ದಾವಣಗೆರೆ:
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮಧುರನಾಯಕನಹಳ್ಳಿ, ಮಲ್ಲಿಗೇನಹಳ್ಳಿ, ಗುಡ್ಡದಕೊಮಾರನಹಳ್ಳಿ, ಹಾಲೇಶಪುರ ಹಾಗೂ ಗುಡ್ಡದಬೆನಕನಹಳ್ಳಿ ಗ್ರಾಮಗಳಲ್ಲಿ ಭಾನುವಾರ ಸಂಸದ ಜಿ.ಎಂ.ಸಿದ್ದೇಶ್ವರರವರು ಸಂಸದರ ಅನುದಾನದಲ್ಲಿ ನಿರ್ಮಿಸಲುದ್ದೇಶಿಸಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸಮುದಾಯ ಭವನ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ, ಜಿಲ್ಲಾ ಪಂಚಾಯತ್ ಸದಸ್ಯ ಲೋಕೇಶ್, ಎ.ಪಿ.ಎಂ.ಸಿ. ಸದಸ್ಯರಾದ ಜಗನ್ನಾಥ್, ಬಿ.ಜೆ.ಪಿ. ಮುಖಂಡರಾದ ಹನುಮಂತ ನಾಯ್ಕ, ತ್ಯಾವಣಗಿ ಕೃಷ್ಣಪ್ಪ, ಮಲ್ಲಿಗೇನಹಳ್ಳಿ ಹಾಲೇಶ್, ದಾಗಿನಕಟ್ಟೆ ಶಾಂತಣ್ಣ, ಶಂಕ್ರಣ್ಣ, ಶೇಖರಣ್ಣ, ತೋಳಹುಣಸೇ ಮಂಜನಾಯ್ಕ, ಬಸವನಗೌಡ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/g.m.siddeshwar.jpg)