ತುಮಕೂರು

ಗಾಂಧೀಜಿಯವರ 150ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಗಾಂಧೀಜಿಯವರ ತತ್ವಗಳನ್ನು ಎಲ್ಲರಿಗೂ ತಲುಪಿಸುವ ಸುಲವಾಗಿ ಗಾಂಧೀ ಸಂಕಲ್ಪ ಯಾತ್ರೆ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ತಿಳಿಸಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗಾಂಧೀಜಿ ಯವರ 150ನೇ ಜನ್ಮ ದಿನಾಚರಣೆ ಪ್ರಯುಕ್ತ ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ನವೆಂಬರ್ 11 ರಿಂದ ಜನವರಿ 30 ರವರೆಗೆ ಗಾಂಧೀ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಗಾಂಧೀಜಿಯವರ ಅವರ ತತ್ವಾದರ್ಶಗಳನ್ನು ಜನಸಾಮಾನ್ಯ ರಿಗೆ ತಲುಪಿಸುವ ಸುವರ್ಣಾವಕಾಶ ಬಂದಿದೆ. ಹೀಗಾಗಿ ಸಂಕಲ್ಪ ಯಾತ್ರೆಯನ್ನು ಎಲ್ಲಾ ಸಂಸದರ ಕ್ಷೇತ್ರದಲ್ಲಿ ಆಯೋಜಿಸ ಲಾಗಿದೆ. ಆ ಮೂಲಕ ಬಿಜೆಪಿ ಗಾಂಧೀವಾದಿ ತತ್ವಗಳ ನಿಜವಾದ ಪ್ರತಿಪಾದಕ ಎಂದು ಜನತೆಗೆ ತಿಳಿಸುವ ಅವಕಾಶ ಬಂದಿದೆ ಎಂದರು.
ಗಾAಧೀ ಸಂಕಲ್ಪ ಯಾತ್ರೆ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಲು ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಪಂ ಅಧ್ಯಕ್ಷರು, ರಾಷ್ಟ್ರೀಯ ಮತ್ತು ಪ್ರಾದೇಶಿಕ ಪದಾಧಿಕಾರಿಗಳು ಹಾಗೂ ಮಾಜಿ ಸಚಿವರು, ಶಾಸಕರು ಸಾರ್ವಜನಿಕ ರೊಂದಿಗೆ 15 ದಿನಗಳ ಕಾಲ ಈ ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಹಾಗೂ ಗಾಂಧೀಜಿಯವರ ಸ್ವದೇಶಿ, ಖಾದಿ, ಸ್ವಾವಲಂಭಿ, ಸ್ವಚ್ಛತಾ ತತ್ವಗಳನ್ನು ಪ್ರಚಾರ ಮಾಡಲಾಗುತ್ತದೆ ಎಂದು ಹೇಳಿದರು.
ಪಾದಯಾತ್ರೆ ಸಮಯದಲ್ಲಿ ಸ್ವಚ್ಚತೆ, ಸಮಾನತೆ, ಗಿಡ ನೆಡುವುದು ಸೇರಿದಂತೆ ಗಾಂಧೀಜಿಯವರ ತತ್ವಗಳನ್ನು ಪಾಲಿಸಲಾಗುತ್ತದೆ. ಸ್ವತಂತ್ರ ಪೂರ್ವದಲ್ಲಿ ಗಾಂಧಿ ಮಾಡಿದ್ದ ಕಾರ್ಯಗಳನ್ನು ಈ ಸಂದರ್ಭದಲ್ಲಿ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಅಮಿತ್ ಶಾ ಮತ್ತು ಮೋದಿ ಅವರು ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಇದರ ಜೊತೆಗೆ ಕೇಂದ್ರ ಸರಕಾರದ ಯೋಜನೆಗಳು ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿದೆಯೇ ಎಂದು ಪರಿಶೀಲನೆ ನಡೆಸಲಾಗುತ್ತದೆ. ಮತ್ತು ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.
ನ.11 ರಂದು ಮಧುಗಿರಿ ವಿಧಾನ ಸಭಾ ಕ್ಷೇತ್ರದಿಂದ ಸಂಕಲ್ಪ ಯಾತ್ರೆ ಪ್ರಾರಂಭವಾಗಲಿದ್ದು, 08 ವಿಧಾನ ಸಭಾ ಕ್ಷೇತ್ರದಲ್ಲೂ ಪಾದಯಾತ್ರೆ ಕ್ರಮಿಸಲಿದೆ. ನಿತ್ಯ ಬೆಳಗ್ಗೆ 8 ಗಂಟೆಗೆ ಕಾರ್ಯಾಂಜಲಿ ಪ್ರಾರ್ಥನೆ, 9 ಗಂಟೆಗೆ ಪಾದಯಾತ್ರೆ, 11ಗಂಟೆಗೆ ಸಾಮಾಜಿಕ ಸಾಮರಸ್ಯ ಸಭೆ, 12 ಗಂಟೆಗೆ ಉಪಹಾರ, 2 ಗಂಟೆಗೆ ಪಾದಯಾತ್ರೆ, ಸಂಜೆ 5 ಗಂಟೆಗೆ ಕಾರ್ಯಾಂಜಲಿ ಪ್ರಾರ್ಥನೆ ನಡೆಯಲಿದೆ. ಪಾದಯಾತ್ರೆ ಪೂರ್ಣವಾದ ಬಳಿಕ ತುಮಕೂರಿನಲ್ಲಿ ಬೃಹತ್ ಮಟ್ಟದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕೆ ರಾಷ್ಟ್ರೀಯ ನಾಯಕರು ಆಗಮಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್ ತಿಳಿಸಿದರು
ಪ್ರತಿ ವಿಧಾನಸಭೆ ವ್ಯಾಪ್ತಿಯಲ್ಲಿ ಸಂಕಲ್ಪ ಯಾತ್ರೆ ನಡೆಯಲಿದ್ದು, ನಿತ್ಯ 6 ರಿಂದ 8 ಗ್ರಾಮಗಳಂತೆ 5 ರಿಂದ 10 ಕಿಮೀ ಪಾದಯಾತ್ರೆ ನಡೆಯಲಿದೆ. ಇದರಂತೆ 15 ದಿನಗಳಲ್ಲಿ ಸುಮಾರು 120 ಹಳ್ಳಿಗಳನ್ನು ತಲುಪಿ 150 ಕಿಮೀ ಪಾದಯಾತ್ರೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಗಾಂಧೀ ಭಾವಚಿತ್ರದೊಂದಿಗೆ ಗಾಂಧೀಜಿಯವರ ತತ್ವಗಳಿಗೆ ಪುನರ್ ಜೀವ ನೀಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ಹೆಬ್ಬಾಕ ರವಿ, ರುದ್ರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
