ಬೆಂಗಳೂರು
ಪ್ರಜಾಪ್ರಭುತ್ವದಲ್ಲಿ ಸರ್ಕಾರ ಲೆಕ್ಕವನ್ನು ಯಾರಿಗೆ ಕೊಡಬೇಕು? ಜನಪ್ರತಿ ನಿಧಿಗಳಿಗೆ, ಜನರಿಗೆ ಉತ್ತರ ಕೊಡಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿ ಸಿದ್ದಾರೆ.
ಲೆಕ್ಕ ಕೇಳುವ ಕಾಂಗ್ರೆಸ್ ನವರಿಗೆ ಕೆಲಸ ಇಲ್ಲ ಎಂಬ ಸುಧಾಕರ್ ಹೇಳಿಕೆ ವಿಚಾರ ಸುದ್ದಿಗಾರರ ಜತೆ ಮಾತನಾಡಿ ದ ಅವರು,ಸಚಿವ ಸುಧಾಕರ್ ಹೆಂಗಾದ್ರೂ ಮಾತಾಡಲಿ ಆದರೆ ಸರ್ಕಾರ ಉತ್ತರದಾಯಿತ್ವ.ನಾನು ವಿಪಕ್ಷ ನಾಯ ಕನಾಗಿ ಸರ್ಕಾರಕ್ಕೆ ಲೆಕ್ಕ ಕೊಡಿ ಅಂತ ಕೇಳಿದ್ದೇನೆ.ನಾನು ಮೂರು ಭಾರಿ ಪತ್ರ ಬರೆದಿದ್ದೀನಿ.ಉತ್ತರ ಕೊಟ್ಟಿ ದ್ದಾರಾ? ನಿನ್ನೆ ಸಿಎಂ ಅವರು ಸುಳ್ಳೇ ಹೇಳಿರುವುದು.ದುಡ್ಡು ಹೊಡೆಯುವು ದರಲ್ಲಿ ಸಹಕಾರ ಇಲ್ಲ,ಜನರ ಜೀವ ಉಳಿಸಲು ಸಹಕಾರ ಇದೆ ಎಂದು ಸಚಿವರಿಗೆ ಹಾಗೂ ಮುಖ್ಯಮಂತ್ರಿಗೆ ತಿರುಗೇಟು ನೀಡಿದರು.
ಸರ್ಕಾರ ಬೀಳುವುದಕ್ಕೆ ಸಿದ್ದೌಷಧ ಕಾರಣ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ,ಅದೆಲ್ಲ ಮುಗಿದು ಹೋದ ಕಥೆ. ಯಾಕೆ ಈಗ ಅವರು ರಿಕಾಲ್ ಮಾಡಿಕೊಳ್ತಿದ್ದಾರೋ ಗೊತ್ತಿಲ್ಲ.ಸಮ್ಮಿಶ್ರ ಸರ್ಕಾರ ಹೊಯ್ತು,ಬಿಜೆ ಪಿ ಸರ್ಕಾರ ಇದೆ.ಇವರ ಬಗ್ಗೆ ಮಾತಾಡೋದು ಬಿಟ್ಟು ಕುಮಾರಸ್ವಾಮಿ ಬಗ್ಗೆ ನಾನ್ಯಾಕೆ ಮಾತಾಡಲಿ? ಅವರ ತಾತ್ಪರ್ಯವೆಲ್ಲ ನಂಗೆ ಅರ್ಥವಾಗಲ್ಲ, ಇವರ ಬರೆದಿರೋ ಕನ್ನಡವೆಲ್ಲ ಅರ್ಥವಾಗಲ್ಲ ಎಂದು ಲೇವಡಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ