ಆರೋಗ್ಯವಂತ ಶಿಶು ಪ್ರದರ್ಶನ’ ಕಾರ್ಯಕ್ರಮ

ದಾವಣಗೆರೆ 

         ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಹಲವಾಗಲು ಇವರ ಸಂಯುಕ್ತಾಶ್ರಯದಲ್ಲಿ ಡಿ.18 ರಂದು ಹಲುವಾಗಲು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ‘ಆರೋಗ್ಯವಂತ ಶಿಶು ಪ್ರದರ್ಶನ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

           ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜ್ ಮಾತಾನಾಡಿ, ಪ್ರತಿ ದಿನ ಮಕ್ಕಳನ್ನು ಸ್ನಾನ ಮಾಡಿಸಿ ಶುದ್ದ ಬಟ್ಟೆ ಹಾಕಬೇಕು. ಎದೆಹಾಲು ನೀಡುವಾಗ ಸ್ತನವನ್ನು ಸ್ವಚ್ಚಗೊಳಿಸದೇ ಹಾಗೇ ಹಾಲನ್ನು ಕುಡಿಸಿದರೆ ಪರೋಕ್ಷವಾಗಿ ಮಗುವಿನ ದೇಹದೊಳಗೆ ರೋಗಾಣುಗಳನ್ನು ತುಂಬಿದಂತೆಯಾಗುತ್ತದೆ. ಇದರಿಂದ ಅತಿಸಾರ ಭೇದಿ, ಆಮಶಂಕೆ ಭೇದಿ ಆಗುವುದರೊಂದಿಗೆ ಮಗು ತೂಕ ಕಳೆದುಕೊಳ್ಳುತ್ತದೆ ಎಂದರು.

          ಊಟಕ್ಕೂ ಮುಂಚೆ, ಶೌಚಾಲಯ ಬಳಸಿದ ಮೇಲೆ ಸೋಪಿನಿಂದ ಕೈ ತೊಳೆಯಬೇಕು. ಇದರಿಂದ ನೀವು ಹಾಗೂ ನಿಮ್ಮ ಮಕ್ಕಳು ಆರೋಗ್ಯದಿಂದ ಇರಲು ಅನುಕೂಲವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕಿ.ಪು.ಆ.ಸ ತಿಪ್ಪೇಸ್ವಾಮಿ, ಮಂಜುನಾಥ ರೆಡ್ಡಿ, ಕಿ.ಮ.ಆ.ಸ ಪ್ರಭಾವತಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತಿರಿದ್ದರೆಂದು ಪ್ರಕಟಣೆ ತಿಳಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link