ಹುಳಿಯಾರು
ಜಿಲ್ಲಾಧಿಕಾರಿಗಳೇ ನಮ್ಮ ಅಂಗಡಿಗಳನ್ನು ತೆರವು ಮಾಡಿಸಿ ನಮ್ಮ ಕುಟುಂಬಗಳನ್ನು ಬೀದಿಗೆ ತಳ್ಳಬೇಡಿ ಎಂದು ಹುಳಿಯಾರು ಫುಟ್ ಫಾತ್ ಅಂಗಡಿಗಳ ವ್ಯಾಪಾರಿಗಳು ಮನವಿ ಮಾಡಿದ್ದಾರೆ.
ಹುಳಿಯಾರಿನ ಪಪಂ ಸಭೆಯಲ್ಲಿ ಫುಟ್ ಪಾತ್ ಅಂಗಡಿಗಳನ್ನು ತೆರವುಗೊಳಿಸುವಂತೆಯೂ ತೆರವುಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೂ ವಹಿಸಿದ ಹಿನ್ನೆಲೆಯಲ್ಲಿ ಹುಳಿಯಾರಿನ ಪರಿವೀಕ್ಷಣ ಮಂದಿರದಲ್ಲಿ ಫುಟ್ಪಾತ್ ವ್ಯಾಪಾರಸ್ಥರ ಸೇವಾ ಚಾರಿಟಬಲ್ ಟ್ರಸ್ಟ್ನಿಂದ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗಳಿಗೆ ಈ ಮೇಲಿನಂತೆ ಮನವಿ ಮಾಡಿದರು.
ಹುಳಿಯಾರು ಬಸ್ ನಿಲ್ದಾಣ ಸೇರಿದಂತೆ ಡಾ.ರಾಜ್ಕುಮಾರ್ ರಸ್ತೆ, ರಾಂಗೋಪಾಲ್ ಸರ್ಕಲ್, ಪೆಟ್ರೋಲ್ ಬಂಕ್ ಸರ್ಕಲ್ ಹೀಗೆ ಪಟ್ಣದ ಅನೇಕ ಕಡೆ 30 ವರ್ಷದಿಂದ ಫುಟ್ ಫಾತ್ನಲ್ಲಿ ಗೂಡಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದೇವೆ. ಆದರೆ ಈಗ ಏಕಾಏಕಿ ನಮ್ಮ ಅಂಗಡಿಗಳನ್ನು ತಡರವುಗೊಳಿಸಿದರೆ ನಮ್ಮ ಅಂಗಡಿಗಳ ಸಹಿತ ನಾವೂ ಬೀದಿಗೆ ಬೀಳಬೇಕಾಗುತ್ತದೆ ಎಂದು ಅವಲತ್ತುಕೊಂಡಿದ್ದಾರೆ.
ನಾವು ಫುಟ್ ಫಾತ್ ಪಾತ್ಗಳಲ್ಲಿ ಗೂಡಂಗಡಿಗಳನ್ನಿಟ್ಟುಕೊಂಡಿರುವುದು ಅಕ್ರಮ ಎನ್ನುವುದು ಗೊತ್ತು. ಆದರೆ ಮಳೆಬೆಳೆಯಿಲ್ಲದೆ ಕೃಷಿ ಚಟುವಟಿಕೆಗಯಲ್ಲಿ ಉದ್ಯೋಗ ಇಲ್ಲದಾಗಿತ್ತು. ಗಾಮೆಟ್ರ್ಸ್, ಫ್ಯಾಕ್ಟರಿಗಳಿಲ್ಲದೆ ಉದ್ಯೋಗಕ್ಕಾಗಿ ಗುಳೆ ಹೋಗುವ ಅನಿವಾರ್ಯತೆ ನಿರ್ಮಾಣವಾಗಿತ್ತು. ಆದರೆ ಊರಿನಲ್ಲೇ ಸ್ವವಲಂಭಿಗಳಾಗಿ ಬದುಕು ಕಟ್ಟಿಕೊಳ್ಳುವ ಛಲದಿಂದ ಫುಟ್ ಫಾತ್ನಲ್ಲಿ ಗೂಡಂಗಡಿಗಳನ್ನು ಇಟ್ಟುಕೊಂಡು ಬರುವ ಆದಾಯದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದು ವಿವರಿಸಿದರು.
ನಾವು ಫುಟ್ಫಾತ್ನ ಚಂರಂಡಿಯ ಮೇಲೆ, ಸಾರ್ವನಿಕರಿಗೆ ಬಳಕೆಯಾಗದ ಜಾಗ, ರಾಮಹಾಲ್ ಸುತ್ತಮುತ್ತ, ಬಸ್ ಶೆಲ್ಟರ್ನ ಖಾಲಿ ಜಾಗ ಹೀಗೆ ಸಾರ್ವಜನಿಕರಿಗೆ ತೊಂದರೆಯಾಗದ ಸ್ಥಳದಲ್ಲಿ ನಾವು ಗೂಡಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ನಾವುಗಳು ಜೀವನ ನಿರ್ವಹಣೆಗೆ ಅಗತ್ಯವಾದ ಬಾಳೆಹಣ್ಣು, ಹೂವು, ಎಲೆಅಡಿಕೆ, ಏರ್ ಸಲೂನ್, ಚಹಾ ಅಂಗಡಿಗಳನ್ನಿಟ್ಟು ವ್ಯಾಪಾರ ಮಾಡುತ್ತಿದ್ದೇವೆಯೇ ವಿನಃ ಸಿಕ್ಕಾಪಟ್ಟೆ ಲಾಭಗಳಿಸುವ ವ್ಯಾಪಾರ ಮಾಡುತ್ತಿಲ್ಲ. ಹಾಗಾಗಿಯೇ ಇಂದಿಗೂ ಸ್ವಂತ ಜಾಗ ಖರೀಧಿಸಿ ಸ್ವಂತ ಅಂಗಡಿ ಮಾಡಿಕೊಳ್ಳಲಾಗಿಲ್ಲ ಎಂದು ವಿವರಿಸಿದರು.
ನಾವುಗಳು ಅಂಗಡಿಗಳನ್ನು ಇಟ್ಟಿರುವ ಜಾಗದಲ್ಲಿ ಸಾರ್ವಜನಕಿರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತದೆನ್ನುವ ಕಾರಣದಿಂದ ಪಪಂ ಸಭೆಯಲ್ಲಿ ಅಂಗಡಿಗಳ ತೆರವಿಗೆ ನಿರ್ಧಾರ ಮಾಡಿದ್ದಾರೆ. ಆದರೆ ರಸ್ತೆ ಇಕ್ಕಟ್ಟಾಗಲು ಪಪಂ ಮಳಿಗೆಯ ಬಾಡಿಗೆದಾರರು ಹಾಗೂ ಖಾಸಗಿ ಅಂಗಡಿಗಳ ಬಾಡಿಕೆದಾರರು ರಸ್ತೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ತಮ್ಮ ಅಂಗಡಿಗಳನ್ನು ವಿಸ್ತರಿಸಿರುವುದರಿಂದ ತೊಂದರೆಯಾಗಿದೆ. ಅವರ ಒತ್ತುವರಿಯನ್ನು ತೆರವುಗೊಳಿಸಿದರೆ ಸುಗಮ ಸಂಚಾರಕ್ಕೆ ಯಾವುದೇ ಸಂಚಕಾರ ಒದಗುವುದಿಲ್ಲ ಎಂದು ಆರೋಪಿಸಿದ್ದಾರೆ.
ಆದಾಗ್ಯೂ ಕೂಡ ನಮ್ಮ ಅಂಗಡಿಗಳನ್ನು ಎತ್ತಗಂಡಿ ಮಾಡಲೇಬೇಕೆಂದಿದ್ದರೆ ಮೊದಲು ನಮ್ಮೆಲ್ಲರಿಗೆ ಪುನರ್ವಸತಿ ಕಲ್ಪಿಸಿ ವ್ಯಾಪಾರ ಮಾಡಿಕೊಡಲು ಅವಕಾಶ ಕಲ್ಪಿಸಿಕೊಡಿ. ಕೆರೆಯ ಏರಿಯ ಮೇಲೆ ಈ ಹಿಂದೆ ಫುಟ್ ಫಾತ್ ವ್ಯಾಪಾರಿಗಳಿಗಾಗಿಯೇ ಸ್ಥಳವಕಾಶ ನಿಗದಿ ಮಾಡಲಾಗಿತ್ತು. ಅಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ, ಕಾಲಾಕಾಲಕ್ಕೆ ಪಪಂ ಸುಂಕ ಕಟ್ಟಿಕೊಂಡು ಹೋಗುತ್ತೇವೆ. ಪ್ಲಾಸ್ಟಿಕ್, ತರಕಾರಿ, ಹೂವಿನ ತ್ಯಾಜ್ಯ ಹಾಕದಂತೆ ನೈರ್ಮಲ್ಯ ಕಾಪಾಡುತ್ತೇವೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ಫುಟ್ಪಾತ್ ವ್ಯಾಪಾರಿಗಳಾದ ಬಸವರಾಜು, ಹೂವಿನ ರಘು, ಲಕ್ಷ್ಮಿಕಾಂತ್, ಮೂರ್ತಿ, ದಯಾನಂದ್, ಉಮಕ್ಕ, ಶಾರದಮ್ಮ, ದಾದಪೀರ್, ನಾಯಾಜ್, ಮುಜೀಬ್, ಕುಮಾರ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
