ಚಿಕ್ಕಮಗಳೂರು:
ನ.10 ರಂದು ಟಿಪ್ಪು ಜಯಂತಿಯನ್ನು ಮಾಡುತ್ತೇವೆ ಎಂದು ಸರಕಾರ ಸಷ್ಟಪಡಿಸಿದ ಬೆನ್ನಲ್ಲೇ ಶಾಸಕ ಸಿಟಿ ರವಿ ಹರಿಹಾಯ್ದಿದ್ದಾರೆ.
ಟಿಪ್ಪು ಜಯಂತಿಯನ್ನು ಯಾಕೆ ಮಾಡುತ್ತಾರೆ? ಟಿಪ್ಪು ಇವರ ಅಪ್ಪಾನಾ, ತಾತನಾ, ಮುತ್ತಾತನಾ? ಎಂದು ಹೇಳುವ ಮೂಲಕ ಸಿ.ಟಿ.ರವಿ ಟಿಪ್ಪು ಜಯಂತಿ ಆಚರಣೆ ಕುರಿತು ಮೈತ್ರಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸುದ್ದಿಗಾರರೊಂದಿಗು ಮಾತನಾಡಿ, ಟಿಪ್ಪು ಕನ್ನಡಕ್ಕೆ ಕೊಡುಗೆ ಕೊಟ್ಟವನಾ? ಆಕ್ರಮಣಕಾರಿಯ ಜಯಂತಿ ಆಚರಿಸುವುದಾದರು ಏಕೆ? ಇವರನ್ನ ಹೀಗೆ ಬಿಟ್ಟರೆ ಬಾಬರ್ ಜಯಂತಿ, ಘಜ್ನಿ ಮೊಹಮ್ಮದ್ ಜಯಂತಿ, ಉಗ್ರ ಒಸಮಾ ಬಿನ್ ಲಾಡೆನ್ ಜಯಂತಿನೂ ಮಾಡುತ್ತಾರೆ ಎಂದರು.
ವೋಟ್ ಜಾಸ್ತಿಯಾಗುತ್ತೆ ಎಂದು ಬಿನ್ ಲಾಡೆನ್ ಜಯಂತಿ ಮಾಡಿದ್ರೆ ಜನ ಸುಮ್ಮನೆ ಬಿಡುತ್ತಾರಾ ಎಂದು ಟಿಪ್ಪು ಜಯಂತಿಗೆ ಮುಂದಾದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
