ಕೊರೊನಾ ಸೋಂಕಿತರು ಪರಾರಿಯಾದರೆ ಕಾನೂನು ಕ್ರಮ : ಭಾಸ್ಕರ್ ರಾವ್

ಬೆಂಗಳೂರು:

    ಮಾರಣಾಂತಿಕ ಕೊರೊನಾ ವೈರಸ್ ಸೋಂಕಿತರು ಆಸ್ಪತ್ರೆಯಿಂದ ಪರಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿನ ಕೆಲ ಸೋಂಕಿತರು ಆಸ್ಪತ್ರೆಯಿಂದ ಏಕಾಏಕೀ ಪರಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕಿತರು ಪರಾರಿಯಾಗುವ ಬದಲು ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು‌.

   ಕೊರೊನಾ ವೈರಸ್ ಸೋಂಕು ಕುರಿತು ನಿಷ್ಕಾಳಜಿ‌ ವಹಿಸುತ್ತಿರುವ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೆಪಿ‌ ಆ್ಯಕ್ಟ್ 31 (ಎಲ್)ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಆಯುಕ್ತರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.ಇನ್ನು, ಮಾಸ್ಕ್ ಧರಿಸದೇ ಕೆಲಸಕ್ಕೆ ಹಾಜರಾಗಿದ್ದ ಪೊಲೀಸರಿಗೆ ಡಿಸಿಪಿ ನಿಶಾ ಜೇಮ್ಸ್ ತರಾಟೆಗೆ ತೆಗೆದುಕೊಂಡಿರುವ ಘಟನೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದಿದೆ. ಆಯುಕ್ತರ ಕಚೇರಿಯ ಅಡ್ಮಿನ್ ಡಿಸಿಪಿ ನಿಶಾ ಜೇಮ್ಸ್, ಏಕೆ ತಾವು ಮಾಸ್ಕ್ ಧರಿಸಿಲ್ಲ. ಇಲ್ಲಿ ಎಷ್ಟು ಜನ ಇದ್ದೀರಿ ಎಂದು ಪೊಲೀಸರಿಗೆ ಪ್ರಶ್ನಿಸಿದ ಅವರು,‌ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೆಲಸ ಮಾಡಿ ಎಂದು ಖಡಕ್ ಸೂಚನೆ ನೀಡಿರುವುದು ವರದಿ ಆಗಿದೆ

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap