ಬಿರುಗಾಳಿ ಮಳೆ : ಗೋಡೆ ಕುಸಿದು ಅಜ್ಜಿ ಮೊಮ್ಮಗ ಸಾವು…!!!

ಬೆಂಗಳೂರು

      ಬಿರುಗಾಳಿ ಮಳೆಯಿಂದ ರಕ್ಷಣೆ ಪಡೆಯಲು ಶೆಡ್‍ನಡಿ ಹೋಗಿದ್ದವರ ಮೇಲೆ ಗೋಡೆ ಕುಸಿದು ಅಜ್ಜಿ-ಮೊಮ್ಮಗ ಮೃತಪಟ್ಟಿರುವ ದಾರುಣ ಘಟನೆ ನಗರದ ಹೊರವಲಯದ ಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

      ಹೊಸಹಳ್ಳಿಯ ಭಾಗ್ಯಮ್ಮ (48) ಹಾಗೂ ಅವರ ಮೊಮ್ಮಗ ವೆಂಕಿ (8)ಎಂದು ಮೃತ ದುರ್ದೈವಿಗಳನ್ನು ಗುರುತಿಸಲಾಗಿದೆ .ಗ್ರಾಮದ ಹೊರವಲಯದ ವಿಜಯಕುಮಾರ್ ಅವರ ಜಮೀನಿನ ಬಳಿ ನಿನ್ನೆ ಸಂಜೆ ಅಜ್ಜಿ ಮೊಮ್ಮಗ ಇಬ್ಬರು ನಡೆದುಕೊಂಡು ಬರುತ್ತಿದ್ದಾಗ ಏಕಾಏಕಿ ಮಳೆ ಆರಂಭವಾಗಿ ವೇಗವಾಗಿ ಗಾಳಿ ಬೀಸಲಾರಂಭಿಸಿದೆ. ಮಳೆಯಿಂದ ರಕ್ಷಣೆ ಪಡೆಯಲು ಇಬ್ಬರು ಶೆಡ್ ಕೆಳಗೆ ಆಶ್ರಯ ಪಡೆದಿದ್ದಾರೆ. ಈ ವೇಳೆ ಹಾಲೋ ಬ್ರಿಕ್ಸ್ ನಿಂದ ನಿರ್ಮಿಸಿದ ಗೋಡೆ ಕುಸಿದು ಅದರಡಿಯಲ್ಲಿ ಸಿಲುಕಿದ ಭಾಗ್ಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

      ಗಂಭೀರವಾಗಿ ಗಾಯಗೊಂಡಿದ್ದ ಮೊಮ್ಮಗ ವೆಂಕಿಯನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.

      ಮತ್ತೊಂದು ಘಟನೆಯಲ್ಲಿ ದೊಡ್ಡಬಳ್ಳಾಪುರದ ತಳಪಾಯ ಇಲ್ಲದೆ ನಿರ್ಮಿಸಿದ ಗೋಡೆ ಕುಸಿದು ಗಾಯಗೊಂಡಿರುವ ಮುನಿರತ್ನಮ್ಮ (38) ಮತ್ತು ಶ್ರೀನಿವಾಸ್ (25) ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ.ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link