ಹೊಸದುರ್ಗ:
ಪಟ್ಟಣದಲ್ಲಿ ಸ್ವಚ್ಚತೆ ಹೇಗಿದೆ ಎಂಬ ಬಗ್ಗೆ ಕಳೆದ ಜನವರಿ 4 ರಿಂದ 31 ರ ವರೆಗೂ ಕೇಂದ್ರದ ಅಧ್ಯಯನ ತಂಡ ಸಂಪೂರ್ಣ ಸಮೀಕ್ಷೆ ಮಾಡಿತ್ತು. ಇಲ್ಲಿನ 3,600 ಜನರಿಂದ ಅಭಿಪ್ರಾಯ ಸಂಗ್ರಾಹಿಸಲಾಗಿತ್ತು. ಸ್ವಚ್ಚತೆ ಉತ್ತಮವಾಗಿರುವುದರಿಂದ ರಾಜ್ಯಕ್ಕೆ ಮಾದರಿ ಪಟ್ಟಣವೆಂದು ಕೇಂದ್ರದ ಅಧ್ಯಯನ ತಂಡ ಫಲಿತಾಂಶ ಪ್ರಕಟಿಸಿತ್ತು.
2018 ರ ಸ್ವಚ್ಚ ಸರ್ವೇಕ್ಷಣೆ ಅಭಿಯಾನದಲ್ಲಿ ಹೊಸದುರ್ಗ ಪುರಸಭೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ಹಿನ್ನೆಲೆ ಬುಧವಾರ ದೆಹಲಿಯಲ್ಲಿ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವಿಕಾರ ಆಯೋಜಿಸಿತ್ತು.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಸ್ವಚ್ಚ ಸರ್ವೇಕ್ಷಣೆ ಅಭಿಯಾನ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿಯವರಾದ “ರಾಮನಾಥ್ ಕೋವಿಂದ್” ಅವರಿಂದ ಪುರಸಭೆ ಆಡಳಿತಾಧಿಕಾರಿ ಎ.ಬಿ.ವಿಜಯ್ಕುಮಾರ್, ಜಿಲ್ಲಾ ಯೋಜನಾ ನಿರ್ದೆಶಕ ಎಸ್. ರಾಜಶೇಖರ್, ಮುಖ್ಯಾಧಿಕಾರಿ ಡಿ.ಉಮೇಶ್, ಪರಿಸರ ಅಭಿಯಂತರರು ತಿಮ್ಮರಾಜು, ಆರೋಗ್ಯಾಧಿಕಾರಿ ಕರೀಂವುಲ್ಲಾ ರವರು ಪ್ರಶಸ್ತಿ ಸ್ವೀಕರಿಸಿದರು. ಇದೇ ವೇಳೆ ಪಟ್ಟಣದ ಪುರಸಭೆ ಸದಸ್ಯರು ಶುಭಕೋರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
