ಸರ್ಕಾರಿ ಯೋಜನೆಗಳು ಪ್ರತಿ ಗ್ರಾಮಕ್ಕೂ ತಲುಪಬೇಕು :ವಿನೋತ್ ಪ್ರಿಯಾ

ಚಿತ್ರದುರ್ಗ :

    ಸರ್ಕಾರದ ಎಲ್ಲಾ ಯೋಜನೆಗಳು ಪ್ರತಿಯೊಂದು ಗ್ರಾಮಕ್ಕೂ ತಲುಪಬೇಕು. ಎಲ್ಲಾ ಜನರು ಇದರ ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕು ಎಂಬ ಉದ್ದೇಶದಿಂದ ಗ್ರಾಮಾಭಿವೃದ್ದಿ ಆಸ್ತಿ ರಿಜಿಸ್ಟಾರ್‌ನಲ್ಲಿ ಎಲ್ಲಾ ವಿವರ ದಾಖಲಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮಾಭಿವೃದ್ಧಿ ಆಸ್ತಿ ನೋಂದಣಿ ರೂಪುರೇಷೆ ಕುರಿತ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

     ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ, ಜಿಲ್ಲೆಯ ಪ್ರತಿಯೊಂದು ಹಳ್ಳಿಗಳು ಸರ್ಕಾರದ ಸೌಲಭ್ಯಗಳನ್ನು ಪಡೆದು ಅಭಿವೃದ್ಧಿಯಾದರೇ ನಮ್ಮ ಚಿತ್ರದುರ್ಗ ಸ್ವರ್ಗಭೂಮಿಯಾಗಿರುತ್ತದೆ. ಹಳ್ಳಿಯಲ್ಲಿರುವ ಮಾನವ ಸಂಪನ್ಮೂಲ ಹಾಗೂ ಅದರ ಸ್ಥಿತಿಗತಿಗಳ ಕುರಿತ ಒಂದು ನೀಲನಕ್ಷೆ ರಚಿಸಿಬೇಕು. ಆಗ ಹಳ್ಳಿ ಪಡೆದಿರುವ ಸೌಲಭ್ಯ ಮತ್ತು ಪಡೆಯದೇ ಇರುವ ಸೌಲಭ್ಯಗಳ ಕುರಿತ ಒಂದು ಸಂಪೂರ್ಣ ಮಾಹಿತಿ ದೊರೆಯುತ್ತದೆ.

ವಿನೂತನ ಪ್ರಯತ್ನ :

    ಆಡಳಿತದಲ್ಲಿ ಪಾರದರ್ಶಕಕತೆಯನ್ನು ಜಾರಿಗೆ ತರುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಎಲ್ಲಾ ಹಳ್ಳಿಗಳ ಹೆಸರು, ಜನಸಂಖ್ಯೆ, ದಿವ್ಯಾಂಗರು, ಮಂಗಳಮುಖಿಯರು, ಪರಿಶಿಷ್ಟ ಜಾತಿ ಮತ್ತು ಪ.ಪಂಗಡದವರ ದತ್ತಾಂಶ, ಕೇಂದ್ರ ಹಾಗೂ ರಾಜ್ಯ ಸರ್ಕಾರದಲ್ಲಿರುವ ಇಲಾಖಾವಾರು ಯೋಜನೆಗಳು ಮತ್ತು ಫಲಾನುಭವಿಗಳು, ಭೌತಿಕ ಲಕ್ಷಣಗಳು (ಕಾಮಗಾರಿ ನಡೆಯುವ, ನಡೆಯುತ್ತಿರುವುದರ ಬಗ್ಗೆ) ಒಂದು ಗ್ರಾಮದ ಸಂಪೂರ್ಣ ಚಿತ್ರಣವನ್ನು ಬಿಂಬಿಸುವAತಹ ಎಲ್ಲಾ ಮಾಹಿತಿಗಳನ್ನೊಳಗೊಂಡ ಗ್ರಾಮಾಭಿವೃದ್ಧಿ ಆಸ್ತಿ ನೋಂದಣಿಗೆ ಸಂಬAಧಪಟ್ಟ ತಂತ್ರಾಂಶವನ್ನು (ಸಾಫ್ಟ್ವೇರ್) ಸಿದ್ಧಪಡಿಸುವಂತೆ ಎನ್.ಐ.ಸಿ. ಅಧಿಕಾರಿಗಳಿಗೆ ತಿಳಿಸಿದರು.

      ಸರ್ಕಾರ ವಿವಿಧ ಇಲಾಖೆಯಲ್ಲಿ ಜಾರಿಗೆ ತಂದಿರುವ ಎಲ್ಲಾ ಯೋಜನೆಗಳ ಮಾಹಿತಿಯನ್ನು ಸಿ.ಪಿ.ಓ ಅವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಬೇಕು. ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ಯೋಜನೆಗಳ ಸೌಲಭ್ಯ ಪಡೆದ ಫಲಾನುಭವಿಗಳ ಹೆಸರು ಮತ್ತು ಪಡೆದ ಯೋಜನೆಗಳ ವಿವರವನ್ನು ದಾಖಲಿಸಬೇಕು. ಇದರಿಂದ ಯೋಜನೆಗಳು ಒಮ್ಮೆ ಪಡೆದ ಫಲಾನುಭವಿಗಳಿಗೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬಹುದು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು. ಯೋಜನೆಗಳು ಸಾರ್ವಜನಿಕರಿಗೆ ತಲಿಪಿಸುವಲ್ಲಿ ಪಿ.ಡಿ.ಓ ಗಳ ಪಾತ್ರ ಬಹುಮುಖ್ಯವಾದುದು ಎಂದರು.

      ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ. ಸತ್ಯಭಾಮ ಅವರು ಬರೀ ರಸ್ತೆಗಳ ಅಭಿವೃದ್ಧಿಯಾದರೇ ಸಾಲದು, ಗ್ರಾಮಗಳಲ್ಲಿ ಸ್ಮಶಾನಗಳ ಅಭಿವೃದ್ಧಿಯಾಗಬೇಕು. ನೀರಿನ ವ್ಯವಸ್ಥೆಯಿರುವ ಜಾಗದಲ್ಲಿ ಉದ್ಯಾನವನಗಳನ್ನು ನಿರ್ಮಿಸಬೇಕು. ಕಸದ ತೊಟ್ಟಿಗಳ ದುರಸ್ತಿ ಕಾರ್ಯ, ಒಳಚರಂಡಿ ವ್ಯವಸ್ಥೆ ವೃದ್ಧಿಸಿದರೆ ಹಳ್ಳಿಗಳ ಸಮಗ್ರ ಅಭಿವೃದ್ಧಿಯಾಗುತ್ತದೆ ಎಂದು ಸಭೆಗೆ ತಿಳಿಸಿದರು.

        ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆಗಳಿದ್ದು ಇದರಲ್ಲಿ ಈ ಎಲ್ಲಾ ಯೋಜನೆಗಳ ವಿವರವನ್ನು ದಾಖಲಿಸಿ ಯಾವ, ಯಾವ ಫಲಾನುಭವಿಗಳು ಪಡೆದಿದ್ದಾರೆ ಎಂದು ವಿವರ ದಾಖಲಿಸುವುದರಿಂದ ಇತರೆ ಫಲಾನುಭವಿಗಳ ಆಯ್ಕೆ ಸುಲಭವಾಗಲಿದೆ. ಈ ಹಿನ್ನೆಲೆಯಲ್ಲಿ ಒಂದು ಸಮಗ್ರವಾದ ಅಂಕಿ ಅಂಶಗಳನ್ನು ಪಡೆಯುವುದರಿಂದ ಮೂಲಸೌಕರ್ಯ ಅಭಿವೃದ್ದಿ ಹಾಗೂ ಮಾನವ ಸಂಪನ್ಮೂಲ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದರು.

        ಸಭೆಯಲ್ಲಿ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕ ರಾಜಶೇಖರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಜೆ.ಎಂ.ಐ.ಟಿ. ಇಂಜಿನಿಯರಿAಗ್ ಕಾಲೇಜಿನ ಪ್ರಾಂಶುಪಾಲ ಡಾ: ಬಿ.ಸಿ.ಶಾಂತಪ್ಪ, ನಗರಸಭೆ ಪೌರಾಯುಕ್ತ ಜೆ.ಟಿ ಹನುಮಂತರಾಜ್, ಬೆಳಗೆರೆ ಗ್ರಾ.ಪಂ. ಪಿಡಿಒ ಬೆಳಗೆರೆ ಗುಂಡಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link