ಅಕ್ಷರಸ್ಥರು ಓದುವ ಹವ್ಯಾಸ ಬಿಟ್ಟರೆ ಅನಕ್ಷರಸ್ಥರಿಗೆ ಸಮ

ಹುಳಿಯಾರು

       ಅಕ್ಷರಸ್ಥರಾಗಿ ಓದುವ ಹವ್ಯಾಸ ಬಿಟ್ಟರೆ ಅನಕ್ಷರಸ್ಥರಿಗೂ ಅಕ್ಷರಸ್ಥರಿಗೂ ವ್ಯತ್ತಾ¸ ಇಲ್ಲದಂತ್ತಾಗಿ ಅಕ್ಷರಸ್ಥರಾಗಿದ್ದರೂ ಅನಕ್ಷರಸ್ಥರಿಗೆ ಸಮನಾಗಿ ಬದುಕಬೇಕಾಗುತ್ತದೆ ಎಂದು ಚಿತ್ರದುರ್ಗ ಜಿಲ್ಲಾ ಆಯುಷ್ ಅಧಿಕಾರಿ ಡಾ.ಟಿ.ಶಿವಕುಮಾರ್ ಅಭಿಪ್ರಾಯಪಟ್ಟರು.

       ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.

        ಟೀವಿ ನೋಡುವುದರಿಂದ ಯೋಚನಾ ಕ್ರಮ ಬದಲಾಗುತ್ತದೆ. ಓದುವುದರಿಂದ ಯೋಚನಾ ಕ್ರಮ ಹೆಚ್ಚಾಗುತ್ತದೆ. ನಿರಂತರ ಓದು ನಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಸಾಧಕರ ಜೀವನ ಚರಿತ್ರೆ ಓದಿದರೆ ಸಾಧಿಸುವ ಛಲ ಬೆಳೆಯುತ್ತದೆ. ಹಾಗಾಗಿಯೇ ದೇಶ ಸುತ್ತು, ಕೋಶ ಓದು ಎಂಬ ನಾಣ್ಣುಡಿಯನ್ನು ಹಿರಿಯರು ರೂಪಿಸಿದ್ದಾರೆ ಎಂದರು.

        ಪರಿಪೂರ್ಣ ಜ್ಞಾನವನ್ನು ಶಾಲಾಕಾಲೇಜಿನ ಪಠ್ಯದಿಂದ ಖಂಡಿತ ಪಡೆಯಲು ಸಾಧ್ಯವಿಲ್ಲ. ಕಾಲೇಜಿನಿಂದ 25 ಭಾಗ, ಸ್ನೇಹಿತರಿಂದ 25 ಭಾಗ, ಸಮಾಜದಿಂದ 25 ಭಾಗ, ಉಳಿದ 25 ಭಾಗವನ್ನು ನಮ್ಮ ಬುದ್ದಿವಂತಿಕೆಯಿಂದ ಲಭಿಸುತ್ತದೆ. ಈ ನಾಲ್ಕು ವಿಭಾಗದಿಂದ ಜ್ಞಾನ ಪಡೆದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವದೊಂದಿಗೆ ಹೊರಹೊಮ್ಮಲು ಸಾಧ್ಯ ಎಂದರು.

        ಗಾಂಧೀಜಿ, ಸುಭಾಷ್, ಕುವೆಂಪು ಹೀಗೆ ಸಾಧಕರ ಬಗ್ಗೆ ಪಠ್ಯದಲ್ಲಿ ಅಳವಡಿಸಿರುವುದು 5 ಅಂಕಗಳ ಪ್ರಶ್ನೆಗೆ ಉತ್ತರಿಸಲಲ್ಲ. ಅವರಲ್ಲಿನ ಜೀವನ ಮೌಲ್ಯಗಳನ್ನು ವಿದ್ಯಾಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಲೆಂದು. ಪ್ರಾಥಮಿಕ ಶಾಲೆಯಿಂದ ಕಾಲೇಜಿನವರೆವಿಗೂ ಪಠ್ಯಕ್ರಮ ಹಂತಹಂತವಾಗಿ ಕ್ಲಿಷ್ಠ ಕರವಾಗಿಟ್ಟಿರುತ್ತಾರೇಕೆಂದರೆ ಕಷ್ಟಗಳನ್ನು ಎದುರಿಸುವ ಆತ್ಮಸ್ಥೈರ್ಯ ಹಂತಹಂತವಾಗಿ ವಿದ್ಯಾರ್ಥಿಗಳಿಗೆ ತುಂಬುವ ಸಲುವಾಗಿ ಎಂದರು. ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಸನ್ನಕುಮಾರ್‍ಮ ಉಪನ್ಯಾಸಕ ಮೋಹನ್ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link