ಗೂಳೂರು ಮಹಾ ಗಣಪತಿ ಸ್ಥಿರಬಿಂಬ ಪ್ರತಿಷ್ಠಾಪನೆ 

ತುಮಕೂರು

     ಇತಿಹಾಸ ಪ್ರಸಿದ್ದ ಗೂಳೂರು ಮಹಾಗಣಪತಿ ದೇವಾಲಯಲ್ಲಿ ಸೋಮವಾರ ಮಹಾಗಣಪತಿ ಸ್ಥಿರಬಿಂಬ ಪ್ರತಿಷ್ಠಾಪನೆÀ ಮತ್ತು ಕಳಸ ಪ್ರತಿಷ್ಠಾಪನ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.

     ಶಿಲಾಗ್ರಹದ ಪ್ರತಿಷ್ಠಾಪನೆಯು ಇತ್ತೀಚೆಗೆ ಹದಿನೆಂಟು ಕೋಮಿನ ಜನಾಂಗದವರು ಸೇರಿದಂತೆ ವಿವಿಧ ಗಣ್ಯವ್ಯಕ್ತಿಗಳು ಹಾಗೂ ಪೂಜ್ಯ ಸ್ವಾಮೀಜಿಗಳ ಸಮ್ಮುಖದಲ್ಲಿ ನೆರವೇರಿತು. ದೀಪಾರಾಧನೆ ವಾಸ್ತುಹೋಮ ಸೇರಿದಂತೆ ವಿವಿಧ ವಿಧಿವಿಧಾನಗಳು ನಡೆದು ನೂತನ ಬಿಂಬಕ್ಕೆ ಜಲಾಧಿವಾಸ ಮತ್ತು ಕ್ಷೀರಾಧಿವಾಸ ಮಹಾಮಂಗಳಾರತಿ ನೆರವೇರಿಸಲಾಯಿತು. ಗೋಪುರ ಕಳಶ ಸ್ಥಾಪನೆ ಮತ್ತು ನವಗ್ರಹ ಹೋಮ, ಪ್ರತಿಷ್ಠಾಂಗ ಹೋಮ, ಕುಂಭಾಭಿಷೇಕ ನಡೆಸಲಾಯಿತು.

ಮೆರವಣಿಗೆ;

       ಗ್ರಾಮದ ರಾಜ ಬೀದಿಗಳಲ್ಲಿ ಗಣಪತಿ ವಿಗ್ರಹವನ್ನು ರಥದ ಮೇಲೆ ಮೆರವಣಿಗೆ ಮಾಡಲಾಯಿತು. ಈ ವೇಳೆ ಮಹಿಳೆಯರು ಕಳಸ ಹೊತ್ತು ಸಾಗಿದರು. ಕುಂಭ ಮೇಳದೊಂದಿಗೆ ಡಂಖವಾದ್ಯ, ವೀರಗಾಸೆ, ನಂದಿಧ್ವಜ, ವೀರಗಾಸೆ ಸೇರಿದಂತೆ ಜಾನಪದ ಕಲಾ ತಂಡಗಳ ಜೊತೆಗೆ ಗ್ರಾಮದ ಹದಿನೆಂಟು ಕೋಮಿನ ಜನರ ಸಮ್ಮುಖದಲ್ಲಿ ಅದ್ಧೂರಿ ಮೆರವಣಿಗೆ ನಡೆಯಿತು.

      ಸ್ಥಿರಬಿಂಬ ಪ್ರತಿಷ್ಠಾಪನೆ ಮತ್ತು ಕಳಸ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ತುಮಕೂರಿನ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ, ಹೀರೆಮಠದ ಡಾ.ಶಿವನಂದ ಶಿವಾಚಾರ್ಯಸ್ವಾಮೀಜಿ, ಆದಿಚುಂಚನಗಿರಿ ಮಹಾ ಸಂಸ್ಥಾನ ತುಮಕೂರು ಶಾಖಾ ಮಠದ ಶ್ರೀ ಮಂಳನಾಥಸ್ವಾಮೀಜಿ, ಜಂಗಮ ಮಠದ ಶ್ರೀಗಂಗಾಧರ ಸ್ವಾಮೀಜಿ, ಮಹಾಲಕ್ಷ್ಮಿಪೀಠದ ಜ್ಞಾನಾನಂದಪುರಿ ಸ್ವಾಮೀಜಿ, ಆದಿಜಾಂಬವ ಶಾಖಾ ಮಠದ ಶ್ರೀ ಷಡಕ್ಷರಿ ಮುನಿಸ್ವಾಮೀಜಿ, ಜಿಪಂ ಸದಸ್ಯ ಶಿವಕುಮಾರ್ ಹಾಗೂ ಗ್ರಾಮದ ಎಲ್ಲಾ ಚುನಾಯಿತ ಸದಸ್ಯರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link