ತುಮಕೂರು:
ತುಮಕೂರಿನ ಸಿದ್ದಗಂಗಾಮಠದ 10 ಸಾವಿರ ವಿದ್ಯಾರ್ಥಿಗಳು ಹಾಗೂ ಭಕ್ತರಿಗೆ ಜನವರಿ 29 ರಂದು ಬೆಂಗಳೂರಿನ ಅಖಿಲ ಕರ್ನಾಟಕ ಸವಿತಾ ಸಮಾಜ ಯುವಕರ ಸಂಘದಿಂದ ಉಚಿತ ಸಾಮೂಹಿಕ ಕೇಶ ಮುಂಡನ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಇಡೀ ಭಾರತದಲ್ಲಿಯೇ ಈ ಸಾಮುಹಿಕ ಕೇಶ ಮುಂಡನ ಸೇವೆ ಪ್ರಪ್ರಥಮವಾದುದು. ಈ ಸೇವೆ ಮಾಡಲು ಅವಕಾಶ ಕೊಡಬೇಕು ಎಂದು ಸಂಘದ ಅಧ್ಯಕ್ಷ ವಿ.ಲಕ್ಷೀಪ್ರಸನ್ನ ಅವರು ಮಠದ ಅಧ್ಯಕ್ಷರಾದ ಸಿದ್ಧಲಿಂಗಸ್ವಾಮೀಜಿ ಅವರಿಗೆ ಪತ್ರ ಸಲ್ಲಿಸಿ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಈ ಉಚಿತ ಸೇವಾ ಕಾರ್ಯಕ್ಕೆ ಸ್ವಾಮೀಜಿ ಒಪ್ಪಗೆ ಸೂಚಿಸಿದ್ದಾರೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
