ಹಿಂದೂ ಗಣಪತಿ ಬೃಹತ್ ಶೋಭಾಯಾತ್ರೆಗೆ ಸಜ್ಜು

ಚಿತ್ರದುರ್ಗ;

      ವಿಶ್ವ ಹಿಂದೂ ಪರಿಷತ್, ಭಜರಂಗ ದಳವತಿಯಿಂದ ಪ್ರತಿಷ್ಟಾಪಿಸಲಾಗಿರುವ ಹಿಂದೂ ಮಹಾಗಣಪತಿ ವಿಸರ್ಜನೆಯ ಅಂಗವಾಗಿ ನಡೆಯಲಿರುವ ಶೊಭಾಯಾತ್ರೆಗೆ ಕೋಟೆ ನಗರಿ ಚಿತ್ರದುರ್ಗ ಸಜ್ಜಾಗಿದೆ.

     ಇಲ್ಲಿನ ಸ್ಟೇಡಿಯಂ ರಸ್ತೆಯಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪಿಸಲಾಗಿದ್ದು, ಶನಿವಾರ ವಿಸರ್ಜನೆ ಮಾಡಲಾಗುತ್ತಿದೆ. ಇದರ ಅಂಗವಾಗಿ ನಡೆಯುವ ಬೃಹತ್ ಶೋಭಾ ಯಾತ್ರೆಗೆ ಚಾರಿತ್ರಿಕ ನಗರ ಚಿತ್ರದುರ್ಗವನ್ನು ಸಜ್ಜುಗೊಳಿಸಲಾಗುತ್ತಿದೆ.

     ಇದರ ಅಂಗವಾಗಿ ಇಡೀ ನಗರವನ್ನು ಕೇಸರಿಯಿಂದ ಅಲಂಕಾರ ಮಾಡಲಾಗಿದೆ. ಹಿಂದೂ ಮಹಾಗಣಪತಿ ವಿಸರ್ಜನೆಗೆ ಇನ್ನೆರಡು ದಿನ ಬಾಕಿ ಇರುವಾಗಲೇ ಚಿತ್ರದುರ್ಗ ನಗರ ಅಕ್ಷರಶಃ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ನಗರದ ಪ್ರಮುಖ ರಸ್ತೆಗಳೆಲ್ಲವೂ ಸ್ಟೇಡಿಯಂ ರಸ್ತೆಯ ತನಕ ಪೂರ್ಣ ಕೇಸರಿಮಯವಾಗಿವೆ

      ಇನ್ನು ಜಿಲ್ಲಾಧಿಕಾರಿ ವೃತ್ತದಲ್ಲಿ ವೀರ ವನಿತೆ ಒನಕೆ ಓಬವ್ವ ಪುತ್ಥಳಿ, ಜೈನ್ ಸರ್ಕಲ್, ಅಂಬೇಡ್ಕರ್ ವೃತ್ತ, ಮದಕರಿನಾಯಕ ವೃತ್ತ ಗಾಂಧಿ ವೃತ್ತ, ಕನಕ ವೃತ್ತ, ಸಂಗೊಳ್ಳಿರಾಯಣ್ಣ ವೃತ್ತ ಹೀಗೆ ಎಲ್ಲಾ ಕಡೆಯೂ ಕೇಸರಿಯ ಬಟ್ಟೆ, ಬಾವುಟಗಳಿಂದ ಸಿಂಗಾರಗೊಳಿಸಲಾಗಿದೆ. ಸ್ಟೇಡಿಯಂ ರಸ್ತೆಯಿಂದ ಮುಖ್ಯ ರಸ್ತೆ, ಕನಕ ವೃತ್ತದವರೆಗೂ ಕೇಸರಿಯ ಬಟ್ಟೆಗಳಿಂದ ಅಲಂಕಾರ ಮಾಡಲಾಗಿದ್ದು, ಉದ್ದಕ್ಕೂ ಭಕ್ತರು ಮತ್ತು ವಿವಿಧ ರಾಜಕೀಯ ಪಕ್ಷಗಳ ನಾಯಕರ ಪ್ಲೆಕ್ಸ್‍ಗಳು ಸಹ ರಾರಾಜಿಸುತ್ತಿವೆ.

      ಇದೊಂದು ಚಾರಿತ್ರಿಕ ಶೋಭಾಯಾತ್ರೆ ಎಂದೇ ಇತ್ತೀಚಿನ ದಿನಗಳಲ್ಲಿ ಕರೆಸಿಕೊಳ್ಳುತ್ತಿದ್ದು, ಚಿತ್ರದುರ್ಗ ಜಿಲ್ಲೆಯಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದ ವಿಶ್ವ ಹಿಂದೂಪರಿಷತ್, ಭಜರಂಗ ದಳ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಇಲ್ಲಿ ಜಮಾಯಿಸುತ್ತಿದ್ದಾರೆ. ಅಂದಾಜಿನ ಪ್ರಕಾರ ಸುಮಾರು ಎರಡು ಲಕ್ಷದಷ್ಟು ಜನ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

      ವರ್ಷದಿಂದ ವರ್ಷಕ್ಕೆ ಚಿತ್ರದುರ್ಗದ ಹಿಂದು ಮಹಾಗಣಪತಿಯ ಚಾಪು ಹೆಚ್ಚಾಗುತಿದ್ದು , ಯಾವುದೇ ತರಹದ ಅಹಿತಕರ ಘಟನೆ ಇವತ್ತಿವರೆಗು ನಡೆಯದೇ ಅದ್ದೂರಿಯಾಗಿ ಗಣಪನನ್ನ ವಿಸರ್ಜನೆ ಗೊಳಿಸಲಾಗುತ್ತಿದೆ. ಶನಿವಾರ ಬೆಳಗ್ಗೆ 9 ಗಂಟೆಗೆ ಬೃಹತ್ ಶೋಭಾಯಾತ್ರೆಯ ಅದ್ದೂರಿ ಮೆರವಣಿಗೆಯ ಮೂಲಕ ಹಿಂದು ಮಹಾಗಣಪತಿಯ ವಿಸರ್ಜನೆ ನಡೆಯುತದೆ. ಚಂದ್ರವಳ್ಳಿ ಕೆರೆಯ ಸಮೀಪದಲ್ಲಿ ವಿಸರ್ಜಿಸಲಾಗುತ್ತದೆ

ಭಾರೀ ಪೊಲೀಸ್ ಬಂದೋಬಸ್ತ್

       ಇನ್ನು ಪೊಲೀಸ್ ಇಲಾಖೆಯವರು ತಮ್ಮ ಕೆಲಸವನ್ನ ಪ್ರಾರಂಭಿಸಿದ್ದು ಈಗಾಗಲೆ ಬಂದೋಬಸ್ತ್‍ಗೆ ಸಕಲ ಸಿದ್ದತೆ ನಡೆಸಿದ್ದಾರೆ .ಈಗಾಗಲೆ ಬಂದೋಬಸ್ತ್‍ಗಾಗಿ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್ ನಿರ್ಮಾಣ ಮಾಡಲಾಗುತಿದೆ.

      ಕಳೆದ ಬಾರಿ ಯಾವುದೇ ರೀತಿಯ ಗದ್ದಲ ಮತ್ತು ಗೊಂದಲವಾಗದಂತೆ ಎಚ್ಚರವಹಿಸಿದ ಪೋಲಿಸ್ ಇಲಾಖೆ ಮೆರವಣಿಗೆಯ ಮಧ್ಯೆದಲ್ಲಿಯೇ ಪೋಲಿಸ್ ಪಡೆಯನ್ನು ಹಾಕುವುದರ ಮೂಲಕ ಗಲಾಟೆ ಮಾಡಲು ಬಂದವರಿಗೆ ಭಯವನ್ನು ಮೂಡಿಸಿತ್ತು ಜೊತೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದವರಿಗೆ ಯಾವುದೇ ರೀತಿಯ ಭಯ ಇಲ್ಲದಂತೆ ರಕ್ಷಣೆಯನ್ನು ನೀಡಲಾಗಿತ್ತು.

     ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಹಾಗೂ ಗಣಪತಿ ವಿಸರ್ಜನೆ ಮಾಡುವ ಸ್ಥಳವೂ ಸೇರಿದಂತೆ ನಗರದಲ್ಲಿ ಭದ್ರತೆಗಾಗಿ 2000 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಮೆರವಣಿಗೆಯ ಪ್ರತಿ ಕ್ಷಣಗಳನ್ನು ಗಮನಿಸಲು ಡ್ರೋಣ್ ಕ್ಯಾಮೆರಾ, ಸಿಸಿಟಿವಿ ಕ್ಯಾಮೆರಾ ಹಾಗೂ ಹ್ಯಾಂಡಿ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link