ಶ್ರೀ ಆಂಜನೇಸ್ವಾಮಿ ದೇವಸ್ಥಾನದ ಹುಂಡಿ ಹಣ ಎಣಿಕೆ..!!

ಹೊನ್ನಾಳಿ:

     ತಾಲೂಕಿನ ಸೊರಟೂರು ಗ್ರಾಮದ ಸುಪ್ರಸಿದ್ಧ ಮುಜರಾಯಿ ಇಲಾಖೆ ವ್ಯಾಪ್ತಿಯ ಶ್ರೀ ಆಂಜನೇಸ್ವಾಮಿ ದೇವಸ್ಥಾನದ ಹುಂಡಿಯನ್ನು ಶನಿವಾರ ತೆರೆದು ಎಣಿಕೆ ಮಾಡಲಾಯಿತು

       ಹುಂಡಿ ಹಣ ಎಣಿಕೆ ಕಾರ್ಯಕ್ಕೆ ಚಾಲನೆ ನೀಡಿದ ತಹಸೀಲ್ದಾರ್ ಎಂ. ಮಲ್ಲಿಕಾರ್ಜುನ್, ಸೊರಟೂರು ಗ್ರಾಮದ ಶ್ರೀ ಆಂಜನೇಸ್ವಾಮಿ ದೇವಸ್ಥಾನದ ಹುಂಡಿಯನ್ನು ವರ್ಷಕ್ಕೊಮ್ಮೆ ಗ್ರಾಮಸ್ಥರ ಸಮಕ್ಷಮ ತೆರೆದು ಎಣಿಕೆ ಮಾಡಲಾಗುವುದು ಎಂದು ಹೇಳಿದರು.
ಗ್ರಾಮ ಲೆಕ್ಕಿಗ ಎಸ್.ಎಂ. ಬಸಣ್ಣ, ಗುಮಾಸ್ತ ಮಂಜಪ್ಪ, ಗ್ರಾಮದ ಮುಖಂಡರಾದ ಚಂದ್ರಪ್ಪ, ಹನುಮಂತಪ್ಪ, ಬಸವರಾಜಪ್ಪ, ಪರಸಪ್ಪ ಮತ್ತಿತರರು ಉಪಸ್ಥಿತರಿದ್ದರು.ಎಣಿಕೆ ನಂತರ ಹುಂಡಿಯಲ್ಲಿ ದೊರೆತ ಒಟ್ಟು 3,76,360 ರೂ. ಗಳನ್ನು ಕಂದಾಯ ಇಲಾಖಾಧಿಕಾರಿಗಳು ಬ್ಯಾಂಕಿಗೆ ಜಮಾ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link