ಹಿರಿಯೂರು :
ತಾಲ್ಲೂಕಿನ ಗೌನಹಳ್ಳಿ ಸಮೀಪ ದಾಳಿ ನಡೆಸಿದ ಅಬಕಾರಿ ಪೊಲೀಸರು ಮೂರ್ಕಣ್ಣಪ್ಪ ಎಂಬುವವರಿಂದ ಒಂದೂವರೆ ಕೆ.ಜಿ ಒಣ ಗಾಂಜಾ, 10 ಲೀಟರ್ ಬಿಯರ್ ಹಾಗೂ 2.34 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಉಪಅಧೀಕ್ಷಕ ಮೋತಿಲಾಲ್ ನೇತೃತ್ವದಲ್ಲಿ ದಾಳಿ ನಡೆಸಿದ ಪೋಲಿಸರು ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ, ವೇಳೆ ವಶಪಡಿಸಿಕೊಂಡಿದ್ದು, ಗಾಂಜಾದ ಒಟ್ಟು ಮೌಲ್ಯ 75ಸಾವಿರ ರೂಗಳು ಎನ್ನಲಾಗಿದೆ. ಆರೋಪಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಪ್ರಹ್ಲಾದಾಚಾರ್, ಉಪನಿರೀಕ್ಷಕ ಸಂದೀಪ್, ರಕ್ಷಕರಾದ ಲೋಹಿತ್, ಸತೀಶ್ ವಾಹನಚಾಲಕ ರಮೇಶ್ರಾಥೋಡ್ ಪಾಲ್ಗೊಂಡಿದ್ದರು.
55.62ಲೀಟರ್ ಅಕ್ರಮ ಮದ್ಯ ವಶ :
ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಮದ್ದೇರುಹಳ್ಳ ಸೇತುವೆ ಬಳಿ ಆಟೋದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 55.62 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಗುಳಗೊಂಡನಹಳ್ಳಿಯ ಗಿರಿಜಮ್ಮ ಹಾಗೂ ಗುಡ್ಡದಯ್ಯ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
