ಹುಳಿಯಾರು
ಹುಳಿಯಾರಿನಲ್ಲಿ ನ್ಯಾಷನಲ್ ಹೈವೆ 234 ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ರಸ್ತೆಯ ಪಕ್ಕದಲ್ಲಿನ ಚರಂಡಿ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂದು ಕಾಮಶೆಟ್ಟಿಪಾಳ್ಯದ ಚನ್ನಬಸವಯ್ಯ ಆರೋಪಿಸಿದ್ದಾರೆ.ಹುಳಿಯಾರಿನಲ್ಲಿ ಎಸ್ಎಲ್ಆರ್ ಬಂಕ್ನಿಂದ ಒಣಕಾಲುವೆ ಬಳಿಯವರವಿಗೂ ಸರಿಸುಮಾರು 2 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಯ ಎರಡೂ ಇಕ್ಕೆಲಗಳಲ್ಲೂ ಕಾಂಕ್ರಿಟ್ ಚರಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಆದರೆ ಚರಂಡಿ ಮೇಲೆ ಹಾಕಲಾಗುತ್ತಿರುವ ಸ್ಲ್ಯಾಬ್ಗಳು ತೀರ ತೆಳುವಾಗಿದ್ದು ಚರಂಡಿ ಪಕ್ಕದಲ್ಲಿರುವ ಹೋಟೆಲ್, ಅಂಗಡಿಗಳಿಗೆ ಬರುವವರು ಭಾರಿ ವಾಹನ ನಿಲ್ಲಿಸಿದರೂ ಸಾಕು ತುಂಡಾಗುವ ಸಾಧ್ಯತೆಯಿದೆ. ಅಲ್ಲದೆ ಕನಿಷ್ಠ 15 ದಿನ ವಾಟರ್ ಕ್ಯೂರಿಂಗ್ ಮಾಡದೆ ಮೂರ್ನಾಲ್ಕು ದಿನ ಮಾಡಿ ಸುಮ್ಮನಾಗುತ್ತಿದ್ದಾರೆ.ಹಾಗಾಗಿ ಚರಂಡಿಯ ಕಾಮಗಾರಿ ತೀರ ಕಳಪೆಯಿಂದ ಮಾಡುತ್ತಿದ್ದು ಈ ಬಗ್ಗೆ ಹೈವೆ ಎಂಜಿನಿಯರ್ ಸ್ಥಳ ಪರಿಶೀಲನೆ ಮಾಡಿ ಗುಣಮಟ್ಟದ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸುವಂತೆ ಚನ್ನಬಸವಯ್ಯ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
