ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ಕೊಡಿ

ಚಿತ್ರದುರ್ಗ:

      ವಿಕಲಚೇತನರಿಗೆ ಅನುಕಂಪ ಬೇಡ ಅವಕಾಶ ಬೇಕು ಎಂದು ಚಲನಚಿತ್ರ ನಿರ್ದೇಶಕ ಜಿ.ಶ್ರೀನಿವಾಸಮೂರ್ತಿ ಹೇಳಿದರು.
ಜಿಲ್ಲಾ ಅಂಗವಿಕಲರ ಕ್ಷೇಮಾಭ್ಯುದಯ ಸಂಘದಿಂದ ಐ.ಎಂ.ಎ.ಹಾಲ್‍ನಲ್ಲಿ ಬುಧವಾರ ನಡೆದ ವಿಶ್ವವಿಕಲಚೇತನರ ದಿನಾಚರಣೆ ಹಾಗೂ ಸಾಂಸ್ಕತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

       ರಾಜ್ಯದಲ್ಲಿ ಸಾವಿರಾರು ಸಂಘಟನೆಗಳಿವೆ. ಆದರೆ ಕೈಕಾಲು ಇಲ್ಲದ ವಿಕಲಚೇತನರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಂಘಟನೆಯಾಗುತ್ತಿರುವುದನ್ನು ನೋಡಿದರೆ ಬೇರೆಯವರಿಗೆ ನಾಚಿಕೆಯಾಗಬೇಕು. ಕೈಕಾಲು ಸರಿಯಿದ್ದವರು ಸಂಘಟನೆ ಮಾಡಿಕೊಳ್ಳುವುದು ಸಹಜ. ಆದರೆ ವಿಕಲಚೇತನರು ಸಂಘಟಿತರಾಗುತ್ತಿರುವುದು ನಿಜಕ್ಕೂ ಸಾಧನೆ. ಸರ್ಕಾರ ಅನುಕಂಪ ತೋರುವ ಬದಲು ಅವಕಾಶಗಳನ್ನು ನೀಡಿದರೆ ವಿಕಲಚೇತನರು ಸ್ವಾವಲಂಭಿಯಾಗಿ ಬದುಕಲು ಸಹಕಾರಿಯಾಗಲಿದೆ ಎಂದರು.

       ಪುಟ್ಟರಾಜಗವಾಯಿಗಳು ಅಂಧರು. ಆದರೆ ಅವರಲ್ಲಿ ಎಂತಹ ಅದ್ಬುತವಾದ ಪಾಂಡಿತ್ಯವಿದೆ. ಹಾಗಾಗಿ ವಿಕಲಚೇತನರಲ್ಲಿಯೂ ವಿಶೇಷವಾದ ಪ್ರತಿಭೆಯಿದೆ. ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ತಿಳಿಸಿದರು.

        ಯುವ ನ್ಯಾಯವಾದಿ ಪ್ರತಾಪ್‍ಜೋಗಿ ಮಾತನಾಡಿ ಅಂಗವಿಕಲರನ್ನು ಕೈಲಾಗದವರು ಎಂದು ಯಾರು ಭಾವಿಸಬಾರದು. ಅಂಗವಿಕಲರನ್ನು ಕ್ರಿಯಾಶೀಲರು ಎಂದು ಕರೆಯಬೇಕಾಗಿದೆ. ಏಕೆಂದರೆ ಅವರು ಸದಾ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿರುತ್ತಾರೆ. ಸಾಮಾನ್ಯರಿಗಿಂತ ಅಂಗವಿಕಲರಲ್ಲಿ ಬುದ್ದಿಮಟ್ಟ, ಜ್ಞಾನ ಹೆಚ್ಚಾಗಿರುತ್ತದೆ. ಆದ್ದರಿಂದ ಅಂಗವಿಕಲರನ್ನು ಬೇರೆಯವರು ಅನುಸರಿಸುವಂತಾಗಿದೆ ಎಂದು ವಿಕಲಚೇತನರಲ್ಲಿರುವ ಸಾಮಥ್ರ್ಯವನ್ನು ಗುಣಗಾನ ಮಾಡಿದರು.

        ನಿಮ್ಮಲ್ಲಿರುವ ಸಂಘಟನೆಯ ಕೊರತೆಯಿಂದ ರಾಜಕಾರಣಿಗಳು, ಅಧಿಕಾರಿಗಳು ನಿಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಿ. ನಿಮಗೆ ಸಿಗಬೇಕಾದ ಸವಲತ್ತುಗಳು ಮಧ್ಯವರ್ತಿಗಳ ಪಾಲಾಗಲು ಬಿಡಬೇಡಿ ಎಂದು ವಿಕಲಚೇತನರಿಗೆ ಕರೆ ನೀಡಿದರು.

       ದಲಿತ ಮುಖಂಡ ಮಾಡನಾಯಕನಹಳ್ಳಿ ರಂಗಪ್ಪ ಮಾತನಾಡುತ್ತ ಜಿಲ್ಲೆಯಲ್ಲಿ ಸುಮಾರು 45 ಸಾವಿರ ಅಂಗವಿಲರಿರಬಹುದು. ಇಂತಹ ಕಾರ್ಯಕ್ರಮದಲ್ಲಿ ಕನಿಷ್ಟ ನೂರು ಮಂದಿ ಅಂಗವಿಕಲರು ಸೇರದಿರುವುದು ನೋವಿನ ಸಂಗತಿ. ಅಂಗವಿಕಲತೆಗೆ ಜಾತಿ ಇಲ್ಲ. ಎಲ್ಲಾ ಜಾತಿ ವರ್ಗದವರಲ್ಲಿಯೂ ವಿಕಲಚೇತನರಿರುತ್ತಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ಜಪಾನ್‍ನಲ್ಲಿ ಅಂಗವಿಕಲರಿಗೆ ಅನೇಕ ಸವಲತ್ತುಗಳನ್ನು ನೀಡಲಾಗುವುದು. ನಮ್ಮಲ್ಲಿ ಅಂಗವಿಕಲರು ಇನ್ನು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿರುವುದು ದುರಂತ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿರುವ ಎಲ್ಲಾ ವಿಕಲಚೇತನರು ಬೆಂಗಳೂರಿನಲ್ಲಿ ಸೇರಿ ಬೃಹತ್ ಸಮಾವೇಶ ಮಾಡಿದಾಗ ಮಾತ್ರ ಸರ್ಕಾರ ನಿಮಗೆ ಮಣಿಯುತ್ತದೆ ಎಂದು ತಿಳಿಸಿದರು.

       ಅಂಗವಿಕಲರಿಗೆ ಸರ್ಕಾರ ತ್ರಿಚಕ್ರ ವಾಹನ ನೀಡಿದರೆ ಸಾಲದು. ಅದಕ್ಕೆ ಪ್ರತಿದಿನ ಪೆಟ್ರೋಲ್‍ಗೆ ನೂರು ರೂ.ಬೇಕು. ಅದನ್ನು ವಿಕಲಚೇತನರಿಗೆ ನೀಡುವವರಾರು. ಹಾಗಾಗಿ ಸರ್ಕಾರ ಅಂಗವಿಕಲರಿಗೆ ದಿನಕ್ಕೆ ನೂರು ರೂ.ಪೆಟ್ರೋಲ್‍ಗೆ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

         ದಲಿತ ಮುಖಂಡ ರಾಜಣ್ಣ ಮಾತನಾಡಿ ನಿಮ್ಮ ಸಮಸ್ಯೆಗಳು ಸರ್ಕಾರಕ್ಕೆ ಮುಟ್ಟಬೇಕಾದರೆ ನೀವುಗಳು ಮಾಡುವ ಯಾವುದೇ ಸಭೆ ಸಮಾರಂಭ ಸಮಾವೇಶಗಳಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಇರಬೇಕು. ಆಗ ಅವರ ಗಮನಕ್ಕೆ ನಿಮ್ಮ ಕುಂದುಕೊರತೆಗಳನ್ನು ತರಬಹುದು. ನಿಮ್ಮ ಸಮಸ್ಯೆಗಳು ಏನು ಎಂಬುದನ್ನು ಮೊದಲು ಪಟ್ಟಿ ಮಾಡಿಕೊಳ್ಳಿ, ಮಾಶಾಸನ, ನಿವೇಶನ, ಮನೆ ನೀಡುವಂತೆ ಸರ್ಕಾರವನ್ನು ಕೇಳಿ. ಸಂವಿಧಾನದಡಿ ಪ್ರತಿಯೊಂದು ಕಾನೂನು ರೂಪಿಸಲಾಗಿದೆ. ನೀವುಗಳು ಸರ್ಕಾರದಿಂದ ಏನೆ ಸೌಲಭ್ಯಗಳನ್ನು ಪಡೆಯಬೇಕಾದರೆ ಕಾನೂನು ಮೀರಿ ಹೋಗುವಂತಿಲ್ಲ. ಶಿಕ್ಷಣ, ಸಂಘಟನೆ, ಹೋರಾಟದಿಂದ ಬದುಕು ಕಟ್ಟಿಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಅಂಗವಿಕಲರ ಕ್ಷೇಮಾಭ್ಯುದಯ ಸಂಘದ ಅಧ್ಯಕ್ಷ ಟಿ.ಕೆ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಬಡಗಿ ಕೆಲಸಗಾರರ ಸಂಘಧ ಅಧ್ಯಕ್ಷ ಎ.ಜಾಕೀರ್‍ಹುಸೇನ್, ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ಚಿದಾನಂದ, ಎನ್.ಟಿ.ವಾಗೀಶ್‍ಕುಮಾರ್, ಕೆ.ಆನಂದ, ತಿಪ್ಪೇಸ್ವಾಮಿ, ಕುಂಟರಾಜು ವೇದಿಕೆಯಲ್ಲಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link