ಚೇಳೂರು
ನೂತನ ಗ್ರಾಮ ಪಂಚಾಯಿತಿಯ ಕಟ್ಟಡ ನಿರ್ಮಾಣ ಮಾಡಲು ನಮ್ಮ ಅನುದಾನದಲ್ಲಿ ಹಣದ ಸಹಾಯವನ್ನು ಮಾಡುತ್ತೇವೆ ಎಂದು ಜಿಪಂ ಸದಸ್ಯೆ ಕೆ.ಆರ್.ಭಾರತಿಹಿತೇಶ್ ಹೇಳಿದರು.ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗುವ ಗ್ರಾಮ ಪಂಚಾಯಿತಿಯ ಕಟ್ಟಡದ ಶಂಕುಸ್ಥಾಪನೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಚೇಳೂರು ದಿನನಿತ್ಯ ಬೆಳೆಯುತ್ತಿರುವ ಗ್ರಾಮವಾಗಿದ್ದು ಮುಂದೆ ತಾಲ್ಲೂಕು ಆಗುವ ಎಲ್ಲಾ ರೀತಿಯಲ್ಲೂ ಅರ್ಹವಾಗಿರುವ ದೊಡ್ಡ ಹೋಬಳಿ ಕೇಂದ್ರವಾಗಿದೆ. ಇಂತಹ ಸ್ಥಳದಲ್ಲಿ ಸಾರ್ವಜನಿಕರಿಗೆ ಅನುಕೂಲಕ್ಕೆ ತಕ್ಕಂತೆ ಉತ್ತಮವಾದ ಕಟ್ಟಡದ ಅವಶ್ಯಕತೆ ಇದೆ.
ಇದಕ್ಕೆ ಎಲ್ಲರ ಸಹಕಾರದಿಂದ ಆದಷ್ಟು ಬೇಗ ಉತ್ತಮವಾದ ಕಟ್ಟಡ ನಿರ್ಮಾಣವಾಗಲಿ ಎಂದರು.ಈ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಕೆ.ಎನ್.ನಾಗರತ್ನಮ್ಮ, ತಾಪಂ ಅಧ್ಯಕ್ಷೆ ಅನುಸೂಯನರಸಿಂಹಮೂರ್ತಿ, ಉಪಾಧ್ಯಕ್ಷೆ ದೀಪಿಕಾಮಹೇಶ್, ಎಪಿಎಂಸಿ ಸದಸ್ಯಲೋಕೇಶ್ವರ್, ಮಾಜಿಗ್ರಾಪಂಅಧ್ಯಕ್ಷರಾದ ದುರ್ಗಯ್ಯ, ಸಿದ್ದಲಿಂಗಪ್ಪ, ಸಿ.ಟಿ.ಶಾರದಮ್ಮ,ಪಿಡಿಒಜಿ ಶ್ರೀನಿವಾಸ್, ಕಾರ್ಯದರ್ಶಿ ನೇಮೆಗೌಡರಾಜು, ಹೆಚ್.ಎಂ.ರಂಗರಾಜು, ಗ್ರಾಪಂ ಸದಸ್ಯರು, ಸಾರ್ವಜನಿಕರು ಹಾಗೂ ಇತರರು ಹಾಜರಿದ್ದರು.