ಬೆಂಗಳೂರು
ಸಾವಯವ ಕೃಷಿ ಹಾಗು ಆರೋಗ್ಯಕರ ಸಿರಿಧಾನ್ಯಗಳ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಅರಿವು ಮೂಡಿಸುವ ಪ್ರಯತ್ನ ನಡೆಯಬೇಕಿದೆ ಎಂದು ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮಹೇಶ್ವರ್ ರಾವ್ ತಿಳಿಸಿದ್ದಾರೆ..
ನಗರದಲ್ಲಿ ಮುಂದಿನ ಜನವರಿ 18 ರಿಂದ 20ರವರೆಗೆ ನಡೆಯುತ್ತಿರುವ ಸಾವಯವ ಮತ್ತು ಸಿರಿಧಾನ್ಯಗಳು ಕುರಿತ ಅಂತರರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಪೂರಕವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನೂರಾರು ವರ್ಷಗಳ ಹಿಂದೆ ಪೂರ್ವಜರು ಬೆಳೆಯುತ್ತಿದ್ದ ಸಿರಿಧಾನ್ಯಗಳು ಆರೋಗ್ಯಕರ ಜೀವನಕ್ಕೆ ಸಹಕಾರಿಯಾಗಿವೆ ಎಂದರು.
ಪ್ರಸ್ತುತ ಬಳಸುತ್ತಿರುವ ರಾಸಾಯನಿಕ ಮಿಶ್ರಿತ ಆಹಾರ ಧಾನ್ಯಗಳ ಬದಲಾಗಿ ಸಾವಯವ ಸಿರಿಧಾನ್ಯಗಳನ್ನು ಬಳಸುವ ಬಗ್ಗೆ ವ್ಯಾಪಕ ಪ್ರಚಾರ ನಡೆಸಬೇಕಿದೆ
ಕೃಷಿ ಬಳಕೆಯಲ್ಲಿ ಕಡಿಮೆ ನೀರು ರಾಸಾಯನಿಕ ರಹಿತಯಿಲ್ಲದೆ ಬೆಳೆಯಬಹುದಾದ ಸಾವಯವ ಸಿರಿಧಾನ್ಯಗಳಲ್ಲಿ ಹೆಚ್ಚು ಪೌಷ್ಠಿಕಾಂಶವಿದ್ದು, ಇದರ ಸೇವನೆಯಿಂದ ಜನರ ಆರೋಗ್ಯವು ಸುಧಾರಿಸಲಿದೆ ಎಂದು ಅವರು ತಿಳಿಸಿದರು.
ರೈತರಿಗೂ ಹೆಚ್ಚು ಲಾಭ ತರುವಂತಹ ಸಿರಿಧಾನ್ಯಗಳನ್ನು ಬೆಳೆಯಲು ಉತ್ತಮ ಅವಕಾಶಗಳು ಇದ್ದು, ಅದರ ಸದುಪಯೋಗ ಪಡಿಸಿಕೊಳ್ಳಲು ಇಂತಹ ಸಂವಾದ ಕಾರ್ಯಕ್ರಮಗಳು ಪೂರಕವಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಕೃಷಿ ಇಲಾಖೆ ಆಯುಕ್ತ ಕೆ.ಜೆ. ಜಗದೀಶ್ ಅವರು ಮಧುಮೇಹ, ಬೊಜ್ಜು ಅಂತಹ ರೋಗಕ್ಕೆ ಇಂದು ಬೆಳೆಯುತ್ತಿರುವ ರಾಸಾಯನಿಕ ಮಿಶ್ರಿತ ಆಹಾರ ಧಾನ್ಯಗಳು ಕಾರಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಾವಯವ ಸಿರಿಧಾನ್ಯಗಳು ನಾಗರಿಕತೆ ಬೆಳೆದಂತೆ ಕಣ್ಮರೆಯಾಗಿದೆ. ಇದರಿಂದ ಜನರ ಆರೋಗ್ಯ ಶೈಲಿಯ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಡಾ. ಅಪರ್ಣ, ನಂದಿನಿ ಕುಮಾರಿ, ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
