ದಾವಣಗೆರೆ:
ಜಗಜಗಿಸುವ ಬೆಳಕಿನಲ್ಲಿ ಅಭಿಮಾನಿಗಳ ಹರ್ಷೋದ್ಘಾರದಲ್ಲಿ ನಾಯಕ ನಟ ಉಪೇಂದ್ರ, ನಟಿ ರಚಿತ ರಾಮ್, ನಿರ್ದೇಶಕ ಆರ್. ಚಂದ್ರು, ಸಂಗೀತ ನಿರ್ದೇಶಕ ಡಾ.ಕಿರಣ್ ತೋಟಂಬೈಲೆ ಸೇರಿದಂತೆ ಮತ್ತಿತರರು ‘ಐ ಲವ್ ಯೂ’ ಚಿತ್ರದ ಧ್ವನಿಸುರಳಿಯನ್ನು ಬಿಡುಗಡೆ ಮಾಡಲಾಯಿತು.
ಹೈಸ್ಕೂಲ್ ಮೈದಾನದಲ್ಲಿ ಸಾವಿರಾರು ಅಭಿಮಾನಿಗಳ ಮಧ್ಯೆಯಲ್ಲಿ ಆರು ಹಾಡುಗಳು ‘ಐ ಲವ್ ಯೂ’ ಚಿತ್ರದಲ್ಲಿದ್ದು, ನಂತರ ಈ ಹಾಡುಗಳಿಗೆ ನಾಯಕ ಉಪೇಂದ್ರ ಮತ್ತು ನಟಿ ರಚಿತ ರಾಮ್ ಹೆಜ್ಜೆ ಹಾಕಿ ಅಭಿಮಾನಿಗಳನ್ನು ರಂಜಿಸಿದರು. ಇದಕ್ಕೂ ಮುನ್ನಾ ಸಂಜೆ 7.30ರಿಂದ ವೇದಿಕೆಯಲ್ಲಿ ಮಯೂರಿ, ಸೋನು ಗೌಡ ಸೇರಿದಂತೆ ಡ್ಯಾನ್ಸ್ ತಂಡಗಳು ನೃತ್ಯ ಪ್ರದರ್ಶಿಸಿದರು. ಸಂಗೀತ ನಿರ್ದೇಶಕ ಗುರುಕಿರಣ್ ತಮ್ಮ ಸ್ನೇಹಿತ ಚಿತ್ರದ ಧ್ವನಿ ಸುರುಳಿ ಬಿಡುಗಡೆಗೆ ಆಗಮಿಸಿ ಶುಭ ಕೋರಿದರು. ಅಷ್ಟೇ ಅಲ್ಲದೆ ತಮ್ಮ ಚಿತ್ರದ ಹಾಡುಗಳನ್ನು ಹಾಡಿ ರಂಜಿಸಿದರು.
‘ಐ ಲವ್ ಯೂ’ ಚಿತ್ರದ ಒಂದಾನೊಂದು ಕಾಲದಿಂದ…ಹಾಡಿನ ಕೊನೆಯ ಭಾಗಕ್ಕೆ ನಾಯಕ ನಟ, ಉಪೇಂದ್ರ ಹಜ್ಜೆ ಇಟ್ಟಾಗ ಅಭಿಮಾನಿಗಳ ಕೇಕೇ ಗಗನ ಮುಟ್ಟಿತ್ತು. ಈ ಹಾಡಿನ ಕೊನೆಯಲ್ಲಿ ನಟಿ ರಚಿತ ರಾಮ್ ಹೆಜ್ಜೆ ಹಾಕಿದರು. ಇದಕ್ಕೂ ಮುನ್ನಾ ಡಿಂಪಲ್ ಕ್ವಿನ್ ಖ್ಯಾತಿಯ ರಚಿತ ರಾಮ್ ಅವರು ಮೈಲಾರಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು. ನಂತರ ಮಾತು ಆರಂಭಕ್ಕೆ ಮುಂದಾದಾಗ ಅಭಿಮಾನಿಗಳ ಕೇಕೇಗೆ ಮನಸೋತ ಅವರ ಅಭಿಮಾನಕ್ಕೆ ಮುಳುಗಿ ಹೋದರು.
ಬೆಣ್ಣೆ ಮನಸ್ಸಿನ ದಾವಣಗೆರೆ ಅಭಿಮಾನಿಗಳಿಗೆ ಧನ್ಯವಾದಗಳು… ಎಂದು ಉಪೇಂದ್ರ ತಮ್ಮ ಮಾತನ್ನು ಆರಂಭಿಸಿ. ‘ಎ’ ಚಿತ್ರದ 100 ದಿನದ ಸಂಭ್ರಮಾಚರಣೆ ಇಲ್ಲಿ ಮಾಡಿದ್ದು ಆಗ ಸಿಕ್ಕಂತಹ ಪ್ರೋತ್ಸಾಹ ಇಂದಿಗೂ ಇದೆ ಎಂದು ಹೇಳಿದರು. ನಟಿ ರಚಿತ ರಾಮ್ ಮಾತನಾಡಿ, ಕುಟುಂಬದ ಎಲ್ಲ ಸದಸ್ಯರೂ ಕುಳಿತು ನೋಡುವ ಚಿತ್ರವಾಗಿದೆ. ಉಪೇಂದ್ರ ಅವರೊಂದಿಗೆ ಮೊದಲ ಬಾರಿ ನಟಿಸಿದ್ದು ಸಂತೋಷ ಉಂಟು ಮಾಡಿದೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ನೀವು ಸಿನಿಮಾ ನೋಡಿ ತೀರ್ಪು ಕೊಟ್ಟರೆ ಮಾತ್ರ ಅದರ ಯಶಸ್ಸಿನ ಗುಟ್ಟು ತಿಳಿಯುತ್ತದೆ ಎಂದರು.ಲಹರಿ ಸಂಸ್ಥೆಯ ವೇಲು ಸೇರಿದಂತೆ ಚಿತ್ರತಂಡ ಭಾಗವಹಿಸಿತ್ತು. ಅನುಶ್ರೀ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/02/04_dvg_02.gif)