ಚಿರತೆ ದಾಳಿಗೆ ಮೇಕೆ ಬಲಿ..!

ತುರುವೇಕೆರೆ:

    ತಾಲೂಕಿನ ದಂಡಿನಶಿವರ ಹೋಬಳಿ ಮಾಚೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಚಿರತೆಯೊಂದು ದಾಳಿ ಮಾಡಿ ಮೇಕೆಯೊಂದನ್ನು ಬಲಿ ತೆಗೆದುಕೊಂಡಿದೆ.ಮಾಚೇನಹಳ್ಳಿ ಗ್ರಾಮದ ಯಾದವರ ಹಟ್ಟಿಯಲ್ಲಿ ಶುಕ್ರವಾರ ರಾತ್ರಿ ಸುಮಾರು 10:50 ರ ಸಮಯದಲ್ಲಿ ಮಾಜಿ ಗ್ರಾಮ ಪಂಚಾಯ್ತಿ ಅದ್ಯಕ್ಷ ಆನಂದ್ ಅವರ ಮನೆಗೆ ಹೊಂದಿಕೊಂಡಂತಿದ್ದ ಶೆಡ್‍ಗೆ ನುಗ್ಗಿದ ಚಿರತೆ ಸುಮಾರು 10 ಸಾವಿರ ಬೆಲೆಬಾಳುವ ಮೇಕೆ ಮೇಲೆ ದಾಳಿ ಮಾಡಿ ನೂರು ಮೀಟರ್ ದೂರದ ಪೊದೆಯೊಂದಕ್ಕೆ ಹೊತ್ತೊಯ್ದು ತಿಂದು ಸಾಯಿಸಿದೆ.

    ಇದರಿಂದ ಸಾಲ ಸೂಲ ಮಾಡಿ ಸಾಕಿ ಸಲುಹಿದ ರೈತ ಮಹಿಳೆ ಅರಣ್ಯ ಇಲಾಖೆಗೆ ಶಾಪ ಹಾಕುತ್ತಿದ್ದಾರೆ. ಇತ್ತೀಚೆಗೆ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಛಾಗಿದ್ದು ಕೆಲವು ತಿಂಗಳುಗಳಿಂದಲೂ ಈ ಭಾಗದ ನಾಯಿ, ಹಸು ಕರುಗಳ ಮೇಲೆ ಚಿರತೆ ದಾಳಿ ಮಾಡುತ್ತಿದ್ದು ಆಜುಬಾಜು ಗ್ರಾಮಸ್ಥರು ಭಯ ಭೀತರಾಗಿದ್ದಾರೆ. ತಕ್ಷಣ ಅರಣ್ಯ ಇಲಾಖೆ ಇತ್ತ ಗಮನ ಹರಿಸಿ ಹುಲಿಬೋನ್ ಇಡಬೇಕು. ಇಲ್ಲದಿದ್ದಲ್ಲಿ ರೈತರೊಂದಿಗೆ ಸಂಬಂದಪಟ್ಟ ಇಲಖೆಯ ಮುಂದೆ ಹೋರಾಟ ಮಾಡಲಾಗುವುದು ಎಂದು ಎಪಿಎಂಸಿ ತಾಲ್ಲೂಕು ಉಪಾಧ್ಯಕ್ಷ ಎಂ.ಪಿ.ಲೋಕೇಶ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link