ಲಾಕ್ ಡೌನ್ ನಿಯಮ ಉಲ್ಲಂಘನೆ : ಹಾರ್ಡ್ ವೇರ್ ಅಂಗಡಿ ಸೀಜ್

ಗುಬ್ಬಿ

      ಕೊರೋನಾ ವೈರಸ್‍ನಿಂದಾಗಿ ಇಡಿ ದೇಶವೆ ಲಾಕ್ ಔಟ್ ಆಗಿರುವುದರಿಂದ ಜನಸಾಮಾನ್ಯರಿಗೆ ಅಗತ್ಯವಿರುವ ಆಹಾರ ಸಾಮಗ್ರಿ ಸೇರಿದಂತೆ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮತ್ತು ತರಕಾರಿ ಅಂಗಡಿಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಆದರೆ ಇಂದು ಬೆಳಗ್ಗೆ ಪಟ್ಟಣದಲ್ಲಿ ಹಾರ್ಡ್‍ವೇರ್ ಅಂಗಡಿಗಳನ್ನು ತೆರೆದು ಬಣ್ಣ ಸೇರಿದಂತೆ ಇತರೆ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಿಡೀರ್ ಧಾಳಿ ನಡೆಸಿದ ತಹಸಿಲ್ದಾರ್ ಡಾ:ಪ್ರದೀಪ್ ಕುಮಾರ್ ಹಿರೇಮಠ್ ಮೂರು ಹಾರ್ಡ್ ವೇರ್ ಅಂಗಡಿಗಳನ್ನು ಸೀಜ್ ಮಾಡಿದ್ದಾರೆ.

     ಲಾಕ್ ಡೌನ್ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸುವ ಹಿತದೃಷ್ಠಿಯಿಂದ ತಾಲ್ಲೂಕಿನ 6 ಹೋಬಳಿಗಳ ಪೈಕಿ ಎರಡು ಹೋಬಳಿಗೆ ಒಂದರಂತೆ ಪ್ಲಯಿಂಗ್ ಸ್ಕೌಡ್ ಮತ್ತು ಪಟ್ಟಣ ವ್ಯಾಪ್ತಿಗೆ ಒಂದು ಪ್ಲಯಿಂಗ್ ಸ್ಕೌಡ್ ರಚಿಸಲಾಗಿದ್ದು ಈ ತಂಡಗಳು ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಸಂಚರಿಸಿ ಕೊರೋನಾ ರೋಗದ ಬಗ್ಗೆ ಸಮಗ್ರವಾದ ಮಾಹಿತಿ ಸಂಗ್ರಯಿಸಿ ತಾಲ್ಲೂಕು ಅಢಳಿತಕ್ಕೆ ಮಾಹಿತಿ ನೀಡಲಿವೆ ಎಂದು ತಿಳಿಸಿದ ಅವರು ತಾಲ್ಲೂಕಿನಾಧ್ಯಂತ 144 ಸೆಕ್ಷನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕರು ಗುಂಪುಕಟ್ಟುವುದು, ಸಾಮಾಜಿಕ ಅಂತರ ಕಾಪಾಡದಿರುವುದು ಮತ್ತು ಅನಗತ್ಯವಾಗಿ ರಸ್ತೆಗಳಲ್ಲಿ ಸಂಚರಿಸುವುದು ಕಾನೂನು ಬಾಹಿರವಾಗಿದ್ದು ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಯಾವದೆ ಕಾರಣಕ್ಕೂ ಮನೆಯಿಂದ ಹೊರಬರಬಾರದು ಈಗಾಗಲೆ ಅಗತ್ಯವಿರುವ ಪಡಿತರ ವಿತರಣೆ ಸೇರಿದಂತೆ ದಿನಬಳಕೆ ವಸ್ತುಗಳು ದೊರೆಯುವಂತೆ ನಿಗದಿತ ಅವಧಿಯಲ್ಲಿ ಅಂಗಡಿಗಳನ್ನು ತೆರೆಯಲು ವ್ಯವಸ್ಥೆ ಮಾಡಲಾಗಿದೆ ಪದೆ ಪದೆ ಅನಗತ್ಯವಾಗಿ ಓಡಾಡುತ್ತಿರುವುದು ಕಂಡುಬರುತ್ತಿದ್ದು ಪೋಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

      ರೈತರ ಪಂಪ್‍ಮೋಟಾರ್ ದುರಸ್ಥಿ ಕೆಲಸಗಳಿಗೆ ಪರವಾನಗಿ ಪಡೆದ ಅಂಗಡಿಗಳನ್ನು ಗುರುತಿಸಿ ರೈತರ ಕೆಲಸ ಮಾಡಿಕೊಡಲು ಅನುವು  ಮಾಡಲಾಗಿದೆ. ರೈತರಿಗೆ ಅವಶ್ಯವಿರುವ ಪರಿಕರಗಳನ್ನು ಮಾರಾಟ ಮಾಡಿದ ಬಳಿಕ ಅಂಗಡಿಗಳನ್ನು ಮುಚ್ಚಬೇಕು. ಕೆಲ ಅಂಗಡಿಗಳಲ್ಲಿ ಹಾರ್ಡ್‍ವೇರ್ ಜತೆ ಪೇಂಟ್ಸ್ ಸೇರಿದಂತೆ ಇನ್ನಿತರ ವಸ್ತುಗಳ ಮಾರಾಟ ಇರುವ ಕಾರಣ ಅಂತಹ ಅಂಗಡಿಗೆ ಅವಕಾಶ ಕಲ್ಪಿಸಿಲ್ಲ. ರೈತರಿಗೆ ಅನುಕೂಲವಾಗುವ 8 ಅಂಗಡಿಗಳನ್ನು ತಾಲ್ಲೂಕಿನಲ್ಲಿ ಗುರುತಿಸಿ ಅವರಿಗೆ ಮಾತ್ರ ರೈತರ ಸಂಪರ್ಕಿಸಿದ ಸಂದರ್ಭದಲ್ಲಿ ಮಾತ್ರ ಅಂಗಡಿ ತೆರೆಯಲು ಅನುವು ಮಾಡಲಾಗಿದೆ ಎಂದು ತಿಳಿಸಿದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link