ಕಾಂಗ್ರೆಸ್ ಮುಖಂಡನಿಂದ ಅಕ್ರಮ ಮರಳುಗಣಿಗಾರಿಕೆ?

ಬೆಂಗಳೂರು:

           ಬೇಲೂರು ತಾಲೂಕಿನ ಗೆಂಡೇಹಳ್ಳಿ ರಸ್ತೆಯ ಗಬ್ಬಲಗೋಡು ಮತ್ತು ಪಟ್ಟಣದ ನೆಹರೂ ನಗರದ ಬಳಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

        ದಯಾನಂದ್, ಪ್ರದೀಪ್ , ಲೋಕೇಶ್ ಮತ್ತು ರಾಜು ಬಂಧಿತ ಆರೋಪಿಗಳು. ಪಿಎಸ್‍ಐ ಜಗದೀಶ್ ಮತ್ತು ಸಿಬ್ಬಂದಿಗಳು ಬೇಲೂರಿನ ನೆಹರೂ ನಗರ ಮತ್ತು ಗಬ್ಬಲಗೋಡು ಬಳಿ ಕಾವಲಿನಲ್ಲಿದ್ದ ವೇಳೆ ಪರವಾನಗಿ ಇಲ್ಲದೆ ಟಿಪ್ಪರ್ ಲಾರಿಗಳಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆಂಬ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 2 ಟಿಪ್ಪರ್ ಲಾರಿಗಳ ಸಮೇತ ಮರಳನ್ನು ವಶಪಡಿಸಿಕೊಂಡಿದ್ದಾರೆ.

         ಎರಡು ಲಾರಿಗಳ ಪೈಕಿ ಒಂದು ಟಿಪ್ಪರ್ ಲಾರಿ ಬೇಲೂರಿನ ಪ್ರಭಾವಿ ಕಾಂಗ್ರೆಸ್ ಮುಖಂಡರಿಗೆ ಸೇರಿದ್ದಾಗಿದೆ ಎಂದು ಹೇಳಲಾಗುತ್ತಿದ್ದು, ಸಾಗಣೆಗೆ ಬಳಸಲಾಗಿರುವ ಟಿಪ್ಪರ್ ಲಾರಿಗಳ ಮಾಲೀಕರು ಯಾರು ಎಂಬುದನ್ನು ಆರ್‍ಟಿಒ ಅಧಿಕಾರಿಗೆ ಪತ್ರ ಬರೆದು ಮಾಹಿತಿ ಪಡೆದ ನಂತರ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಪಿಎಸ್‍ಐ ಜಗದೀಶ್ ಹೇಳಿದ್ದಾರೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link