ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ತಹಶೀಲ್ದಾರ ಡಾ.ಮಧು

ಹರಪನಹಳ್ಳಿ:

        ತಾಲ್ಲೂಕು ದಂಡಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಎನ್.ಎನ್.ಮಧು ಅವರು ತುಮಕೂರು-ರಾಯದುರ್ಗ ಮತ್ತು ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯ ತುಮಕೂರು ವಿಶೇಷ ಭೂಸ್ವಾಧೀನಾಧಿಕಾರಿ ಆಗಿ ನಿಯುಕ್ತಿಗೊಂಡಿದ್ದಾರೆ.

         ಈ ಮೊದಲು ಅವರು ಹರಪನಹಳ್ಳಿ ಪೆÇ್ರಬಷನರಿ ತಹಶೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆ ಬ್ಯಾಡಗಿ ತಾಲ್ಲೂಕು ತಹಶೀಲ್ದಾರ ಶಿವಶಂಕರ ನಾಯ್ಕ ಅವರು ಹರಪನಹಳ್ಳಿ ದಂಡಾಧಿಕಾರಿ ಆಗಿ ವರ್ಗಾವಣೆಗೊಂಡಿದ್ದರು. ಹೀಗಾಗಿ ಏಕಕಾಲಕ್ಕೆ ಇಬ್ಬರು ತಹಶೀಲ್ದಾರ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಉಂಟಾಗಿತ್ತು.

         ಕೆಲ ತಾಂತ್ರಿಕ ಸಮಸ್ಯೆ ಉದ್ಬವಿಸಿದ್ದರಿಂದ ತಾಲ್ಲೂಕಿನ ನಾಲ್ಕು ಹೋಬಳಿಗಳಲ್ಲಿ ತೆಲಿಗಿ ಮತ್ತು ಅರಸೀಕೆರೆ ಹೋಬಳಿಯನ್ನು ಶಿವಶಂಕರ ನಾಯ್ಕ ಹಾಗೂ ಕಸಬಾ-ಚಿಗಟೇರಿ ಹೋಬಳಿಗಳ ಜವಾಬ್ದಾರಿ ಹಂಚಿಕೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದರು. ಡಾ.ಮಧು ಅವರು ತುಮಕೂರು ವಿಶೇಷ ಭೂಸ್ವಾಧೀನಾಧಿಕಾರಿ ಆಗಿ ನಿಯುಕ್ತಿಗೊಂಡಿರುವುದರಿಂದ ಸದ್ಯ ಶಿವಶಂಕರ ನಾಯ್ಕ ಅವರು ತಾಲ್ಲೂಕಿನ ಪೂರ್ಣ ಪ್ರಮಾಣದ ದಂಡಾಧಿಕಾರಿ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap