ಆಕಸ್ಮಿಕ ಮನೆಗೆ  ಬೆಂಕಿ ತಗುಲಿ ವಸ್ತುಗಳು  ಭಸ್ಮ

ಚಿಕ್ಕನಾಯಕನಹಳ್ಳಿ
 
    ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಚಂದ್ರಶೇಖರ್ ಎಂಬುವವರ ವಾಸದ ಮನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗೆ ಆಹುತಿಯಾಗಿರುವ ಘಟನೆ ಮಂಗಳವಾರ ನಡೆದಿದೆ.
 
    23ನೇ ವಾರ್ಡ್ನ ನಿವಾಸಿ ಚಂದ್ರಶೇಖರ್ ಗಾರೆ ಕೆಲಸಕ್ಕೆಂದು ಹೊರಗೆ ಹೋಗಿದ್ದರು,  ಅವರ ಪತ್ನಿ ಅಂಗನವಾಡಿಗೆ ಹೋಗಿದ್ದ ಮಕ್ಕಳನ್ನು ಕರೆತರಲೆಂದು ಸಮಯದಲ್ಲಿ ಮನೆಗೆ ಬೆಂಕಿ ತಗುಲಿದೆ, ಬೆಂಕಿ ತಗುಲಿದ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲವಾದ್ದರಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ  ಮನೆಯಲ್ಲಿದ್ದ ಟಿ.ವಿ, ಮಂಚ, ರೇಷನ್ಕಾರ್ಡ್, ಹಣ, ಬಟ್ಟೆ ಹಾಗೂ ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟುಹೋಗಿದ್ದು ಸುಮಾರು 2ರಿಂದ 3ಲಕ್ಷ ರೂ ನಷ್ಟ ಸಾಮಗ್ರಿಗಳು ಬೆಂಕಿಗೆ ಸುಟ್ಟಿವೆ. ಅಗ್ನಿಶಾಮಕ ಠಾಣೆಯವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap