ಚಿತ್ರದುರ್ಗ
ಮಾನವ ಎಷ್ಟೇ ಅನುಭವಿ, ನೈಪುಣ್ಯತೆಯನ್ನು ಹೊಂದಿದ್ದರು ಸಹಾ ಕಾಲ ಕಾಲಕ್ಕೆ ಬದಲಾಗುವ ವಿದ್ಯಾಮಾನಗಳನ್ನು ತಿಳಿಯುವ ಸಲುವಾಗಿ ತರಬೇತಿ ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ಬೆಂಗಳೂರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕರ್ನಾಟಕ ರಾಜ್ಯ, ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘ ಇವರ ಸಹಯೋಗದಲ್ಲಿ ಚಿತ್ರದುರ್ಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳ ಪತ್ರಕರ್ತರಿಗೆ ಕ್ರೀಡಾ ಭವನದಲ್ಲಿ ಹಮ್ಮಿಕೊಂಡಿದ್ದ ವೃತ್ತಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ದಿನಮಾನದಲ್ಲಿ ಬರೀ ಪತ್ರಿಕೆ ಮಾತ್ರವಲ್ಲದೆ ಎಲ್ಲಾ ವಿಷಯಗಳಿಗೂ ಸಹಾ ತರಬೇತಿ ಎನ್ನುವುದು ಆಗತ್ಯವಾಗಿದೆ ತರಬೇತಿ ಇಲ್ಲದೆ ಕೆಲಸ ಮಾಡುವುದಕ್ಕೂ ತರಬೇತಿಯನ್ನು ಪಡೆದು ಕೆಲಸ ಮಾಡುವುದಕ್ಕೂ ವ್ಯತ್ಯಾಸ ಇದೆ, ತರಬೇತಿ ಇದ್ದಾಗ ಉತ್ತಮವಾದ ವಸ್ತುಗಳು, ಉತ್ತಮವಾದ ಕಟ್ಟಡಗಳು ನಿರ್ಮಾಣವಾಗಲು ಸಾಧ್ಯವಿದೆ ಇದೇ ರೀತಿ ಪ್ರತಿಕಾ ರಂಗವೂ ಸಹಾ ಇದರಲ್ಲಿ ಕೆಲಸ ಮಾಡುವವರಿಗೆ ಆಗಾಗ ಇಂತಹ ಕಾರ್ಯಗಾರಗಳನ್ನು ಮಾಡುವುದರ ಮೂಲಕ ಪ್ರಪಂಚದಲ್ಲಿ ಆದ ಬದಲಾವಣೆಯ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿಯುವುದು ಅಗತ್ಯವಾಗಿದೆ ಎಂದರು.
ತರಬೇತಿ ನೀಡುವುದು ನಮ್ಮ ದೇಶದಲ್ಲಿ ಕಡಿಮೆ ಆದರೆ ವಿದೇಶದಲ್ಲಿ ತರಬೇತಿ ನಿರಂತರವಾಗಿ ಇರುತ್ತದೆ ತರಬೇತಿ ಪಡೆದಷ್ಟು ಮಾನವ ಆ ವಿಷಯದಲ್ಲಿ ಪಕ್ವವಾಗುತ್ತಾನೆ ಇದರಿಂದ ಆತ ಅದರಲ್ಲಿ ಮತ್ತಷ್ಟು ಪ್ರಗತಿಯನ್ನು ಹೊಂದಲು ಸಾಧ್ಯವಿದೆ. ಬರೀ ಪತ್ರಿಕಾ ರಂಗ ಮಾತ್ರವಲ್ಲದೆ ಎಲ್ಲಾ ರಂಗಗಳಲ್ಲಿ ಇಂದಿನ ದಿನಮಾನದಲ್ಲಿ ತರಬೇತಿ ಅಗತ್ಯವಾಗಿದೆ ಎಂದ ಅವರು, ಪತ್ರಿಕೆಗಳು ಸಮಾಜದಲ್ಲಿನ ಸಮಸ್ಯೆಗಳನ್ನು ಬಯಲಿಗೆ ತರುವುದು ಮಾತ್ರವಲ್ಲದೆ ಅದಕ್ಕೆ ಪರಿಹಾರವನ್ನು ಸಹಾ ನೀಡುವ ಕಾರ್ಯವನ್ನು ಮಾಡುವುದರ ಮೂಲಕ ಸಮಾಜವನ್ನು ತಿದ್ದಿ ಸರಿದಾರಿಗೆ ಕರೆದ್ಯೂಯುವ ಕೆಲಸವನ್ನು ಮಾಡುತ್ತದೆ ಎಂದು ಸೌಭಾಗ್ಯ ತಿಳಿಸಿದರು.
ಸರ್ಕಾರ ಪತ್ರಕರ್ತರಿಗೆ ಮತ್ತು ರೈತರಿಗೆ ಸೌಲಭ್ಯಗಳನ್ನು ನೀಡುವಾಗ ಯಾವುದೇ ರೀತಿಯ ತಾರತಮ್ಯ ಬೇಧ ಬಾವ ಮಾಡದೇ ಎಲ್ಲರಿಗೂ ಸಹಾ ಸೌಲಭ್ಯ ಸಿಗುವಂತ ನೋಡಿಕೊಳ್ಳಬೇಕಿದೆ. ಇದರಿಂದ ಸಮಾಜದಲ್ಲಿ ಭೇಧ ಬಾವ ಎನ್ನುವುದು ಕಡಿಮೆಯಾಗಲಿದೆ ಇದರ ಬಗ್ಗೆ ಸರ್ಕಾರ ಮತ್ತು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರು ಗಮನ ನೀಡುವಂತೆ ಮನವಿ ಮಾಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ ಇಂದಿನ ದಿನಮಾನದಲ್ಲಿ ಹೂಸದಾದ ಅವಿಷ್ಖಾರಗಳು ನಿರಂತರವಾಗಿ ನಡೆಯುತ್ತಿದೆ ಅವುಗಳನ್ನು ತಿಳಿದುಕೊಳ್ಳಲು ಈ ರೀತಿಯಾದ ಕಾರ್ಯಗಾರ ಅಗತ್ಯವಾಗಿದೆ ಇದರಿಂದ ತಮ್ಮ ವೃತ್ತಿಯಲ್ಲಿ ನೈಪುಣ್ಯತೆಯನ್ನು ಪಡೆಯಲು ಸಾಧ್ಯವಿದೆ. ಸುಮಾರು 20 ವರ್ಷದ ಹಿಂದಿನ ಪತ್ರಿಕೆಗೂ ಇಂದಿನ ಪತ್ರಿಕೆಗೂ ಅಜಗಜಾಂತರ ವ್ಯತ್ಯಾಸ ಇದೆ. ಇಂದಿನ ದಿನದಲ್ಲಿ ಪತ್ರಿಕೆಗಳು ಬೇರೆ ಬೇರೆ ರೀತಿಯಲ್ಲಿ ಬಂದರೂ ಸಹಾ ದಿನ ಬೆಳಗಾದರೆ ಪತ್ರಿಕೆಯ ಪುಟಗಳನ್ನು ತಿರುವಿ ಹಾಕದಿದ್ದರೆ ಹಲವಾರು ಜನರಿಗೆ ಸಮಾಧಾನವಾಗುವುದಿಲ್ಲ ಪತ್ರಿಕೆಗಳು ಇಂದಿನ ದಿನದಲ್ಲಿ ಸಹಾ ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಂಡಿದೆ ಎಂದರು.
ಪತ್ರಿಕಾ ರಂಗ ಎನ್ನವುದು ನಿಂತ ನೀರಲ್ಲ ಅದು ಸದಾ ಚಲಿಸುತ್ತಿರುವ ಕ್ಷೇತ್ರವಾಗಿದೆ. ಪತ್ರಿಕೆಗಳು ಸಹಾ ಓದುಗರ ಮೇಲೆ ಅವಲಂಬನೆಯಾಗಿದೆ ಏನಾದರೂ ಬದಲಾವಣೆ ಮಾಡಬೇಕಾದರೆ ಅವರಿಂದ ಅಭೀಪ್ರಾಯಗಳನ್ನು ಸಂಗ್ರಹ ಮಾಡುವುದರ ಮೂಲಕ ಅವರು ನೀಡುವ ಸಲಹೆಗಳನ್ನು ಪಡೆಯುವುದರ ಮೂಲಕ ಬದಲಾವಣೆಯನ್ನು ಮಾಡಿಕೊಂಡಿದ್ದಾರೆ, ಇಂದಿನ ದಿನ ಮಾನದಲ್ಲಿ ಪತ್ರಿಕೆಗಳನ್ನು ನಡೆಸುವುದು ಕಷ್ಟದ ಕೆಲಸವಾಗಿದೆ ಟಿ.ವಿ.ಛಾನಲ್, ಇ-ಪತ್ರಿಕೆ, ಮೊಬೈಲ್ಗಳಲ್ಲಿ ಕ್ಷಣ ಕ್ಷಣಕ್ಕೆ ನೀಡುವ ಮಾಹಿತಿ ಇದ್ದರೂ ಸಹಾ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗಿಲ್ಲ ಅದರಲ್ಲೂ ಯುವ ಜನತೆ ಮತ್ತು ವಿದ್ಯಾರ್ಥಿಗಳಿಗೆ ನೀಡುವ ವಿವಿಧ ರೀತಿಯ ಮಾಹಿತಿಗಳು ಅವರ ಪ್ರಗತಿಗೆ ಸಹಾಯಕವಾಗಿದೆ ಎಂದು ರವೀಂದ್ರ ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ. ಸಿದ್ದರಾಜು ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಅಕಾಡೆಮಿ ನಡೆದು ಬಂದ ದಾರಿ ಹಾಗೂ ಅದರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವೇಣುಗೋಪಾಲ್ ನಾಡಗೀತೆ ಹಾಡಿದರೆ ವಾರ್ತಾಧಿಕಾರಿ ಧನಂಜಯ ಸ್ವಾಗತಿಸಿದರು, ಅರುಣು ಕುಮಾರ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಂತರ ನಡೆದ ಗೋಷ್ಠಿಯಲ್ಲಿ ವೃತ್ತ ಪತ್ರಿಕೆಗಳಲ್ಲಿ ಮುದ್ರಣ ಯಂತ್ರಗಳ ಬಳಕೆ ಕುರಿತು ಕಲರ್ ಕರಿ ವ್ಯವಸ್ಥಾಪಕ ನಿರ್ದೇಶಕ ನಾಗರಾಜು ಎನ್. ವಿಷಯ ಮಂಡಿಸಿದರು. ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಿಂಗಪ್ಪ ಎಚ್. ಚಾವಡಿ ಅಧ್ಯಕ್ಷತೆ ವಹಿಸಿದ್ದು, ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಭಾವಿ ಉಪಸ್ಥಿತರಿದ್ದರು.
ಎರಡನೆ ಗೋಷ್ಠಿಯಲ್ಲಿ ಡೆಸ್ಕ್ ಟಾಪ್ ಪಬ್ಲಿಷಿಂಗ್ ಮತ್ತು ಪುಟ ವಿನ್ಯಾಸ ಕುರಿತು ವಿಜಯವಾಣಿ ಪತ್ರಿಕೆಯ ಪುಟ ವಿನ್ಯಾಸಕ ಆರ್. ಹರೀಶ್ಕುಮಾರ್ ವಿಷಯ ಮಂಡಿಸಿದರೆ ಕರ್ನಾಟಕ ರಾಜ್ಯ ಜಿಲ್ಲಾ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಶ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು.
ಮೂರನೆ ಗೋಷ್ಠಿಯಲ್ಲಿ ಛಾಯಾಚಿತ್ರ ಪತ್ರಿಕೋದ್ಯಮ ಕುರಿತು ದಿ. ಹಿಂದು ಪತ್ರಿಕೆ ನಿವೃತ್ತ ಮುಖ್ಯ ಛಾಯಾಗ್ರಾಹಕ ಕೆ. ಗೋಪಿನಾಥ್ ವಿಷಯ ಮಂಡಿಸಿದ್ದು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ನರೇನಹಳ್ಳಿ ಅರುಣ್ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
