ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲಿದ ಬಯಲಾಟ ಕಲೆ ಪ್ರೋತ್ಸಾಹಕ್ಕೆ ಮುಂದಾಗಿ

ಚಳ್ಳಕೆರೆ

          ಬರದ ಈ ನಾಡಿನಲ್ಲಿ ಕಲೆಯ ಶ್ರೀಮಂತಿಕೆಯನ್ನು ಸಂರಕ್ಷಣೆ ಮಾಡಿದ ಮಹಾನ್ ಕಲಾವಿದರು ಈ ನಾಡಿನಲ್ಲಿದ್ದು, ಕಲೆಗೆ ಬರವಿಲ್ಲವೆಂಬುವುದನ್ನು ಹಲವಾರು ವಿಧಾನಗಳಲ್ಲಿ ಈಗಾಗಲೇ ಸಾಬೀತು ಪಡಿಸಿದ್ದಾರೆ. ಮುಂದಿನ ಪೀಳಿಗೆ ಸದಾ ಸ್ಮರಿಸುವ ಹಿನ್ನೆಲ್ಲೆಯ ಹಳೆಯ ಜಾನಪದ ಹಾಗೂ ಬಯಲಾಟದ ವಸ್ತುಗಳ ಸಂಗ್ರಹಣೆಯ ಸಂಗ್ರಹಾಕಾರ್ಯಾಲ ಕಟ್ಟಡಕ್ಕ್ಲೆ 15 ಲಕ್ಷ ನೆರವು ನೀಡುವ ಭರವಸೆಯನ್ನು ಶಾಸಕ ಟಿ.ರಘುಮೂರ್ತಿ ನೀಡಿದರು.

         ಅವರು, ಶನಿವಾರ ಇಲ್ಲಿನ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಬಯಲಾಟ ಅಕಾಡೆಮೆ ಬಾಗಿಲಕೋಟೆ ಮತ್ತು ಕಾಲೇಜಿನ ಸ್ನಾತಕೋತ್ತರ ವಿಭಾಗ ಹಮ್ಮಿಕೊಂಡಿದ್ದ ಬಯಲಾಟ ವಿಚಾರ ಮಂಥನ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಗರದ ಎಚ್‍ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಸುವರ್ಣ ಮಹೋತ್ಸವದತ್ತ ದಾಪುಗಾಲಾಕುತ್ತಿದ್ದು, ಇದರ ನೆನಪಿಗಾಗಿ ಸುಮಾರು 4 ಕೋಟಿ ವೆಚ್ಚದಲ್ಲಿ ಎರಡು ಅಂತಸ್ಥಿತ ನೂತನ ಕಟ್ಟವನ್ನು ನಿರ್ಮಿಸಲು ಶೀಘ್ರದಲ್ಲೇ ಅನುಮತಿ ದೊರಕಲಿದೆ.

          ಕಳೆದ ನೂರಾರು ವರ್ಷಗಳಿಂದ ನಾಡಿನ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಬಯಲಾಟ ರಂಗಕಲೆಯನ್ನು ಉಳಿಸುವತ್ತ ಎಲ್ಲರೂ ಗಮನ ನೀಡಬೇಕಿದೆ. ಬಯಲಾಟದ ಪಾತ್ರಗಳು ಬದುಕಿನ ಮೌಲ್ಯಗಳನ್ನು ಸಾರುವುದಲ್ಲದೆ, ಸುಧೀರ್ಘಕಾಲ ಪಾತ್ರಗಳ ಮೆಲಕನ್ನು ಹಾಕುತ್ತಾ ಜೀವನದಲ್ಲಿ ಬದಲಾವಣೆಯನ್ನು ಕಾಣುವ ಅವಕಾಶ ಬಯಲಾಟದಿಂದ ಮಾತ್ರ ಸಾಧ್ಯ. ಇಂತಹ ಮಹಾನ್ ಕಲೆ ಎಂದಿಗೂ ಜನಮಾನಸದಿಂದ ದೂರ ಹೋಗದಂತೆ ಎಲ್ಲರೂ ಜಾಗ್ರತೆ ವಹಿಸಬೇಕೆಂದು ಮನವಿ ಮಾಡಿದ ಅವರು ಸರ್ಕಾರಿ ಎಚ್‍ಪಿಪಿಸಿ ಪ್ರಥಮ ದರ್ಜೆ ಕಾಲೇಜಿಗೆ ಮೂಲಭೂತ ಸೌಕರ್ಯಗಳನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀಡುವುದಾಗಿ ತಿಳಿಸಿದರು.

        ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಮಾತನಾಡಿ, ಇತ್ತೀಚಿನ ದೂರದರ್ಶನ ಹಾಗೂ ಚಲನಚಿತ್ರಗಳ ಹಾವಳಿಯಲ್ಲಿ ಕಲೆಯ ಮೂಲ ಬೇರಾದ ರಂಗಕಲೆ ಹಾಗೂ ಬಯಲಾಟ ಕಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಕಲೆಗಳು ಈ ನಾಡಿನ ಕಲೆಯ ಶ್ರೀಮಂತಿಕೆಯನ್ನು ಎತ್ತಿತೋರಿಸಿವೆ. ನೂರಾರು ವರ್ಷಗಳಿಂದ ಜನರ ಮನದಲ್ಲಿ ಬಯಲಾಟ, ರಂಗಕಲೆ ಭದ್ರವಾಗಿ ನೆಲೆಯೂರಿದ್ದು, ಆಧುನಿಕತೆ ಯಾವುದೇ ರೀತಿಯ ಪರಿಣಾಮ ಬೀರದಂತೆ ಎಲ್ಲಾ ಕಲಾ ರಕ್ಷಕರು ಮುನ್ನೆಚ್ಚರಿಕೆ ವಹಿಸಬೇಕಿದೆ. ರಾಮಾಯಣ, ಮಹಾಭಾರತ, ಸಾಮಾಜಿಕ ಹಾಗೂ ಪೌರಾಣಿಕ ಪಾತ್ರಗಳು ಜನರ ಮೆಚ್ಚುಗೆ ಪಡೆಯುವುದರಲ್ಲಿ ಇಂದಿಗೂ ಯಶಸ್ಸಿಯಾಗಿವೆ. ವಿಶೇಷವಾಗಿ ಇಂತಹ ಕಲೆಗಳು ಜನ್ಮತಾಳಿದ್ದೇ ಗ್ರಾಮಾಂತರ ಪ್ರದೇಶಗಳಲ್ಲಿ ಇಂದಿಗೂ ಸಹ ಗ್ರಾಮೀಣ ಭಾಗಗಳಲ್ಲಿ ಸಂಜೆಯಿಂದ ಬೆಳಗಿನ ತನಕ ಪೌರಾಣಿಕ ನಾಟಕಗಳನ್ನು ನೋಡುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದು ನಮಗೆ ಕಲೆಯ ಮೇಲಿನ ಅಭಿಮಾನವನ್ನು ಎತ್ತಿತೋರುತ್ತದೆ ಎಂದರು.

         ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಬಯಲಾಟ ಅಕಾಡೆಮೆ ಅಧ್ಯಕ್ಷ ಡಾ.ಶ್ರೀರಾಮ ಇಟ್ಟನವರ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನಾಡಿನಲ್ಲಿ ಬಯಲಾಟ ರಂಗಕಲೆ ಸೊರಗದಂತೆ ಅಕಾಡೆಮೆ ವತಿಯಿಂದ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬಯಲಾಟ ಗ್ರಾಮೀಣ ಕಲೆಯ ಪ್ರತಿಬಿಂಬವಾಗಿದೆ. ಆಧುನಿಕತೆಯ ಸೋಗಿನಲ್ಲಿ ಬಯಲಾಟ ಕಲೆಯನ್ನು ನಿರ್ಲಕ್ಷ್ಯೆ ಮಾಡದಂತೆ ಎಲ್ಲರೂ ಜಾಗೃತೆ ವಹಿಸಬೇಕು ಎಂದರು.

          ಪ್ರಾರಂಭದಲ್ಲಿ ಸದಸ್ಯ ಸಂಚಾಲಕ ಡಾ.ಎಸ್.ಎಂ.ಮುತ್ತಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕ ಡಾ.ಮೈಲನಹಳ್ಳಿ ರೇವಣ್ಣ ಆಶಯ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬಯಲಾಟ ಚರಿತ್ರೆ ಸ್ವರೂಪ ವೈಶಿಷ್ಟ್ಯೆ, ಬಯಲಾಟದ ಪ್ರಸ್ತುತ ಸವಾಲು ಸಾಧ್ಯತೆ, ಬಯಲಾಟ ಪ್ರದರ್ಶನ ಮತ್ತು ಸಂವಾದ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಬಿ.ಎಂ.ಗುರುನಾಥ, ಡಾ.ಕೆ.ಚಿತ್ತಯ್ಯ, ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಪ್ರೊ.ಡಿ.ಅಂಜಿನಪ್ಪ ಗೋಷ್ಠಿಗಳಲ್ಲಿ ಭಾಗವಹಿಸಿದ್ದರು. ಪ್ರಾಂಶುಪಾಲ ಪ್ರೊ.ಜಿ.ವೆಂಕಟೇಶ್, ಹಿರಿಯ ರಂಗಕಲಾವಿರಾದ ಪಿ.ತಿಪ್ಪೇಸ್ವಾಮಿ, ಸಣ್ಣ ಸೂರಯ್ಯ, ಬೋರಯ್ಯ, ಸಾಹಿತಿ ಬಿ.ತಿಪ್ಪಣ್ಣ ಮರಿಕುಂಟೆ, ಗ್ರಂಥಪಾಲಕ ಎಸ್.ಪಾಪಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಪ್ರೊ.ಎಂ.ಶಿವಲಿಂಗಪ್ಪ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link