ಪಾವಗಡ
ಸಾಲ ತೀರಿಸಲಾದ ಅಸಹಾಯಕ ರೈತ ವಿಷಕುಡಿದು ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಸಂಜೆ ನಾಗಲಮಡಿಕೆಯಲ್ಲಿ ಜರುಗಿದೆ.
ನಾಗಲಮಡಿಕೆ ಗ್ರಾಮದ ಪಾತಣ್ಣ (63) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಮೃತರಿಗೆ ಪತ್ನಿ, ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ಶುಕ್ರವಾರ ಮಧ್ಯಾಹ್ನ ತನ್ನ ಹೊಲದಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ ಈತನಿಗೆ 12 ಎಕರೆ ಜಮೀನು ಇದೆ. ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ನಲ್ಲಿ 3.80 ಲಕ್ಷ , ತಿರುಮಣಿ ಗ್ರಾಮದ ಕೆನರಾ ಬ್ಯಾಂಕ್ ನಲ್ಲಿ 80 ಸಾವಿರ ಸಾಲದ ಜೊತೆಗೆ 8 ಲಕ್ಷ ರೂ. ಕೈ ಸಾಲ ಇದೆ ಎನ್ನಲಾಗಿದೆ. ಇರುವ ಎರಡು ಕೊಳವೆ ಬಾವಿಗಳಲ್ಲಿ ಒಂದು ಒಣಗಿದ್ದು ಮತ್ತೊಂದು ಕೊಳವೆ ಬಾವಿ ಕೊರೆಸಿದ್ದು, 2 ಇಂಚು ನೀರು ಬರುತ್ತಿದು ರೂ ಇಟಬೆಳೆ ಒಣಗಿ ಹೋಗುತ್ತಿರುವುದನ್ನು ಕಂಡು ಸಹಿಸಲಾಗದೆ, ಸಾಲ ತೀರಿಸಲಾಗದ ಅಸಹಾಯಕತೆಯಿಂದಾಗಿ ಅತ್ಮ ಹತ್ಯೆ ಮಾಡಿಕೊಂಡಿದ್ದಾನೆಂದು ತಿಳಿದಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ತಿರುಮಣಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. ಶವ ಪರೀಕ್ಷೆಗಾಗಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/01/PHOTO-2019-01-25-17-05-11-e1548433647375.gif)