71 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಯಲ್ಲಿ ಭದ್ರ..!!

ಪಾವಗಡ;-

   ಪಾವಗಡ ಪಟ್ಟಣದ ಪುರಸಭೆಯ ಚುನಾವಣೆಯು ಬುದುವಾರ ಶಾಂತಿಯುತವಾಗಿ ನಡೆಯಿತು. ಒಟ್ಟು 23 ವಾರ್ಡುಗಳಲ್ಲಿ ಜೆ.ಡಿ.ಎಸ್. ಕಾಂಗ್ರೇಸ್ ಮತ್ತು ಬಿಜೆಪಿ. ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 71 ಅಭ್ಯರ್ಥಿಗಳು ಹಣ ಬರಹ ಬರೆಯಲು ಮತದಾನ ಮಾಡಲಾಯಿತು.

    ಬೆಳಿಗ್ಗೆ 8 ಘಂಟೆಯಿಂದ ಮದ್ಯಾಹ್ನ 2 ಘಂಟೆಯವರೆಗೂ ಬಿರುಸಿನ ಮತದಾನ ನಡೆದು ನಂತರ ಸಂಜೆ 5 ಘಂಟೆಯವರೆಗೆ ಮಂದಗತಿಯಲ್ಲಿ ಸಾಗಿತು. ಒಟ್ಟಾರೆ ಮತದಾನದ ವೇಳೆ ಯಾವುದೆ ಗಲಾಟೆ ಗದ್ದಲ ಇಲ್ಲದೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು.

    ಮತಗಟ್ಟೆಗಳ ಬಳಿ ಅಭ್ಯರ್ಥಿಗಳು ಶಾಮಿಯಾನ ಹಾಕಿ ಗುಂಪುಗುಂಪಾಗಿ ತಮ್ಮ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದ ದೃಶ್ಯ ಕಂಡು ಬಂದಿತು.ಅಭ್ಯರ್ಥಿಗಳು ಮತದಾನ ಮಾಡಲು ಮತದಾರರಿಗೆ ಅಟೋ ಮತ್ತಿತರ ವಾಹನದ ವ್ಯವಸ್ಥೆ ಕಲ್ಪಿಸಿದ್ದರು,ಪುರುಷ ಮತದಾರಗಿಂತ ಮಹಿಳಾ ಮತದಾರರು ಅತ್ಯಂತ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.

     9, 10,11, 12 ನೇ ಮತಗಟ್ಟೆಗಳಿರುವ ಬಾಪೂಜಿ ಶಾಲೆ ರಸ್ತೆಯು ಅತ್ಯಂತ ಜನಸಂದಣಿಯಿಂದ ಕೂಡಿದ್ದು ಇಲ್ಲಿ ಕೆ.ಎಸ್. ಆರ್.ಪಿ. ತುಕಡಿಯಿಂದ ಬಿಗಿಪೋಲೀಸ್ ಬಂಧೋಭಸ್ತ್ ವ್ಯವಸ್ಥೆ ಕಲ್ಪಿಸಿಲಾಗಿತ್ತು, 23 ವಾರ್ಡುಗಳ ಪೈಕಿ ಕೆಲ ಬೂತ್ ಗಳಲ್ಲಿ ವೀಲ್ ಚೇರ್ ವ್ಯವಸ್ಥೆ ಇಲ್ಲದೆ ವಯಸ್ಸಾದ, ಮತ್ತು ಅಂಗವಿಕಲರಿಗೆ ಅನಾನುಕೂಲ ಉಂಟಾಯಿತು.

      ಕನುಮಲಚೆರವು ಮತ ಗಟ್ಟೆ 22 ರಲ್ಲಿ ವೀಲ್ ಚೇರ್ ವ್ಯವಸ್ಥೆ ಇಲ್ಲದ ಕಾರಣ ವಯಸ್ಸಾದ ಗಂಗಮ್ಮ ಮತ್ತು ಇತ್ಥೀಚೆಗೆ ಅಪಘಾತದಲ್ಲಿ ಕಾಲು ಮುರಿದುಕೊಂಡ ರೇವಣ್ಣ ನವರು ಅತಿ ಕಷ್ಟದಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕಾಯಿತು, ಈ ಬಗ್ಗೆ ಚುನಾವಣಾ ಸಿಬ್ಬಂದಿ ಗಮನಕ್ಕೆ ತಂದರೆ ಪುರಸಭೆ ವತಿಯಿಂದ ಮಾಡಬೇಕಾಯಿತು ನಾವೇನು ಮಾಡುವುದಕ್ಕೆ ಆಗುವುದಿಲ್ಲ ಎಂಬ ಉತ್ತರ ಕೇಳಿ ಬಂದಿತು, ಆದರೇ ಕೆಲ ಬೂತ್ ಗಳಲ್ಲಿ ವೀಲ್ ಚೇರ್ ವ್ಯವಸ್ಥೆ ಮಾಡಿದ್ದರಿಂದ ವಯಸ್ಸಾದವರು ಮತ್ತು ಅಂಗವಿಕಲರು ತಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಸಹಾಯದಿಂದ ಮತದಾನ ಮಾಡಿದರು.

ಓಟಿಗೆ ನೋಟು:

       ಈ ಚುನಾವಣೆಯಲ್ಲಿ ಕುರುಡು ಕಾಂಚಾಣ ಎಂಬಂತೆ ಒಂದು ಓಟಿಗೆ 2 ರಿಂದ 3 ಸಾವಿರದವರೆಗೂ ಹಂಚಲಾಗಿದೆ ಎನ್ನಲಾಗಿದೆ, ಕೆಲ ವಾರ್ಡುಗಳಲ್ಲಿ ಮೂರು ಪಕ್ಷದ ಮತ್ತು ಸ್ವತಂತ್ರ ಅಭ್ಯರ್ಥಿಗಳಿಂದಲೂ ಹಣ ಪಡೆದಿದ್ದು ಆದರೇ ಯಾರಿಗೆ ಮತದಾನ ಮಾಡಿದ್ದಾರೆ ಎಂಬುದು 31 ರ ತನಕ ಕಾಯಬೇಕಾಗಿದೆ.

ಮತದಾನ ಮಾಡಿದ ಪ್ರಮುಖರು

       ಮಾಜಿ ಪುರಸಭಾಧ್ಯಕ್ಷರಾದ ಗುರ್ರಪ್ಪ, ಮಾನಂವೆಂಕಟಸ್ವಾಮಿ, ಸುಮಾಅನಿಲ್, ಎ. ಶಂಕರರೆಡ್ಡಿ, ಸುಧಾಕರರೆಡ್ಡಿ, ಓಂಶಾಂತಿ ಪೀಠದ ಸರ್ವಧರ್ಮ ಆಶ್ರಮದ ರಾಮಮೂರ್ತಿಸ್ವಾಮೀಜಿ, ಎಸ್.ಎಸ್.ಕೆ. ಸಂಘದ ಅಧ್ಯಕ್ಷ ಜಿ.ಎಸ್. ಧರ್ಮಪಾಲ್, ಇತಿಹಾಸಕಾರ ವಿ.ಚೆಲುವರಾಜನ್, ಮತ ದಾನ ಮಾಡಿದವರಲ್ಲಿ ಪ್ರಮುಖರಾಗಿದ್ದಾರೆ.

ಮದುವೆ ಮಂಟಪದಿಂದ ಮತದಾನಕೇಂದ್ರಕ್ಕೆ,

       ಪಟ್ಟಣದ ಸಾಯಿರಾಂ ಛತ್ರದಲ್ಲಿ ಮದುವೆಯಾದ ಮದುಮಗಳು ಯಮುನಾ ಮಾಂಗಲ್ಯದಾರಣೆಯಾದನಂತರ
8 ನೇ ವಾರ್ಡ ನಲ್ಲಿ ತನ್ನ ತಂದೆತಾಯಿರೊಂದಿಗೆ ಬಂದು ಮತದಾನ ಮಾಡಿದ್ದಾರೆ. ಪಟ್ಟಣದ ಶ್ರೀಮೋಕ್ಷಾ ಮೋಬೈಲ್ ಸರ್ವಿಸ್ ನ ಮಾಲೀಕರಾದ ಮಧುಸೂಧನ್ ರ ಮದುವೆ ಆಶ್ವರ್ಯ ಜೊತೆಯಲ್ಲಿ ಪಟ್ಟಣದ ಎಸ್.ಎಸ್.ಕೆ. ಬಯಲುರಂಗಮಂದಿರದಲ್ಲಿ ನಡೆದು, ಸಂಜೆ 4 ಗಂಟೆಗೆ ಅಂಬೇಡ್ಕರ್ ಭವನದಲ್ಲಿರುವ 5 ನೇ ವಾರ್ಡನ ಮತಗಟ್ಟೆಯಲ್ಲಿ ತನ್ನ ನೂತನ ಪತ್ನಿ ಮತ್ತು ತಂದೆತಾಯಿರೊಂದಿಗೆ ಮತದಾನ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link