ಅಭಿವೃದ್ಧಿಯ ವಿಷಯದಲ್ಲಿ ರಾಜಕೀಯ ಬೇಡ : ಎ ನಾರಾಯಣ ಸ್ವಾಮಿ

ಪಾವಗಡ
     ತಾಲ್ಲೂಕಿನ ಅಭಿವೃದ್ಧಿಗೆ ಯಾರೇ ಆಗಲಿ ರಾಜಕೀಯ ಹೊರತು ಪಡಿಸಿ ಸಾಗಬೇಕಿದೆ. ರಾಜಕೀಯ ಮಿಶ್ರಣವಾದರೆ ನಾನಂತು ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದು ಚಿತ್ರದುರ್ಗ ಸಂಸದ ಎ.ನಾರಾಯಣ ಸ್ವಾಮಿ ತಿಳಿಸಿದರು.
      ಶುಕ್ರವಾರ ತಾಪಂ ಸಭಾಂಗಣದಲ್ಲಿ ದಿಢೀರನೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಮಾತನಾಡಿದ ಅವರು ಸಮಗ್ರ ಅಭಿವೃದ್ಧಿಗೆ ಯಾವುದೇ ರಾಜಕೀಯ ಬೇಡ ನಮ್ಮದೇ ಸರ್ಕಾರವಿದೆ ಅನುದಾನ ತಂದು ಸರ್ವತೋನ್ಮುಖ ಅಭಿವೃದ್ದಿಗೆ ಪಡಿಸೋಣ ಅದನ್ನು ವಿನಾಕಾರಣ ಕಾರಣ ರಾಜಕೀಯ ಮಾಡಿದರೆ ನಾನಂತು ಸುಮ್ಮನೆ ಕೂರುವ ವ್ಯೆಕ್ತಿಯಲ್ಲ ಎಂದು ಎಲ್ಲಾ ಆದಿಕಾರಿಗಳಿಗೆ ಸಂಸದರು ಖಡಕ್ ಎಚ್ಚರಿಕೆ ನೀಡಿದರು.
       ತಾಲೂಕು ಪಂಚಾಯ್ತಿ ವೈಬ್ ಸೈಟ್ ಮೋದಲು ಸಿದ್ದಪಡಿಸಬೇಕು ಎಲ್ಲಾ ಕಾರ್ಯಕ್ರಮಗಳು ವೈಬ್‍ನಲ್ಲಿ ಲಭ್ಯವಿರುವಂತೆ ನೋಡಿಕೋಳ್ಳಬೇಕು ಪ್ರತಿ ಇಲಾಖೆವಾರು ಕಾರ್ಯಕ್ರಮಗಳು,ಸಮಸ್ಯೆಗಳ ಸ್ಪಷ್ಟಚಿತ್ರಣವನ್ನು ತಾಪಂ ವೆಬ್‍ನಲ್ಲಿ ಸಿಗುವಂತೆ ಮಾಡಬೇಕೆಂದು ಇಒ ನರಸಿಂಹ್ಮಮೂರ್ತಿರವರಿಗೆ ತಿಳಿಸಿದರು. 
      ಇದೇ ತಿಂಗಳ 26 ರೋಳಗೆ ತಾಲೂಕಿನ ಶಿಥಿಲ ಶಾಲಾ ಕಟ್ಟಡಗಳ ಪೋಟೋ ಸಹಿತ ಮಾಹಿತಿ ನೀಡುವಂತೆ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತಿಳಿಸಿದ ಅವರು ಯಾವುದೇ ವಿದ್ಯಾರ್ಥಿಗಳು ಬಯದ ವಾತವರಣದಲ್ಲಿ ಶಿಥಿಲಕಟ್ಟಗಳಲ್ಲಿ ಪಾಠಪ್ರವಚನ ಕೇಳುವಂತಿಲ್ಲ ಸೂಕ್ತ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಲಾಗುವುದೆಂದರು.
     ಹೋಬಳಿಗೊಂದು ಉತ್ತಮ ಶಾಲೆಗಳನ್ನು ಗುರುತಿಸಿ ಕಾರ್ಪೋರೆಟ್ ವಲಯದಿಂದ ಆಶಾಲೆಗಳನ್ನು ದತ್ತು ಪಡೆದು ಅಭಿವೃದ್ದಿಪಡಿಸಲು ಚಿತಿಂಸಲಾಗಿದ್ದು ಅಂತಹ ಶಾಲೆಗಳ ಪಟ್ಟಿ ನೀಡಬೇಕು.ತಾಲೂಕಿನಲ್ಲಿ ತಾಂತ್ರಿಕ ಸಮಸ್ಯೆಯಿಂದ ಎಷ್ಟು ಘಟಕಗಳು ಕೆಟ್ಟು ನಿಂತಿವೆ  ಇತರೆ ಸಮಸ್ಯೆಗಳಿಂದ ಎಷ್ಟು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಏನು ಕ್ರಮ ಕೈಗೊಂಡಿದ್ದಿರಾ ಘಟಕಗಳ ಚಾಲನೆಗೆ ನಿರ್ಲಕ್ಷತೆಯ ಬಗ್ಗೆ ಪ್ರಶ್ನಿಸಿದ ಸಂಸದರು , ಪ್ರತಿ ಶಾಲೆಯಲ್ಲಿ ಶುದ್ದಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಬೇಕು ಯಾವುದೇ ವಿದ್ಯಾರ್ಥಿ ಪ್ಲೋರೈಡ್ ನೀರನ್ನು ಸೇವನೆ ಮಾಡದಂತೆ ಗ್ರಾಮೀಣ ಕುಡಿಯುವ ನೀರಿನ ವಿಭಾಗಾಧಿಕಾರಿಗಳಾದ ಬಿ.ಪಿ.ನಾಗರಾಜುರವರಿಗೆ ಕ್ರಮಕೈಗೋಳ್ಳ ಬೇಕೆಂದು ತಿಳಿಸಿದರು.
     ತಾಲೂಕಿನ ಪ್ರತಿ ಗ್ರಾಪಂನಲ್ಲಿ ಅರ್ಹ ಫಲಾನುಭವಿಗಳಿಗೆ ಮನೆ ಹಂಚಿಕೆಯಲ್ಲಿ 20ರಿಂದ30 ಸಾವಿರ ಹಣ ಪಡೆಯಲಾಗುತ್ತಿದೆ ಇದರ ಪೂರ್ಣ ಮಾಹಿತಿ ಲಭ್ಯವಿದ್ದು ಯಾವುದೇ ಮುನುಸ್ಸೂಚನೆ ಇಲ್ಲದೆ ಕ್ರಮಕೈಗೋಳ್ಳಲಾಗುವುದೆಂದು ತಿಳಿಸಿದ ಅವರು ತಾಲೂಕಿಗೆ ಈಗ ಬೇಕಾಗಿರುವ ಮನೆಗಳ ಪೂರ್ಣ ಪ್ರಮಾಣದ ಪಟ್ಟಿ ನೀಡಿ ಎಂದು ಗ್ರಾಪಂ.ಅಧಿಕಾರಿಗಳಿಗೆ ಸೂಚಿಸಿದರು.
     ತಹಸೀಲ್ದರ್ ವರದರಾಜುರವರಿಂದ ಆಧಾರ್ ಸಮಸ್ಯೆ ಮತ್ತು ಮಾಸಾಶನ ಬಗ್ಗೆ ಮಾಹಿತಿ ಪಡೆದು ಮುಂದೆ ಇಂತಹ ಸಮಸ್ಯೆ ಎದುರಾಗದಂತೆ ಕ್ರಮಕೈಗೋಳ್ಳುವುದು ,ಹಾಗೂ ತಾಲೂಕಿನಲ್ಲಿ ಎಷ್ಟು ಕಡೆ ಸರ್ಕಾರಿ ಭೂಮಿ ಇದೆ ಅದರ ಗುರುತಿಸಿ ವಿಭಜನೆ ಮಾಡಬೇಕು ಜನತೆಗೆ ಹಾಗೂ ವಸತಿ ಸೌಲಭ್ಯಕ್ಕಾಗಿ ಬಳಕೆಯಾಗುವ ಭೂಮಿಯನ್ನು ಗುರುತಿಸಬೇಕೆಂದು ಸಭೆಯಲ್ಲಿ ತಿಳಿಸಿದರು.
     ಪಟ್ಟಣದ ತಾಲೂಕು ಪಂಚಾಯ್ತಿ ನೂತನ ಸಂಭಾಗಣ 75 ಲಕ್ಷ ವ್ಯೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದಾಗಿರುವ ಬಗ್ಗೆ ಸಭೆಯಲ್ಲಿ ತಾಪಂ.ಅದ್ಯಕ್ಷರಾದ ಸೋಗುಡು ವೆಂಕಟೇಶ್ ತಿಳಿಸಿದಾಗ ಸಂಸದರ ಕೋಟಾದಿಂದ ಹೆಚ್ಚುವರಿ ಅನುದಾನ ನೀಡಿ ಬೃಹತ್ ಸಂಭಾಗಣ ನಿರ್ಮಾಣ ಮಾಡೋಣವೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link