ಹರಪನಹಳ್ಳಿ :
ತಾಲ್ಲೂಕಿನ ಅರಸಿಕೆರೆ ಗ್ರಾಮದಲ್ಲಿ ನಡೆಯುತ್ತಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಿಪಿಐ ದುರುಗಪ್ಪ ಮಾರ್ಗದಲ್ಲಿ ಬೈಕ್ನಿಂದ ಬಿದ್ದ ಮಹಿಳೆಯನ್ನು ಕೂಡಲೇ ಅಸ್ಪತ್ರೆಗೆ ತಮ್ಮ ಜೀಪಿನಲ್ಲೇ ಸಾಗಿಸಿ ಪ್ರಾಣ ರಕ್ಷಿಸಿ ಮಾನವೀಯತೆ ಮೆರೆದ ಪೊಲೀಸಪ್ಪ ಎಂದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಹರಪನಹಳ್ಳಿಯಿಂದ ಅಲೂರು ಗ್ರಾಮಕ್ಕೆ ಬೈಕ್ನಲ್ಲಿ ಪ್ರಯಾಣ ಮಾಡುತ್ತಿದ್ದ ರೇಣುಕಮ್ಮ ಎಂಬವರು ತಾಲ್ಲೂಕಿನ ಹಿಕ್ಕಿಂಗೇರಿ ಕ್ರಾಸ್ ಬಳಿ ಜಾರಿಬಿದ್ದಾರೆ. ಇದರಿಂದ ತಲೆಗೆ ಪೆಟ್ಟುಬಿದ್ದು ನರಳುತ್ತಿದ್ದರು. ಇದನ್ನು ನೋಡುತ್ತಿದ್ದ ನಾಲ್ಕರು ಜನ ಸಹಾಯಕ್ಕೆ ಕಾತುರಾಗಿದ್ದರು. ಇದೇ ಮಾರ್ಗದಲ್ಲಿ ಸಾಗುತ್ತಿದ್ದ ಸಿಪಿಐ ರಸ್ತೆಯಲ್ಲಿ ಕಂಡು ಬಂದ ದೃಶ್ಯವನ್ನು ಮನಗಂಡು ಕೂಡಲೇ ಗಾಯಳುವನ್ನು ಅರಸಿಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತಕ್ಷಣ ಚಿಕಿತ್ಸೆ ಲಭಿಸಿದ ಪರಿಣಾಮ ಗಾಯಳು ರೇಣುಕಮ್ಮ ಚೇತರಿಸಿಕೊಂಡಿದ್ದಾರೆ.
ಸಿಪಿಐ ದುರಗಪ್ಪ ಮಾತನಾಡಿ ಪೊಲೀಸರ ಕರ್ತವ್ಯವನ್ನು ಮಾಡಿದ್ದೇನೆ. ರಸ್ತೆ ಅಪಘಾತದಲ್ಲಿ ನೊಂದವರಿಗೆ ನೆರವು ನೀಡುವುದು ನಮ್ಮ ಕೆಲಸ ಅದನ್ನು ಮಾಡಿದ್ದೇನೆ. ಸರ್ಕಾರಿ ಕಾರ್ಯಕ್ರಮಕ್ಕೆ ಹಾಜರಾಗುವ ಆತುರದಲ್ಲಿ ನಮ್ಮ ಕರ್ತವ್ಯವನ್ನು ಪಾಲಿಸಿದ್ದೇನೆ. ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ನೀಡಲು ಸಾರ್ವಜನಿಕರು ಸಹಕರಿಸಬೇಕು ಇಂದರಿಂದ ಎಷ್ಟೋ ಕುಟುಂಬಗಳ ನೆಮ್ಮದಿ ಕಾಪಾಡಿದ ಶ್ರೆಯಸ್ಸು ದೊರಕುತ್ತದೆ ಎಂದರು. ಮಾನವೀಯತೆ ಮೆರೆದ ಪೊಲೀಸರಿಗೆ ಗಾಯಳು ಸೇರಿದಂತೆ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ