ಹಿಂದೂಗಳು ಒಗ್ಗಟ್ಟಾಗದಿದ್ದರೆ ಇತಿಹಾಸ ಮರುಕಳಿಸುತ್ತದೆ : ಅನಂತ್ ಕುಮಾರ್ ಹೆಗ್ಡೆ

ಮಡಿಕೇರಿ 

         ಹಿಂದೂಗಳು ಒಗ್ಗಟ್ಟಾಗದಿದ್ದರೆ ಏನಾಗುತ್ತದೆ ಎಂಬುದು ಇತಿಹಾಸ ನೋಡಿದರೆ ಅರಿವಾಗುತ್ತದೆ. ಆದ್ದರಿಂದ ಯಾವುದೇ ಜಾತಿಯ ಹಿಂದೂ ಹುಡುಗಿಯ ಕೈ ಮುಟ್ಟಿದರೆ ಆ ಕೈ ಇರಬಾರದು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ರಾಜ್ಯ ಸಚಿವ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

       ಇಲ್ಲಿನ ಮಾದಾಪುರದಲ್ಲಿ ನಡೆಯುತ್ತಿರುವ ಸಾಮಾಜಿಕ ಸಮರಸತಾ ಸಮಾವೇಶ, ಹಿಂದೂ ಐಕ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಹಿಂದೂ ಯುವಕರು ಇತಿಹಾಸ ಬರೆಯಲು ಮುಂದಾಗಬೇಕು. ಪೌರುಷ ಇದ್ದರೆ ಮಾತ್ರ ಇತಿಹಾಸ ಬರೆಯಲು ಸಾಧ್ಯ. ದೇವರಿಗೆ ದುರ್ಬಲರೇ ಬೇಕಾಗಿದ್ದು, ಅದಕ್ಕಾಗಿಯೇ ಕುರಿ-ಕೋಳಿ ಬಲಿ ಕೊಡಲಾಗುತ್ತದೆ. ಆದರೆ ಆನೆ, ಹುಲಿಯನ್ನು ದೇವರಿಗೆ ಬಲಿಕೊಡುತ್ತಾರಾ.? ಆದ್ದರಿಂದ ದುರ್ಬಲರಾಗದೇ ಶೌರ್ಯವಂತರಾಗಿ ಬೆಳೆಯಿರಿ ಅವರು ಎಂದು ಕರೆ ನೀಡಿದರು.

        ಹಿಂದೂ ಸಮಾಜ ಒಟ್ಟಾಗಿ ನಿಲ್ಲದೇ ಇದ್ದರೆ ಮುಂದೆ ಕಷ್ಟವಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅನಂತ್ ಕುಮಾರ್ ಹೆಗಡೆ, ಎಡಪಂಥೀಯರು ಸಮಾಜಕ್ಕೆ ಹಿಡಿದ ದೊಡ್ಡ ಗೆದ್ದಲು, ನಮಗೆ ಗೊತ್ತೇ ಇಲ್ಲದೇ ಸಮಾನತೆ, ಕ್ರಾಂತಿ, ಸ್ವಾತಂತ್ರ್ಯ ಹೆಸರಿನಲ್ಲಿ ಸಮಾಜದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಟೀಕಿಸಿದರು.

        ಶಬರಿಮಲೆಗೆ ಪ್ರವೇಶಿಸಿದ ಮಹಿಳೆಯರು ಕೊಡಗಿನಲ್ಲಿದ್ದರು. ಕೊಡಗಿನಲ್ಲಿ ಸಮಾಜಘಾತುಕ ಶಕ್ತಿಗಳ ಚಟುವಟಿಕೆ ನಡೆಯುತ್ತಿದೆ.ಮಹಿಳೆಯರು ವಾಸ್ತವ್ಯ ಹೂಡಲು ಅವಕಾಶ ದೊರೆತಿರುವುದರ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ ಎನ್ನುವುದು ಇದರಿಂದಲೇ ಗೊತ್ತಾಗುತ್ತದೆ. ಇತ್ತೀಚಿನ ಬೆಳವಣಿಗಳಿಂದ ಶಬರಿಮಲೆಗೆ 95 ಕೋಟಿ ರೂ. ಕಾಣಿಕೆ ಕಡಿಮೆ ಆಗಿದೆ.ಶೇ.36 ರಷ್ಟು ಪ್ರವಾಸಿಗರ ಸಂಖ್ಯೆ ಕುಸಿತಗೊಂಡಿದೆ .ಆದ್ದರಿಂದ ಮನೆಮುರುಕರು ಕೊಡಗು ಪ್ರವೇಶಿಸಿದರೆ ಮಣ್ಣಲ್ಲಿ ಮಣ್ಣಾಗಿಸಿ ಎಂದರು.

       ಕೊಡಗಿನಲ್ಲಿ ಕೊಚ್ಚಿ ಹೋಗಿರುವ ಮನೆ,ಮಸೀದಿ ನಿರ್ಮಾಣ ಮಾಡಲು ಸರ್ಕಾರ ಬರುತ್ತದೆ. ಆದರೆ ದೇವಾಲಯ ನಿರ್ಮಾಣ ಮಾಡಲು ಯಾರು ಬರುವುದಿಲ್ಲ. ಇದಕ್ಕಾಗಿಯೇ ನಾವು ಇಲ್ಲಿಗೆ ಬಂದಿದ್ದೇವೆ. ಸಮಾಜದೊಂದಿಗೆ ಸೇರಿ ನಿರ್ಮಾಣ ಮಾಡೋಣ. ದೇವಾಲಯ ಕೇವಲ ಕಟ್ಟಡ ಅಲ್ಲ, ಅದು ಭಾವನೆಗಳ ಆಲಯ, ಶಿವ ಅಂದರೆ ಲಿಂಗವಷ್ಟೇ ಅಲ್ಲ ಸೃಷ್ಟಿಯ ಧನಾತ್ಮಕ ಶಕ್ತಿಗೆ ಶಿವ ಅಂತ ಕರೆಯುತ್ತಾರೆ. ಶಿವನಿಗೆ ಯಾವುದೇ ಆಕಾರ ಇಲ್ಲ, ಆಕಾರಗಳಿಲ್ಲದ್ದೇ ಶಿವ ಎಂದರು.

      ತಾಜ್‍ಮಹಲ್ ಶಹಜಹಾನ್ ನಿರ್ಮಾಣ ಮಾಡಿದ್ದ ಎಂದು ಹೇಳುತ್ತಾರೆ.ಆದರೆ ಶಹಜಹಾನ್ ತನ್ನ ಆತ್ಮ ಚರಿತ್ರೆಯಲ್ಲಿ ಇದನ್ನು ಹಿಂದೂ ರಾಜ ರಾಜಾ ಜಯಸಿಂಹನಿಂದ ಕೊಂಡು ಕೊಂಡ ಕಟ್ಟಡ ಎಂದು ಬರೆದುಕೊಂಡಿದ್ದಾನೆ. ಇದನ್ನು ತಿಳಿಯಲು ಇತಿಹಾಸವನ್ನು ಓದಬೇಕಾಗುತ್ತದೆ.

        ದೆಹಲಿಯ ಕುತುಬ್ ಮಿನಾರ್ ಅನ್ನು ಮುಸ್ಲಿಂ ರಾಜ ನಿರ್ಮಾಣ ಮಾಡಿದ್ದು ಎಂದು ಇತಿಹಾಸ ತಜ್ಙರು ಹೇಳಿದ್ದಾರೆ. ಆದರೆ ಇದಕ್ಕೆ ಭಾರತ ಪ್ರಾಚ್ಯ ವಸ್ತು ಇಲಾಖೆ ಜೈನರ 24 ನಕ್ಷತ್ರಗಳ ದೇವಾಲಯವಾಗಿತ್ತು, ಇದನ್ನು ಮುಸ್ಲಿಂ ದಾಳಿಕೋರರು ನಾಶ ಮಾಡಿದ್ದರು ಎಂದು ಬೋರ್ಡ್ ಹಾಕಿದೆ. ಈ ಬೋರ್ಡ್ ಮೋದಿ ಸರ್ಕಾರ ಬಂದ ಮೇಲೆ ಹಾಕಿದ್ದಲ್ಲ. ಹೀಗೆ ನಮ್ಮ ಸಮಾಜದ ಗುರುತನ್ನು ಅಳಿಸಿ ಹಾಕುವ ಪ್ರಯತ್ನಗಳು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಕಿಡಿಕಾರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link