ಎರಡನೇ ದಿನಕ್ಕೆ ಕಾಲಿಟ್ಟ ಹಮಾಲಿಗಳ ಸತ್ಯಾಗ್ರಹ

ಚಳ್ಳಕೆರೆ

         05 ಕಳೆದ ಸುಮಾರು 40 ವರ್ಷಗಳಿಂದ ಚಳ್ಳಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವಿವಿಧ ಹಂತಗಳಲ್ಲಿ ವಿವಿಧ ಸಂಘಟನೆಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಕಾರ್ಮಿಕರು ಪ್ರಾಮಾಣಿಕತೆಯಿಂದ ಶ್ರಮವಹಿಸಿ ದುಡಿದ್ದಾರೆ. ಮಾರುಕಟ್ಟೆಯ ಅಭಿವೃದ್ಧಿಯಲ್ಲಿ ಇಲ್ಲಿನ ಹಮಾಲರ ಕೊಡುಗೆ ಸಹ ಅಪಾರವಾಗಿದೆ. ಆದರೆ, ಇಲ್ಲಿ ಕಾರ್ಯನಿರ್ವಹಿಸುವ ಎಲ್ಲರಿಗೂ ನಿವೇಶನ ಸೌಲಭ್ಯ ನೀಡುವಂತೆ ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ನಿವೇಶನ ದೊರೆಯುವ ತನಕ ಹೋರಾಟ ನಿಲ್ಲದು ಎಂದು ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕ ಫೆಡರೇಷನ್ ತಾಲ್ಲೂಕು ಅಧ್ಯಕ್ಷ ಕೆ.ವಿ.ವೀರಭದ್ರಪ್ಪ ತಿಳಿಸಿದ್ದಾರೆ.

        ನಿವೇಶನ ನೀಡುವಂತೆ ಒತ್ತಾಯಿಸಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಅನಿರ್ಧಿಷ್ಟಾಕಾಲ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಮಾರುಕಟ್ಟೆ ಆಡಳಿತ ಮಂಡಳಿ ನಿರ್ಲಕ್ಷ್ಯೆ ತನದಿಂದ ಇಂದು 500ಕ್ಕೂ ಹೆಚ್ಚು ಕಾರ್ಮಿಕರು ನಿವೇಶನವಿಲ್ಲದೆ ಪರಿತಪಿಸುತ್ತಿದ್ದಾರೆ.

         ಈಗಾಗಲೇ ಕ್ಷೇತ್ರದ ಶಾಸಕ ಟಿ.ರಘುಮೂರ್ತಿಯವರಿಗೂ ಸಹ ಮನವಿ ಮಾಡಿದ್ದು, ಅವರೂ ಸಹ ಈ ವಿಚಾರದಲ್ಲಿ ಸಕರಾತ್ಮಕವಾಗಿ ಸ್ಪಂದಿಸುತ್ತಿಲ್ಲ, ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಆಮ್ಲಿನ್ ಆದಿತ್ಯ ಬಿಸ್ವಾಸ್ ರಿ.ಸರ್ವೆ ನಂ.57ರಲ್ಲಿ 98 ಎಕರೆ ಸರ್ಕಾರಿ ಗೋಮಾಳವಿದ್ದು, ಅದರಲ್ಲಿ 15 ಎಕರೆ ಭೂಮಿಯನ್ನು ಹಮಾಲರಿಗೆ ವಸತಿ ಯೋಜನೆಗೆ ಮೀಸಲಿಟ್ಟಿದ್ದು, ಇದಕ್ಕಾಗಿ 27 ಲಕ್ಷ ಹಣವನ್ನು ಎಪಿಸಿಎಂಸಿ ವತಿಯಿಂದ ಸರ್ಕಾರಕ್ಕೆ ಪಾವತಿಸುವಂತೆ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯೆತನದಿಂದ ಸಕಾಲದಲ್ಲಿ ಹಣ ಪಾವತಿಯಾಗದೇ ಇದಿದ್ದು ನಿವೇಶನ ಕೈತಪ್ಪಲು ಕಾರಣವಾಗಿದೆ ಎಂದು ತಮ್ಮ ಅಸಮದಾನವನ್ನು ತೋಡಿಕೊಂಡರು.

         ಪ್ರಧಾನ ಕಾರ್ಯದರ್ಶಿ ಟಿ.ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಬೇಡಿಕೆ ಈಡೇರಿಕೆಯಿಂದ ಮಾರುಕಟ್ಟೆಗೆ ಆರ್ಥಿಕ ತೊಂದರೆಯಾಗದು. ನಿಗಧಿ ಪಡಿಸಿದ ಹಣವನ್ನು ಪಾವತಿಸಿದರೆ ಎಲ್ಲರಿಗೂ ನಿವೇಶನಗಳು ದೊರೆಯುತ್ತಿದ್ದವು ಆದರೆ ಅಧಿಕಾರಿ ವರ್ಗದ ಉದಾಸೀನತೆಯಿಂದ ಇಂದು ಎಲ್ಲಾ ಹಮಾಲರು ಸಂಕಷ್ಟಕ್ಕೀಡಾಗಿದ್ದಾರೆ. ನಮಗೆ ಸರ್ಕಾರ ನಿವೇಶನ ನೀಡುವ ತನಕ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

          ಈ ಸಂದರ್ಭದಲ್ಲಿ ಲೋಡಿಂಗ್ ಅಂಡ್ ಅನ್‍ಲೋಡಿಂಗ್ ಅಧ್ಯಕ್ಷ ಟಿ.ನಿಂಗಣ್ಣ, ಪ್ರಧಾನ ಕಾರ್ಯದರ್ಶಿ ಕೆ.ತಿಪ್ಪೇಸ್ವಾಮಿ, ನಾರಾಯಣ, ಚಕ್ಕಡಿ ಗಾಡಿ ಹಮಾಲ ಸಂಘದ ಅಧ್ಯಕ್ಷ ಎಸ್.ತಿಪ್ಪೇಸ್ವಾಮಿ, ಕಾರ್ಯದರ್ಶಿ ಕೆ.ಬಿ.ಜಯಣ್ಣ, ಉಪಾಧ್ಯಕ್ಷ ಈ.ನಾಗರಾಜ ಮುಂತಾದವರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link