ಚಳ್ಳಕೆರೆ
ಕಳೆದ ಹಲವಾರು ದಶಕಗಳಿಂದ ಯುಗಾದಿ ಹಬ್ಬದ ಹಿನ್ನೆಲೆ ಬುಡಕಟ್ಟು ಸಂಪ್ರದಾಯದಂತೆ ದಳವಾಯಿ ವೇಷಧರಿಸಿ ವಿದ್ಯಮಾನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು, ವಿಶೇಷವಾಗಿ ದೊರೆಗಳ ಸಂಪ್ರದಾಯ ಆಚರಣೆಯಲ್ಲಿರುವ ಗ್ರಾಮಗಳಿಗೆ ದಳವಾಯಿ ವೇಷದಲ್ಲಿ ತೆರಳಿ ಅಲ್ಲಿನ ಜನರಿಗೆ ದೊರೆಗಳ ಸಂಪ್ರದಾಯದ ಬಗ್ಗೆ ತಿಳಿಸಿ ನೀಡುವ ಕಾಣಿಕೆಯನ್ನು ಪಡೆದು ಬರುವ ಸಂಪ್ರದಾಯ ಇಂದಿಗೂ ಜಾರಿಯಲ್ಲಿದ್ದು,
ಈ ವರ್ಷವೂ ಸಹ ಇದನ್ನು ಆಚರಣೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ, ದಳವಾಯಿ ಸಂಪ್ರದಾಯದ ಹಿರಿಯ ಮುಖ್ಯಸ್ಥ ಕೆ.ಪಿ.ಭೂತಯ್ಯ ತಿಳಿಸಿದರು. ಅವರು, ಬುಧವಾರ ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ದಳವಾಯಿ ಸಂಪ್ರದಾಯದಂತೆ ವೇಷಧರಿಸಿ ಗ್ರಾಮದ ಹಲವಾರು ನೆಂಟರಿಷ್ಟರು, ದೊರೆಗಳ ಮನೆಗಳಿಗೆ ತೆರಳಿ ದೊರೆಗಳು ಆಳಿದ ಇತಿಹಾಸದ ಬಗ್ಗೆ ಮಾಹಿತಿ ನೀಡಿ, ದೊರೆಗಳ ಶೌರ್ಯ ಮತ್ತು ಸಾಹಸಗಳನ್ನು ಒಳಗಿ(ತಿಳಿಸಿ), ಜನತೆಯ ಕಲ್ಯಾಣಕ್ಕಾಗಿ ದೊರೆಗಳು ಕೈಗೊಂಡ ಅನೇಕ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು.
ಕಾಲವೇಹಳ್ಳಿ ಗ್ರಾಮದ ವಿವಿಧ ಮನೆಗಳಿಗೆ ತೆರಳಿದ ದಳವಾಯಿ ವೇಷಧಾರಿ ಕೆ.ಪಿ.ಭೂತಯ್ಯ ಹಾಗೂ ಇತರರು, ನಾಡಿನ ಕಲ್ಯಾಣಕ್ಕಾಗಿ ದೊರೆಗಳು ಸದಾಕಾಲ ಜಾಗೃತಿಯಿಂದ ರಕ್ಷಣೆ ಮುಂದಾಗುತ್ತಿದ್ದರಲ್ಲದೆ, ಯಾವುದೇ ಕಾರಣಕ್ಕೂ ಶತ್ರುಗಳು ನುಗ್ಗಿ ದಾಳಿ ನಡೆಸದಂತೆ ಎಚ್ಚರಿಕೆ ವಹಿಸುತ್ತಿದ್ದ ಬಗ್ಗೆ ತಿಳಿಸಿದರು. ದಳವಾಯಿ ವೇಷಧಾರಿಗಳನ್ನು ನೋಡಿದ ಗ್ರಾಮದ ಜನರು ಸಂಸತ ಪಟ್ಟರಲ್ಲದೆ ನಾಡಿನ ಸಮಸ್ತ ಕಲ್ಯಾಣಕ್ಕಾಗಿ ಹೋರಾಡಿದ ದೊರೆಗಳ ಸಾಮರ್ಥದ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಗ್ರಾಮದಲ್ಲಿ ಸುತ್ತಾಡಿದ ದಳವಾಯಿ ವೇಷಧಾರಿಗೆ ದೊರೆ ವಂಶಸ್ಥರು, ನೆಂಟರು ಅವರಿಗೆ ಕೈಲಾದ ಧನ, ದಾನ್ಯ, ಪ್ರಾಣಿಗಳ ಉಡುಗೊರೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
