯಲ್ ಕ್ಲಿನಿಕ್ ತಂತ್ರಜ್ಞಾನವನ್ನು ನಗರದ ಬಿಬಿಎಂಪಿ ಆಸ್ಪತ್ರೆಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಲಾಗಿದೆ ನಗರದ ಜೈನ್ ಆಸ್ಪತ್ರೆಯಲ್ಲಿ ಪರಿಚಯಿಸಲಾಗಿರುವ ವರ್ಚುಯಲ್ ಕ್ಲಿನಿಕ್ ವ್ಯವಸ್ಥೆಯನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯ ಮಂತ್ರಿ ಡಾ. ಅಶ್ವತ್ಥ್‌ನಾರಾಯಣ್ ಅವರು ವರ್ಚುಯಲ್ ಕ್ಲಿನಿಕ್ ತಂತ್ರಜ್ಞಾನದಿಂದ ತಜ್ಞ ವೈದ್ಯರು ಎಲ್ಲೇ ಇದ್ದರೂ ಈ ರೋಗಿಗಳನ್ನು ಪರೀಕ್ಷಿಸಿ ಸೂಕ್ತ ಸಲಹೆ ಸೂಚನೆ ನೀಡಲು ಸಾಧ್ಯವಾಗಲಿದೆ ಎಂದರು.

    ಕೋವಿಡ್-19 ಹಿನ್ನೆಲೆಯಲ್ಲಿ ವೈದ್ಯರು ಹೆಚ್ಚು ಮುಂಜಾಗ್ರತೆ ವಹಿಸುವುದು ಅನಿವಾರ್ಯ. ರೋಗಿಗಳ ತಪಾಸಣೆ ನಡೆಸುವಾಗ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನ ನೆರವು ಪಡೆದಿರುವ ಪಲ್ಮಾನಾಲಾಜಿಸ್ಟ್ ಡಾ. ಚಂದ್ರಶೇಖರ್ ಅವರು ವರ್ಚುಯುಲ್ ಕ್ಲಿನಿಕ್ ಅಭಿವೃದ್ಧಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

    ತಜ್ಞ ವೈದ್ಯರ ಕೊರತೆ ಇರುವ ದೂರದ ಊರುಗಳಲ್ಲಿ ರೋಗಿಗಳು ಈ ವರ್ಚುಯುಲ್ ಕ್ಲಿನಕ್‌ನ ನೆರವು ಪಡೆಯಬಹುದು. ಆನ್‌ಲೈನ್ ಮೂಲಕ ಎಲ್ಲ ಪರೀಕ್ಷೆಗಳ ಲ್ಯಾಬ್ ವರದಿಯನ್ನು ಪರಿಶೀಲಿಸಿ ವೈದ್ಯರು ಆನ್‌ಲೈನ್ ಮೂಲಕವೇ ಅಗತ್ಯ ಚಿಕಿತ್ಸೆ ಔಷಧಗಳನ್ನು ನೀಡಬಹುದಾಗಿದೆ ಎಂದು ಡಾ. ಅಶ್ವತ್ಥ್‌ನಾರಾಯಣ ಅವರು ತಿಳಿಸಿದರು.

     ವಿಡಿಯೋ ಕಾನ್ಫುರೆನ್ಸ್ ಮೂಲಕ ತಜ್ಞ ವೈದ್ಯರು ರೋಗಿಗಳನ್ನು ಪರೀಕ್ಷಿಸುವ ಮತ್ತು ಸೂಕ್ತ ಚಿಕಿತ್ಸೆಗೆ ಶಿಫಾರಸ್ಸು ಮಾಡುವ ವರ್ಚುಯಲ್ ಕ್ಲಿನಿಕ್ ವ್ಯವಸ್ಥೆ ಈ ಸಂದರ್ಭದಲ್ಲಿ ಹೆಚ್ಚು ಉಪಯುಕ್ತವಾಗಲಿದೆ ಎಂದರು.

ವರ್ಚುಯುಲ್ ಕ್ಲಿನಿಕ್

      ಆಸ್ಪತ್ರೆಗೆ ಬರುವ ಎಲ್ಲ ರೋಗಿಗಳ ವರದಿಯನ್ನು ಆನ್‌ಲೈನ್ ಮೂಲಕ ಪರಿಶೀಲಿಸಿದ ನಂತರ ಅವರ ಜತೆ ವಿಡಿಯೋ ಕಾನ್ಫುರೇನ್ಸ್ ಮೂಲಕ ವೈದ್ಯರು ಸಂವಾದ ನಡೆಸುವರು. ಕ್ಯಾಮೆರಾ ಮೂಲಕ ರೋಗ ಲಕ್ಷಣಗಳನ್ನು ಗಮನಿಸುವ ಜತೆಗೆ ದಾದಿಯರ ಬಳಿಯಿರುವ ಸ್ಟೆತೋಸ್ಕೋಪ್‌ನಿಂದ ರೋಗಿಯ ಹೃದಯದ ಬಡಿತವನ್ನು ಆಲಿಸುವರು. ಇದನ್ನಾಧರಿಸಿ ಚಿಕಿತ್ಸೆ ಕುರಿತು ವೈದ್ಯರು ಸಲಹೆ ನೀಡುವರು.ವರ್ಚುಯುಲ್ ಕ್ಲಿನಿಕ್‌ನಲ್ಲಿ ಶ್ವಾಸಕೋಶದ ತೊಂದರೆ, ಜ್ವರ, ಶೀತ ಹಾಗೂ ಚರ್ಮ ರೋಗದ ತಪಾಸಣೆ ಸಾಧ್ಯವಾಗಲಿದೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link