ಒಡಿಶಾ ವಿದ್ಯುತ್ ಜಾಲ ಪುನರ್ ನಿರ್ಮಾಣದಲ್ಲಿ ಹುಳಿಯಾರಿನ ಹುಡುಗ

ಹುಳಿಯಾರು:

    `ಫೋನಿ’ ಚಂಡಮಾರುತದಿಂದ ಹಾನಿಗೊಳಗಾಗಿರುವ ವಿದ್ಯುತ್ ಮಾರ್ಗವನ್ನು ದುರಸ್ತಿಗೊಳಿಸಲು ಹುಳಿಯಾರಿನ ಬೆಸ್ಕಾಂ ಸಿಬ್ಬಂದಿ ಚಂದನ್ ಸೇರಿದಂತೆ ತಿಪಟೂರು ಬೆಸ್ಕಾಂ ವಿಭಾಗದಿಂದ 16 ಮಂದಿ ಒರಿಸ್ಸಾಗೆ ತೆರಳಿದ್ದರು.

      ತಿಪಟೂರು ಬೆಸ್ಕಾಂ ವಿಭಾಗದ ವ್ಯಾಪ್ತಿಗೆ ಬರುವ ಹುಳಿಯಾರು, ಚಿ.ನಾ.ಹಳ್ಳಿ, ತುರುವೇಕೆರೆ, ತಿಪಟೂರಿನ ನುರಿತ ನಿರ್ವಹಣಾ ಸಿಬ್ಬಂದಿ ಈ ಕಾರ್ಯಕ್ಕೆ ಆಯ್ಕೆ ಮಾಡಿ ನಿಯೋಜಿಸಲಾಗಿದ್ದು ಮೇ 17 ರಿಂದ ಒಡಿಶಾದಲ್ಲಿ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.

      ಒಟ್ಟು 10 ನಿರ್ವಹಣಾ ಸಿಬ್ಬಂದಿಯನ್ನು ಒಂದು ತಂಡವನ್ನಾಗಿ ಮಾಡಿ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್‍ಗಳನ್ನು ಮೇಲುಸ್ತುವಾರಿಗೆ ನೇಮಿಸಲಾಗಿದೆ. ಎಲ್ಲ ಸದಸ್ಯರಿಗೂ ಸೊಳ್ಳೆಪರದೆ, ಹೊದಿಕೆ, ಹೆಲ್ಮೆಟ್, ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ಇತರ ವಿದ್ಯುತ್ ಸುರಕ್ಷಾ ಸಾಮಗ್ರಿಗಳನ್ನು ನೀಡಲಾಗಿದೆ.

     ಚಂಡಮಾರುತಕ್ಕೆ ಸಿಲುಕಿ ಹಾನಿಗೊಳದಾದ ಬೀದಿದೀಪಗಳನ್ನು ಬದಲಿಸುವುದು, ವಿದ್ಯುತ್ ಸಂಪರ್ಕ ಜಾಲವನ್ನು ಮರು ನಿರ್ಮಿಸುವುದು ಅವರ ಆದ್ಯತೆಯಾಗಿದೆ. ಒಡಿಶಾದ ಹಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಕೂಡಲೇ ಸರಿಪಡಿಸಿ, ಸ್ಥಳೀಯ ವಿದ್ಯುತ್ ಸರಬರಾಜು ಸಂಸ್ಥೆಗಳಿಗೆ ನೆರವಿನ ಹಸ್ತ ಚಾಚಲಾಗಿದೆ.ಈ ಕಾರ್ಯದಲ್ಲಿ ಹುಳಿಯಾರು ಬೆಸ್ಕಾಂನ ಚಂದನ್ ಅವರು ತೊಡಗಿರುವುದು ಹೆಮ್ಮೆಯ ಸಂಗತಿಯಾಗಿದ್ದು ಚಂದನ್ ಅವರು ಒಡಿಶಾದಲ್ಲಿ ವಿದ್ಯುತ್ ಜಾಲ ಪುನರ್ ನಿರ್ಮಾಣದಲ್ಲಿ ತೊಡಗಿರುವ ಪೋಟೋಗಳನ್ನು ವಾಟ್ಸ್‍ಪ್, ಫೇಸ್‍ಬುಕ್‍ಗಳಲ್ಲಿ ಇಲ್ಲಿನ ಬೆಸ್ಕಾಂ ಸಿಬ್ಬಂದಿ ಹಾಕಿ ಹೆಮ್ಮೆಪಡುತ್ತಿದ್ದಾರೆ. ಸಾರ್ವಜನಿಕರು ಕೂಡ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link