ದಾವಣಗೆರೆ:
ನಗರದ ಜಯದೇವ ಉದ್ಯಾನವನದಲ್ಲಿ ಇತ್ತೀಚೆಗೆ ನಡೆದ ಜಿಲ್ಲೆಯ ಅತಿಥಿ ಉಪನ್ಯಾಸಕರ ಸಂಘದ ಸಭೆಯಲ್ಲಿ ಸೆ.27ರ ರಂದು ಜಿಲ್ಲೆಯಎಲ್ಲಾ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿಜಿಲ್ಲಾ ಸಮಿತಿಯನ್ನು ಪುನರ್ರಚಿಸಲಾಯಿತು. ಜಿಲ್ಲಾಧ್ಯಕ್ಷರಾಗಿಕೊಟ್ರೇಶ್.ಹೆಚ್, ಉಪಾಧ್ಯಕ್ಷರಾಗಿ ಶಂಕರಯ್ಯ, ಪ್ರಶಾಂತ್ ಶರ್ಮ, ಶಿವಕುಮಾರ್ ಯರಗಟ್ಟಿಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ದೇವೆಂದ್ರಪ್ಪ, ಕಾರ್ಯದರ್ಶಿಯಾಗಿ ಡಾ. ಪ್ರಭಾಕರ್, ಸಂತೋಷ್, ಸಂಘಟನಾ ಕಾರ್ಯದರ್ಶಿಗಳಾಗಿ ಧನಂಜಯ್.ಎಂ.ಆರ್, ರಾಘವೇಂದ್ರ.ಆರ್, ಬಸವರಾಜ್.ಎ.ಕೆ, ರಾಘವೇಂದ್ರ.ಎಂ.ಆರ್, ಸಹಕಾರ್ಯದರ್ಶಿಯಾಗಿ ಮೋಹನ್.ಕೆ, ರಾಜಕುಮಾರ್.ಸಿ, ಮಹಿಳಾ ಕಾರ್ಯದರ್ಶಿಯಾಗಿ ಪಿ.ವಿ.ಸಿದ್ಧಮ್ಮ, ಸಿ.ಮಂಜುಳಾ, ಡಾ.ಎ.ಎಂ ಭಾರತಿ, ಕಾನೂನು ಸಲಹೆಗಾರರಾಗಿಬಿ.ಎಸ್.ಗಣೇಶ್, ಪತ್ರಿಕಾ ಸಲಹೆಗಾರರಾಗಿಗಂಗಾಧರ್ ಡಿ.ಪಿ, ಚಂದ್ರಶೇಖರ್.ಕೆ, ಗಜೇಂದ್ರ ಇವರನ್ನು ನೇಮಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








