ತಿಪಟೂರು :
ಸಾರ್ವಜನಿಕ ವಲಯದಲ್ಲಿ ಲೈನಸ್ಸ್ಯಿಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದ ಹಾಗೂ ಸಾಗಣಿಕೆ ಮಾಡುತ್ತಿದ್ದ ವ್ಯಕ್ತಿ ಹಾಗೂ ಅಂಗಡಿಗಳ ಮೇಲೆ ಅಬಕಾರಿ ಇಲಾಖೆ ಹಾಗೂ ಪೋಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಮಧ್ಯವನ್ನು ವಶಪಡಿಸಿಕೊಂಡು ನ್ಯಾಯಲಾಯಕ್ಕೆ ಒಪ್ಪಿಸಿದ ಅನಧಿಕೃತ ಮಧ್ಯವನ್ನು ಬಿದರೆಗುಡಿಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ ನಾಶ ಮಾಡಲಾಯಿತು.
ತಿಪಟೂರು ತಾಲ್ಲೂಕಿನ 185 ಪ್ರಕರಣಗಳಲ್ಲಿ 1054.710 ಲೀಟರ್ ಮಧ್ಯ, 20.460 ಲೀಟರ್ ಬೀಯರ್ ಹಾಗೂ ತುರವೇಕೆರೆ ತಾಲ್ಲೂಕಿನ 58 ಪ್ರಕರಣಗಳಲ್ಲಿ 74.160 ಲೀಟರ್ ಮದ್ಯ, 12.900ಲೀಟರ್ ಬೀಯರ್ ಮೇಲೆ ದಾಳಿ ನೆಡಸಿ ಸುಮಾರು ಮೂರು ಲಕ್ಷದ ಐವತ್ತು ಸಾವಿರಕ್ಕೂ ಹೆಚ್ಚು ಮೌಲ್ಯದ ಅನಧಿಕೃತ ಮದ್ಯ ಹಾಗೂ ಬೀಯರ್ನನ್ನು ನಾಶಮಾಡಲಾಗಿದೆ ಎಂದು ತಿಪಟೂರು ಅಬಕಾರಿ ಉಪಧೀಕ್ಷಕರಾದ ಎಮ್ ರಂಗಪ್ಪ ತಿಳಿಸಿದರು.
ಅಬಕಾರಿ ಇನ್ಸ್ಪೆಕ್ಟರ್ ಕೃಷ್ಣಸ್ವಾಮಿ, ತುರವೇಕೆರೆ ಅಬಕಾರಿ ಇನ್ಸ್ಪೆಕ್ಟರ್ ಆನಂದ್, ಕೆ.ಎಸ್.ಬಿ.ಸಿ.ಎಲ್ ವ್ಯವಸ್ಥಾಪಕ ಸುಧೀಂದ್ರಕುಮಾರ್, ಕಂದಾಯ ಇಲಾಖೆಯ ರವಿಕುಮಾರ್, ಅಬಕಾರಿ ಸಿಬ್ಬಂದಿ ಮತ್ತಿತ್ತರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ