ಮಂಡ್ಯ : ನಿಖಿಲ್ ಪರ ಮತ ಕೇಳೊಕೆ ಹೋದ್ರೆ ಜನ ಬೈತಾರೆ: ಪ್ರಸನ್ನ

ಮಂಡ್ಯ:
         ಜೆಡಿಎಸ್ ಪರ ಮತಯಾಚನೆಗೆ ಹೋದರೆ ಮಂಡ್ಯ ಜನ ನಮ್ಮನ್ನು ಅಟ್ಟಾಡಿಸಿಕೊಂಡು ಹೊಡಿತಾರೆ, ಕೈ ಕಾರ್ಯಕರ್ತರೆಲ್ಲಾ ಅಂಬಿ  ಪರವಾಗಿದ್ದಾರೆ, ಹೀಗಾಗಿ ನಿಖಿಲ್ ಪರ ಮತ ಯಾಚನೆ ಕಷ್ಟ ಸಾಧ್ಯ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ತಿಳಿಸಿದ್ದಾರೆ.  
         ಪ್ರಸನ್ನ ಅವರು ಮಾಜಿ ಸಚಿವ ಎನ್ ಚಲುವರಾಯ ಸ್ವಾಮಿ ಅವರ ಆಪ್ತರಾಗಿದ್ದು, ಮಂಡ್ಯ ಕ್ಷೇತ್ರದಿಂದ ಸುಮಲತಾ ಅವರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ ನಮಗಿದೆ, ಒಂದು ವೇಳೆ  ನಾವು ಜೆಡಿಎಸ್ ಪರ ಮಾತಯಾಚಿಸಲು ಹೋದ್ರೆ ಜನ ನಮಗೆ ಹೊಡೆಯಲು ಬರುತ್ತಾರೆ, ಹೀಗಾಗಿ ಸುಮಲತಾ ಗೆ ಟಿಕೆಟ್ ಸಿಗುತ್ತದೆ ಎಂದು ನಾವು ಅವರಿಗೆ ಸಮಾಧಾನ ಮಾಡುತ್ತಿದ್ದೇವೆ.
         ಹೊರಗಿನಿಂದ ಬಂದವರ ಪರ ಮತಯಾತಿಸಬಾರದು ಎಂದು ನಮ್ಮನ್ನು ಹೆದರಿಸುತ್ತಾರೆ. ಹೈಕಮಾಂಡ್ ಎಚ್ಚರಿಕೆ ನೀಡಿದ್ದರೂ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುತ್ತಿಲ್ಲ, ಹೀಗಾಗಿ ಸ್ಥಳೀಯರನ್ನು ವಿರೋಧಿಸಿ ನಾವು ಮತಯಾಚನೆ ಮಾಡಲು ಸಾಧ್ಯವಿಲ್ಲ,  ಕುಮಾರ ಸ್ವಾಮಿ ಅವರಿಗೆ ಅಂಬರೀಷ್ ಅವರ ಮೇಲೆ ಅಪಾರ ಪ್ರೀತಿ ಗೌರವವಿದೆ, ಹೀಗಾಗಿ ಸುಮಲತಾ ಅವರಿಗೆ ಟಿಕೆಟ್ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತ ಪಡಿಸಿದ್ಜಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap